ಲಡಾ​ಖ್‌​ನಲ್ಲೇ ನಿಂತು ಚೀನಾ​ಕ್ಕೆ ರಾಜ​ನಾಥ್‌ ನೇರ ಎಚ್ಚ​ರಿ​ಕೆ!

Published : Jun 29, 2021, 07:58 AM ISTUpdated : Jun 29, 2021, 09:40 AM IST
ಲಡಾ​ಖ್‌​ನಲ್ಲೇ ನಿಂತು ಚೀನಾ​ಕ್ಕೆ ರಾಜ​ನಾಥ್‌ ನೇರ ಎಚ್ಚ​ರಿ​ಕೆ!

ಸಾರಾಂಶ

* ಗಡಿ ಬಿಕ್ಕಟ್ಟು ಪರಿ​ಹಾ​ರ​ಕ್ಕಾಗಿ ಮಾತು​ಕತೆ ಭಾರ​ತದ ಆದ್ಯ​ತೆ * ಲಡಾ​ಖ್‌​ನಲ್ಲೇ ನಿಂತು ಚೀನಾ​ಕ್ಕೆ ರಾಜ​ನಾಥ್‌ ನೇರ ಎಚ್ಚ​ರಿ​ಕೆ * ಎದು​ರಾಳಿ ಸೈನ್ಯಕ್ಕೆ ತಿರು​ಗೇಟು ನೀಡಲು ಭಾರತ ಕಟಿ​ಬ​ದ್ಧ  

ನವ​ದೆ​ಹ​ಲಿ(ಜೂ.29): ‘ಭಾರ​ತವು ಸದಾ​ಕಾಲ ಶಾಂತಿಪ್ರಿಯ ರಾಷ್ಟ್ರ​ವಾ​ಗಿದ್ದು, ಯಾವುದೇ ಕಾರ​ಣಕ್ಕೂ ಯಾರೊಂದಿಗೂ ಸಹ ಕಾಲು​ಕೆ​ರೆದು ಕಾದಾ​ಟಕ್ಕೆ ಹೋಗಲ್ಲ. ಆದರೆ ತಮ್ಮ ಮೇಲೆ ದಾಳಿಗೆ ಮುಂದಾ​ದವ​ರಿಗೆ ತಕ್ಕ ತಿರು​ಗೇಟು ನೀಡಲು ನಮ್ಮ ಸೈನ್ಯ ಸರ್ವ ಸನ್ನ​ದ್ಧ​ವಾ​ಗಿರಲಿ​ದೆ’ ಎಂದು ರಕ್ಷಣಾ ಸಚಿವ ರಾಜ​ನಾಥ್‌ ಸಿಂಗ್‌ ಗುಡು​ಗಿ​ದ್ದಾರೆ.

ತನ್ಮೂ​ಲಕ 3 ದಿನ​ಗಳ ಪ್ರವಾ​ಸದ 2ನೇ ದಿನ​ವಾದ ಸೋಮ​ವಾರ ಪೂರ್ವ ಲಡಾ​ಖ್‌ ಮುಂಚೂಣಿ ಗಡಿಗೆ ಭೇಟಿ ನೀಡಿದ ರಾಜ​ನಾಥ್‌ ಅವರು, ಈ ಭಾಗದಲ್ಲಿ ಸದಾಕಾಲ ಭಾರ​ತದ ವಿರುದ್ಧ ತಂಟೆ ತೆಗೆ​ಯುವ ಚೀನಾಕ್ಕೆ ನೇರ ಸಂದೇ​ಶ​ ರವಾ​ನಿ​ಸಿ​ದ್ದಾ​ರೆ.

ಸೈನಿಕರನ್ನು ಉದ್ದೇಶಿಸಿ ಮಾತನಾ​ಡಿದ ಸಿಂಗ್‌ ಅವರು, ‘ನೆರೆಯ ರಾಷ್ಟ್ರ​ಗಳ ಜೊತೆ​ಗಿನ ಗಡಿ ಬಿಕ್ಕ​ಟ್ಟು​ಗ​ಳನ್ನು ಮಾತು​ಕತೆ ಮುಖಾಂತರ ಬಗೆ​ಹ​ರಿ​ಸಿ​ಕೊ​ಳ್ಳಲು ಭಾರತ ಸಿದ್ಧ​ವಿದೆ. ಆದರೆ ದೇಶದ ಸುರ​ಕ್ಷತೆ ಮತ್ತು ಭದ್ರತೆ ವಿಚಾ​ರ​ದಲ್ಲಿ ಯಾವುದೇ ಕಾರ​ಣಕ್ಕೂ ರಾಜಿ​ಯಾ​ಗ​ಲ್ಲ’ ಎಂದರು.

ಚೀನಾ ಗಡಿಗೆ 50 ಸಾವಿರ ಯೋಧರ ಕಳಿಸಿದ ಭಾರತ!

ಇನ್ನು ಕಳೆದ ವರ್ಷದ ಜೂನ್‌​ನಲ್ಲಿ ಗಲ್ವಾನ್‌ ಗಡಿ​ಯಲ್ಲಿ ಚೀನಾ ಯೋಧರ ಜತೆ​ಗಿನ ಗುದ್ದಾ​ಟ​ದಲ್ಲಿ ಮಡಿದ 20 ಯೋಧರಿಗೆ ಗೌರವ ವಂದನೆ ಸಲ್ಲಿ​ಸಿದ ಅವರು, ಯೋಧರ ಬಲಿ​ದಾ​ನ​ವನ್ನು ದೇಶ ಎಂದಿಗೂ ಮರೆ​ಯಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ