ಕೊರೋನಾ ಚಿಕಿತ್ಸೆಗೆ ಬೆಂಗಳೂರಿನ ಔಷಧ: ಕೇಂದ್ರದಿಂದಲೂ ಅನುಮತಿ!

Published : Jul 12, 2020, 08:15 AM ISTUpdated : Jul 12, 2020, 01:25 PM IST
ಕೊರೋನಾ ಚಿಕಿತ್ಸೆಗೆ ಬೆಂಗಳೂರಿನ ಔಷಧ: ಕೇಂದ್ರದಿಂದಲೂ ಅನುಮತಿ!

ಸಾರಾಂಶ

ಕೊರೋನಾ ಚಿಕಿತ್ಸೆಗೆ ಬೆಂಗಳೂರಿನ ಔಷಧ| ಬಯೋಕಾನ್‌ನ ‘ಇಟೋಲಿಜಮ್ಯಾಬ್‌’ ಬಳಕೆ| ಕೇಂದ್ರ ಸರ್ಕಾರದಿಂದ ಅನುಮತಿ| ಚರ್ಮರೋಗ ಸೋರಿಯಾಸಿಸ್‌ಗೆ ಬಳಸುವ ಔಷಧ| ತುರ್ತು ಸ್ಥಿತಿಯಲ್ಲಿ ನಿಯಂತ್ರಿತ ರೀತಿಯಲ್ಲಿ ಬಳಕೆ

ನವದೆಹಲಿ(jಜು.12): ಸಾಧಾರಣದಿಂದ ಗಂಭೀರ ಪ್ರಮಾಣದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಕೊರೋನಾ ಸೋಂಕಿತರಿಗೆ ಬೆಂಗಳೂರಿನ ಬಯೋಕಾನ್‌ ಸಂಸ್ಥೆಯ ಚರ್ಮರೋಗ ಔಷಧ ‘ಇಟೋಲಿಜುಮ್ಯಾಬ್‌’ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆದರೆ ಈ ಔಷಧವನ್ನು ಅತ್ಯಂತ ತುರ್ತು ಸ್ಥಿತಿಯಲ್ಲಿ ಹಾಗೂ ನಿಯಂತ್ರಿತ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂಬ ಷರತ್ತು ವಿಧಿಸಿದೆ.

"

ಸಕ್ರಿಯ ಕೇಸು ಹೆಚ್ಚಳದಲ್ಲಿ ದೇಶದಲ್ಲಿ ಕರ್ನಾಟಕವೇ ನಂ.1!

ಚರ್ಮರೋಗ ಸೋರಿಯಾಸಿಸ್‌ಗೆ ಬಳಸುವ ಈ ಔಷಧವನ್ನು ಸೈಟೋಕಿನ್‌ ಬಿಡುಗಡೆಯಿಂದಾಗಿ ಉಂಟಾಗುವ ತೀವ್ರ ಉಸಿರಾಟದ ತೊಂದರೆಗೆ ಬಳಸುವ ಕುರಿತು ಬಯೋಕಾನ್‌ ಕಂಪನಿ 2ನೇ ಹಂತದ ಕ್ಲಿನಿಕಲ್‌ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತ್ತು. ಪ್ರಯೋಗದ ವರದಿಯನ್ನು ಸಂಸ್ಥೆಯು ಕೇಂದ್ರ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಿತ್ತು. ಪ್ರಾಧಿಕಾರವು ಇದನ್ನು ತಜ್ಞರ ಸಮಿತಿಗೆ ಪರಿಶೀಲನೆಗೆ ಒಳಪಡಿಸಿ, ಅನುಮೋದನೆ ಪಡೆದುಕೊಂಡಿದೆ. ನಂತರ ಕೋವಿಡ್‌ ಸೋಂಕಿತರಿಗೂ ಈ ಔಷಧ ಬಳಸಲು ಶುಕ್ರವಾರ ಅನುಮತಿ ನೀಡಿ ಆದೇಶ ಹೊರಡಿಸಿದೆ.

ಕಳ್ಳರನ್ನು ಕಂಡರೇ ಪೊಲೀಸರಿಗೆ ಭಯ, ಆರೋಪಿಗಳಿಂದ ಬರುತ್ತಿದೆ ಕೊರೋನಾ!

ಬಯೋಕಾನ್‌ ಕಂಪನಿಯು 2013ರಿಂದಲೂ ಭಾರತದಲ್ಲಿ ಈ ಔಷಧವನ್ನು ಅಲ್ಜುಮ್ಯಾಬ್‌ ಹೆಸರಿನಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದನ್ನು ಕೊರೋನಾ ರೋಗಿಗಳ ಸಮ್ಮತಿಯ ಮೇರೆಗೆ, ಅಪಾಯ ನಿರ್ವಹಣಾ ಯೋಜನೆಗೆ ಒಳಪಟ್ಟಂತೆ, ಆಸ್ಪತ್ರೆಯ ವ್ಯವಸ್ಥೆಯ ಇರುವ ಕಡೆ ಬಳಕೆ ಮಾಡಲು ಇದೀಗ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!