ಅನಂತ್‌ನಾಗ್‌ ಎನ್‌ಕೌಂಟರ್‌ ಬೆನ್ನಲ್ಲೇ ಸರ್ಕಾರದ ಬಿಗ್‌ ನಿರ್ಧಾರ, ಕಾಶ್ಮೀರಕ್ಕೂ ಇನ್ನು ಕೋಬ್ರಾ ಕಾವಲು!

Published : Sep 18, 2023, 06:38 PM IST
ಅನಂತ್‌ನಾಗ್‌ ಎನ್‌ಕೌಂಟರ್‌ ಬೆನ್ನಲ್ಲೇ ಸರ್ಕಾರದ ಬಿಗ್‌ ನಿರ್ಧಾರ, ಕಾಶ್ಮೀರಕ್ಕೂ ಇನ್ನು ಕೋಬ್ರಾ ಕಾವಲು!

ಸಾರಾಂಶ

ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೋ ಪಡೆಗಳ ವಿಶೇಷ ಘಟಕವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗಿದೆ. ಭಯೋತ್ಪಾದಕರು ಕಾಡುಗಳು ಮತ್ತು ಪರ್ವತಗಳಲ್ಲಿ ಅಡಗಿಕೊಂಡು ಭದ್ರತಾ ಪಡೆಗಳ ಮೇಲೆ ದಾಳಿ ಮಾಡುವ ವಿಧಾನಗಳ ಮೇಲೆ ಕೋಬ್ರಾ ವಿಶೇಷ ಕಣ್ಣಿಟ್ಟಿದೆ. ಕೋಬ್ರಾ ಕಮಾಂಡೋಗಳು ಕಾಡಿನಲ್ಲಿ ಅಡಗಿಕೊಂಡು ಮಾಡುವ ದಾಳಿಗಳಲ್ಲಿ ಮತ್ತು ಗೆರಿಲ್ಲಾ ಯುದ್ಧದಲ್ಲಿ ಪರಿಣತಿಯನ್ನು ಹೊಂದಿದೆ.  

ನವದೆಹಲಿ (ಸೆ.18): ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮೊದಲ ಬ್ಯಾಚ್ ಕೋಬ್ರಾ ಕಮಾಂಡೋಗಳನ್ನು ಕುಪ್ವಾರದಲ್ಲಿ ನಿಯೋಜಿಸಲಾಗಿದೆ. ಕೋಬ್ರಾ ಕಮಾಂಡೋಗಳ ಮೊದಲ ಬ್ಯಾಚ್ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಕಾಡುಗಳಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದೆ. 2009 ರಲ್ಲಿ, ಮಾವೋವಾದಿ ಬಂಡುಕೋರರನ್ನು ನಿಯಂತ್ರಿಸಲು ಮತ್ತು ಹೋರಾಡಲು ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಅನ್ನು ರಚಿಸಲಾಗಿತ್ತು. ಮೊದಲ ಬಾರಿಗೆ, ಇದನ್ನು ಮಧ್ಯ ಮತ್ತು ಪೂರ್ವ ಭಾರತದಿಂದ ತೆಗೆದು, ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗಿದೆ.  ಜಮ್ಮು ಮತ್ತು ಕಾಶ್ಮೀರಕ್ಕೆ ಕೋಬ್ರಾ ಕಮಾಂಡೋ ರವಾನೆ ಜಮ್ಮು ಮತ್ತು ಕಾಶ್ಮೀರಕ್ಕೆ ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೋ ಪಡೆಗಳ ವಿಶೇಷ ಘಟಕವನ್ನು ಕಳುಹಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಭಯೋತ್ಪಾದಕರು ಕಾಡುಗಳು ಮತ್ತು ಪರ್ವತಗಳಲ್ಲಿ ಅಡಗಿಕೊಂಡು ಭದ್ರತಾ ಪಡೆಗಳ ಮೇಲೆ ದಾಳಿ ಮಾಡುವ ವಿಧಾನಗಳ ಮೇಲೆ ಕೋಬ್ರಾ ವಿಶೇಷ ಕಣ್ಣಿಟ್ಟಿದೆ. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯ ಅಗತ್ಯವಿದ್ದರೆ, ಅದು ಅಲ್ಲಿರುವ ಪಡೆಗಳಿಗೂ ಸಹಾಯ ಮಾಡುತ್ತದೆ. ಕೋಬ್ರಾ ಕಮಾಂಡೋಗಳು ಕಾಡಿನಲ್ಲಿ ನಡೆಯುವ ದಾಳಿಗಳು ಮತ್ತು ಗೆರಿಲ್ಲಾ ಯುದ್ಧದಲ್ಲಿ ಅಪಾರ ಪರಿಣಿತಿಯಲ್ಲಿ ಹೊಂದಿದೆ.

ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ಅರಣ್ಯ ಮತ್ತು ಪರ್ವತಗಳಲ್ಲಿ ಭಯೋತ್ಪಾದಕರು ಅಡಗಿ ಕುಳಿತಿದ್ದು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಕೋಬ್ರಾ ಕಮಾಂಡೋಗಳು ಕಾಡುಗಳಲ್ಲಿ ಹೋರಾಡುವ ಪರಿಣತಿಯನ್ನು ಹೊಂದಿದ್ದಾರೆ, ಆದ್ದರಿಂದ ಅವರನ್ನು ಜಮ್ಮು ಮತ್ತು ಕಾಶ್ಮೀರದ ಕಾಡುಗಳಲ್ಲಿ ರಕ್ಷಣೆಗಾಗಿ ನಿಯೋಜಿಸಲಾಗುತ್ತದೆ. ಕೋಬ್ರಾ ನಕ್ಸಲೀಯರನ್ನು ಯಶಸ್ವಿಯಾಗಿ ಎದುರಿಸಿದ ದೇಶದ ಮಹತ್ವದ ಪಡೆ. ಮಾಹಿತಿಯ ಪ್ರಕಾರ, ಕೆಲವು ಕೋಬ್ರಾ ಕಂಪನಿಗಳನ್ನು ಬಿಹಾರ ಮತ್ತು ಜಾರ್ಖಂಡ್‌ನಿಂದ ಭಾಗಶಃ ತೆಗೆದುಹಾಕಲಾಗಿದೆ.

ಅಲ್ಲಿ ನಕ್ಸಲೀಯರ ಹಿಂಸಾಚಾರ ಪ್ರಕರಣಗಳು ಇಳಿಮುಖವಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರು ತಿಂಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಕಾಡುಗಳಲ್ಲಿ ಅವರ ತರಬೇತಿ ಪ್ರಾರಂಭವಾಗಿತ್ತು. ಈಗ ತರಬೇತಿ ಮುಗಿದಿದ್ದು, ಕುಪ್ವಾರದಲ್ಲಿ ನಿಯೋಜನೆ ಮಾಡಲಾಗಿದೆ, ಆದರೂ ಅವರ ಸಹಕಾರ ಇನ್ನೂ ಯಾವುದೇ ಕಾರ್ಯಾಚರಣೆಗೆ ತೆಗೆದುಕೊಂಡಿಲ್ಲ.

ಮತ್ತೊಂದೆಡೆ, ಸೋಮವಾರ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಮೂವರು ಸದಸ್ಯರನ್ನು (ಒಜಿಡಬ್ಲ್ಯೂ) ಪಿಎಸ್ಎ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಬೆಳಕಿಗೆ ಬಂದಿದೆ. ಅಧಿಕಾರಿಗಳಿಂದ ಪಡೆದ ಮಾಹಿತಿಯ ಪ್ರಕಾರ, ತೌಸಿಫ್-ಉಲ್-ನಬಿ, ಜಹೂರ್-ಉಲ್-ಹಸನ್ ಮತ್ತು ರೆಯಾಜ್ ಅಹ್ಮದ್ ಅವರನ್ನು ಪೊಲೀಸ್ ಶಿಫಾರಸ್ಸಿನ ಮೇರೆಗೆ ಎರಡು ವರ್ಷಗಳವರೆಗೆ ಆರೋಪ ಅಥವಾ ವಿಚಾರಣೆಯಿಲ್ಲದೆ ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲು ಅನುಮತಿಸುವ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿದೆ. 

ಸಾವಿಗೂ ಮುನ್ನ ಕೊನೆಯದಾಗಿ ಕಂದನ ನೋಡಲು ವಿಡಿಯೋ ಕಾಲ್ ಮಾಡಿದ್ದ ಹುತಾತ್ಮ ಹುಮಾಯುನ್!

ಪೊಲೀಸರು ಮೂವರ ವಿರುದ್ಧ ದಸ್ತಾವೇಜನ್ನು ಸಿದ್ಧಪಡಿಸಿದ್ದು,ಅದನ್ನು ಕಿಶ್ತ್ವಾರ್ ಉಪ ಆಯುಕ್ತರಿಗೆ ಹಸ್ತಾಂತರಿಸಿದರು, ಅವರು ಪಿಎಸ್ಎ ಅಡಿಯಲ್ಲಿ ಅವರ ಬಂಧನವನ್ನು ಅನುಮೋದಿಸಿದರು. ಅಗತ್ಯ ಅನುಮತಿ ಪಡೆದ ನಂತರ, ಮೂವರು ಒಜಿಡಬ್ಲ್ಯೂಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಟ್ಟದ ಮೇಲೆ ಹೇಡಿಗಳಂತೆ ಅಡಿಗಿ ಕೂತ ಉಗ್ರರು, ಮತ್ತೊಬ್ಬ ಸೈನಿಕ ಹುತಾತ್ಮ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌