ಲಡಾ​ಖ್‌​ನಲ್ಲೇ ನಿಂತು ಚೀನಾ​ಕ್ಕೆ ರಾಜ​ನಾಥ್‌ ನೇರ ಎಚ್ಚ​ರಿ​ಕೆ!

By Kannadaprabha NewsFirst Published Jun 29, 2021, 7:59 AM IST
Highlights

* ಗಡಿ ಬಿಕ್ಕಟ್ಟು ಪರಿ​ಹಾ​ರ​ಕ್ಕಾಗಿ ಮಾತು​ಕತೆ ಭಾರ​ತದ ಆದ್ಯ​ತೆ

* ಲಡಾ​ಖ್‌​ನಲ್ಲೇ ನಿಂತು ಚೀನಾ​ಕ್ಕೆ ರಾಜ​ನಾಥ್‌ ನೇರ ಎಚ್ಚ​ರಿ​ಕೆ

* ಎದು​ರಾಳಿ ಸೈನ್ಯಕ್ಕೆ ತಿರು​ಗೇಟು ನೀಡಲು ಭಾರತ ಕಟಿ​ಬ​ದ್ಧ

ನವ​ದೆ​ಹ​ಲಿ(ಜೂ.29): ‘ಭಾರ​ತವು ಸದಾ​ಕಾಲ ಶಾಂತಿಪ್ರಿಯ ರಾಷ್ಟ್ರ​ವಾ​ಗಿದ್ದು, ಯಾವುದೇ ಕಾರ​ಣಕ್ಕೂ ಯಾರೊಂದಿಗೂ ಸಹ ಕಾಲು​ಕೆ​ರೆದು ಕಾದಾ​ಟಕ್ಕೆ ಹೋಗಲ್ಲ. ಆದರೆ ತಮ್ಮ ಮೇಲೆ ದಾಳಿಗೆ ಮುಂದಾ​ದವ​ರಿಗೆ ತಕ್ಕ ತಿರು​ಗೇಟು ನೀಡಲು ನಮ್ಮ ಸೈನ್ಯ ಸರ್ವ ಸನ್ನ​ದ್ಧ​ವಾ​ಗಿರಲಿ​ದೆ’ ಎಂದು ರಕ್ಷಣಾ ಸಚಿವ ರಾಜ​ನಾಥ್‌ ಸಿಂಗ್‌ ಗುಡು​ಗಿ​ದ್ದಾರೆ.

ತನ್ಮೂ​ಲಕ 3 ದಿನ​ಗಳ ಪ್ರವಾ​ಸದ 2ನೇ ದಿನ​ವಾದ ಸೋಮ​ವಾರ ಪೂರ್ವ ಲಡಾ​ಖ್‌ ಮುಂಚೂಣಿ ಗಡಿಗೆ ಭೇಟಿ ನೀಡಿದ ರಾಜ​ನಾಥ್‌ ಅವರು, ಈ ಭಾಗದಲ್ಲಿ ಸದಾಕಾಲ ಭಾರ​ತದ ವಿರುದ್ಧ ತಂಟೆ ತೆಗೆ​ಯುವ ಚೀನಾಕ್ಕೆ ನೇರ ಸಂದೇ​ಶ​ ರವಾ​ನಿ​ಸಿ​ದ್ದಾ​ರೆ.

Delighted to meet the brave and valiant soldiers of the Indian Army at Karu in Ladakh today. I salute their courage and fortitude. pic.twitter.com/zRsbEvgg89

— Rajnath Singh (@rajnathsingh)

ಸೈನಿಕರನ್ನು ಉದ್ದೇಶಿಸಿ ಮಾತನಾ​ಡಿದ ಸಿಂಗ್‌ ಅವರು, ‘ನೆರೆಯ ರಾಷ್ಟ್ರ​ಗಳ ಜೊತೆ​ಗಿನ ಗಡಿ ಬಿಕ್ಕ​ಟ್ಟು​ಗ​ಳನ್ನು ಮಾತು​ಕತೆ ಮುಖಾಂತರ ಬಗೆ​ಹ​ರಿ​ಸಿ​ಕೊ​ಳ್ಳಲು ಭಾರತ ಸಿದ್ಧ​ವಿದೆ. ಆದರೆ ದೇಶದ ಸುರ​ಕ್ಷತೆ ಮತ್ತು ಭದ್ರತೆ ವಿಚಾ​ರ​ದಲ್ಲಿ ಯಾವುದೇ ಕಾರ​ಣಕ್ಕೂ ರಾಜಿ​ಯಾ​ಗ​ಲ್ಲ’ ಎಂದರು.

ಚೀನಾ ಗಡಿಗೆ 50 ಸಾವಿರ ಯೋಧರ ಕಳಿಸಿದ ಭಾರತ!

ಇನ್ನು ಕಳೆದ ವರ್ಷದ ಜೂನ್‌​ನಲ್ಲಿ ಗಲ್ವಾನ್‌ ಗಡಿ​ಯಲ್ಲಿ ಚೀನಾ ಯೋಧರ ಜತೆ​ಗಿನ ಗುದ್ದಾ​ಟ​ದಲ್ಲಿ ಮಡಿದ 20 ಯೋಧರಿಗೆ ಗೌರವ ವಂದನೆ ಸಲ್ಲಿ​ಸಿದ ಅವರು, ಯೋಧರ ಬಲಿ​ದಾ​ನ​ವನ್ನು ದೇಶ ಎಂದಿಗೂ ಮರೆ​ಯಲ್ಲ ಎಂದರು.

click me!