
ಉತ್ತರಖಂಡ(ಜೂ.22): ಭಾರತ ಹಾಗೂ ಚೀನಾ ಗಡಿ ಬಳಿಯ ಸೇತುವೆ ಮೇಲೆ ಭಾರಿ ಗಾತ್ರದ ಲಾರಿಯೊಂದು ದಾಟುವ ಪ್ರಯತ್ನ ಮಾಡಿದೆ. ಇನ್ನೇನು ದಡ ಸೇರಬೇಕು ಅನ್ನುವಷ್ಟರಲ್ಲೇ ಭಾರ ತಡೆಯಲಾರದೆ ಸೇತುವೆ ಕುಸಿದಿದೆ. ಇದರಿಂದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ದ್ವೀಪ ನಮ್ಮದೆಂದು ಶಿಪ್ ಕಳಿಸಿದ ಚೀನಾಕ್ಕೆ ಜಪಾನ್ ಕೊಟ್ಟ 'ಬಹುಮಾನ'!..
ಉತ್ತರಖಂಡದ ಬಳಿ ಚೀನಾ ಜೊತೆ ಗಡಿ ಹಂಚಿಕೊಂಡಿರುವ ಲೀಲಂ ಜೋಹರ್ ವ್ಯಾಲಿಯ ಮಿಲಂ ರೋಡ್ನಲ್ಲಿ ಈ ಅಪಘಾತ ನಡೆದಿದೆ. ಕಾಮಗಾರಿಗಾಗಿ ಜೆಸಿಬಿ ಹೊತ್ತ ಲಾರಿ ಸೇತುವೆ ಬಳಿ ನಿಧಾನವಾಗಿ ದಾಟಲು ಪ್ರಯತ್ನ ಮಾಡಿದೆ. ಬಹುತೇಕ ಸೇತುವೆ ದಾಟಿದ ಲಾರಿ, ಇನ್ನೊಂದು ನಿಮಿಷದಲ್ಲಿ ಸಂಪೂರ್ಣ ಸೇತುವೆ ದಾಟಿ ದಡ ಸೇರುತ್ತಿತ್ತು. ಆದರೆ ಭಾರ ತಡೆಯಲಾಗದೆ ಸೇತುವೆ ಕುಸಿದಿದೆ.
ಘಟನೆಯಲ್ಲಿ ಲಾರಿ ಚಾಲಕ, ಲಾರಿ ಕ್ಲೀನರ್ ಹಾಗೂ ಲಾರಿ ಹಿಂಬಾಗದಲ್ಲಿ ನಡೆದುಕೊಂಡು ಬಂದ ಲಾರಿ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇತುವೆ ಕುಸಿದ ಕಾರಣ ಲಾರಿ ಕಂದಕ್ಕೆ ಉರುಳಿದೆ. ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ಹೀಗಾಗಿ ಗಂಭೀರ ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ