ಬೆಂಗಳೂರು ಐಟಿ ಕಂಪನಿ ಮಾಲೀಕನಿಂದ ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ!

Suvarna News   | Asianet News
Published : Jan 07, 2020, 02:20 PM ISTUpdated : Jan 07, 2020, 02:21 PM IST
ಬೆಂಗಳೂರು ಐಟಿ ಕಂಪನಿ ಮಾಲೀಕನಿಂದ ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ!

ಸಾರಾಂಶ

ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ಬೆಂಗಳೂರು ಐಟಿ ಕಂಪನಿ ಮಾಲೀಕ| 1 ಕೋಟಿ ರೂ. ದೇಣಿಗೆ ನೀಡಿದ ಬೆಂಗಳೂರಿನ ಅಮರನಾಥ್ ಚೌಧರಿ| ಹರಕೆ ತೀರಿಸಿದ ಅಮರನಾಥ್ ಚೌಧರಿ| ಶ್ರೀ ವೆಂಕಟೇಶ್ವರ್ ಗೋಸಂರಕ್ಷಣೆ ಸಮಿತಿಗೆ 1 ಕೋಟಿ ರೂ. ದೇಣಿಗೆ|

ಬೆಂಗಳೂರು(ಜ.07): ತಿರುಪತಿ ತಿಮ್ಮಪನಿಗೆ ವಿಶ್ವದಾದ್ಯಂತ ಭಕ್ತರಿದ್ದಾರೆ. ಎಲ್ಲ ವರ್ಗಗಳ ಜನರ ಭಕ್ತಿಯನ್ನು ತನ್ನತ್ತ ಸೆಳೆದಿರುವ ತಿಮ್ಮಪ್ಪ, ತಿರುಮಲ ಬೆಟ್ಟದಲ್ಲಿ ರಾರಾಜಿಸುತ್ತಿದ್ದಾನೆ.

ಅದರಂತೆ ಬೆಂಗಳೂರು ಮೂಲದ ಐಟಿ ಕಂಪನಿಯೊಂದರ ಮಾಲೀಕ ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಮೂಲಕ ತಿಮ್ಮಪ್ಪನ ಮೇಲಿನ ತಮ್ಮ ಭಕ್ತಿಯನ್ನು ನಮ್ರತೆಯಿಂದ ತೋರಿಸಿದ್ದಾರೆ.

ತಿಮ್ಮಪ್ಪನ ಮೇಲಿನ ಭಕ್ತಿ ಖಚಿತ: ತಿರುಪತಿ ಲಡ್ಡು ಇನ್ಮುಂದೆ ಉಚಿತ!

ಹೌದು, ಬೆಂಗಳೂರು ಮೂಲದ ಐಟಿ ಕಂಪನಿ ಮಾಲೀಕರಾದ ಅಮರನಾಥ್ ಚೌಧರಿ, ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದು, ಇದನ್ನು ಟಿಟಿಡಿ ಯ ಅಧೀನದಲ್ಲಿರುವ ಶ್ರೀ ವೆಂಕಟೇಶ್ವರ್ ಗೋಸಂರಕ್ಷಣೆ ಸಮಿತಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ಕಳೆದ 9 ವರ್ಷಗಳಿಂದ ಅಮರನಾಥ್ ಅವರ ಐಟಿ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಇದಕ್ಕಾಗಿ ಹರಕೆ ಹೊತ್ತಿದ್ದ ಅಮರನಾಥ್ ಟಿಟಿಡಿ ಗೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಕಾಶ್ಮೀರ, ಮೋದಿ ಕ್ಷೇತ್ರ ವಾರಾಣಸಿಯಲ್ಲೂ ತಿಮ್ಮಪ್ಪನ ದೇಗುಲ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್