UPSC ಎಕ್ಸಾಂಗೆ ಮುನ್ನ ಇನ್ನು ಅಭ್ಯರ್ಥಿಯ ಬೆರಳಚ್ಚು, ಮುಖ ಗುರುತು ಪರೀಕ್ಷೆ

Published : Jul 26, 2024, 08:25 AM ISTUpdated : Jul 26, 2024, 08:58 AM IST
UPSC ಎಕ್ಸಾಂಗೆ ಮುನ್ನ ಇನ್ನು ಅಭ್ಯರ್ಥಿಯ ಬೆರಳಚ್ಚು, ಮುಖ ಗುರುತು ಪರೀಕ್ಷೆ

ಸಾರಾಂಶ

ಸರ್ಕಾರಿ ಪರೀಕ್ಷೆಗಳಲ್ಲಿ ವಂಚನೆ ಹಾಗೂ ಅಕ್ರಮ ಸೇರಿದಂತೆ ಸಾಲು ಸಾಲು ಹಗರಣಗಳು ಬಯಲಾದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) ತಾನು ನಡೆಸುವ ಪರೀಕ್ಷೆಗಳನ್ನು ತಂತ್ರಜ್ಞಾನದ ಸಹಾಯದಿಂದ ಕಟ್ಟುನಿಟ್ಟುಗೊಳಿಸಲು ಮುಂದಾಗಿದೆ.

ನವದೆಹಲಿ: ಸರ್ಕಾರಿ ಪರೀಕ್ಷೆಗಳಲ್ಲಿ ವಂಚನೆ ಹಾಗೂ ಅಕ್ರಮ ಸೇರಿದಂತೆ ಸಾಲು ಸಾಲು ಹಗರಣಗಳು ಬಯಲಾದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) ತಾನು ನಡೆಸುವ ಪರೀಕ್ಷೆಗಳನ್ನು ತಂತ್ರಜ್ಞಾನದ ಸಹಾಯದಿಂದ ಕಟ್ಟುನಿಟ್ಟುಗೊಳಿಸಲು ಮುಂದಾಗಿದೆ. ಆಧಾರ್‌ ಆಧರಿತ ಬೆರಳಚ್ಚು ಹಾಗೂ ಮುಖದ ಗುರುತು ದೃಢೀಕರಣವನ್ನು ಬಳಸಿ ಅರ್ಜಿದಾರರ ನೈಜತೆ ಪರಿಶೀಲಿಸಲು, ಪರೀಕ್ಷೆಯ ವೇಳೆ ಅಕ್ರಮ ತಡೆಗೆ ಕೃತಕ ಬುದ್ಧಿಮತ್ತೆ (ಎಐ) ಆಧರಿತ ಸಿಸಿಟೀವಿ ಹಾಗೂ ಬೇರೊಬ್ಬರು ಪರೀಕ್ಷೆಗೆ ಹಾಜರಾಗುವುದನ್ನು ತಪ್ಪಿಸಲು ಕ್ಯುಆರ್‌ ಕೋಡ್‌ ಆಧರಿತ ಇ- ಪ್ರವೇಶ ಪತ್ರಗಳನ್ನು ಪರೀಕ್ಷೆ ವೇಳೆ ಪರಿಚಯಿಸಲು ಸಿದ್ಧತೆಯಲ್ಲಿ ತೊಡಗಿದೆ.

ಮಹಾರಾಷ್ಟ್ರದಲ್ಲಿ ತರಬೇತಿಗೆ ನಿಯೋಜನೆಗೊಂಡಿದ್ದ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ನಿಗದಿತ ಮಿತಿಗಳನ್ನು ಮೀರಿ 12 ಬಾರಿ ನಾಗರಿಕ ಸೇವಾ ಪರೀಕ್ಷೆ ಬರೆದಿದ್ದು, ಇತ್ತೀಚೆಗೆ ಬಯಲಾಗಿತ್ತು. ಈ ಸಂಬಂಧ ಖೇಡ್ಕರ್‌ ವಿರುದ್ಧ ಯುಪಿಎಸ್ಸಿ ಪ್ರಕರಣ ದಾಖಲಿಸಿತ್ತು. ಅದರ ಬೆನ್ನಲ್ಲೇ ಪರೀಕ್ಷೆಯನ್ನು ಅತ್ಯಂತ ಬಿಗಿಗೊಳಿಸುವ ಪ್ರಯತ್ನ ನಡೆದಿದೆ. ತಂತ್ರಜ್ಞಾನ ಆಧರಿತ ಸೌಕರ್ಯಗಳನ್ನು ಪರೀಕ್ಷೆಯಲ್ಲಿ ಬಳಸುವ ಸಲುವಾಗಿ ಯುಪಿಎಸ್ಸಿ ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಬಿಡ್‌ ಆಹ್ವಾನಿಸಿದೆ. ಕನಿಷ್ಠ 100 ಕೋಟಿ ರು. ವಹಿವಾಟು ನಡೆಸುವ, ಲಾಭದಾಯಕ ಸಂಸ್ಥೆಗಳು ಬಿಡ್‌ ಸಲ್ಲಿಸಬಹುದು ಎಂದು ಟೆಂಡರ್‌ ದಾಖಲೆ ಹೇಳುತ್ತದೆ. ಯುಪಿಎಸ್ಸಿ ಪ್ರತಿ ವರ್ಷ 14 ಪರೀಕ್ಷೆಗಳನ್ನು ನಡೆಸುತ್ತದೆ.

ಸ್ಪೀಕರ್ ಪುತ್ರಿ ಅಂಜಲಿ ಬಿರ್ಲಾ ವಿರುದ್ಧದ ಫೇಕ್‌ ನ್ಯೂಸ್‌ 24 ಗಂಟೆಯೊಳಗೆ ಡಿಲೀಟ್‌ಗೆ ಹೈಕೋರ್ಟ್ ಸೂಚನೆ

ರಸ್ತೆ ಬದಿ ನಿಂತಿದ್ದ ಮಳೆನೀರಿಗೆ ಕಾಲಿಡುತ್ತಿದ್ದಂತೆ ಕರೆಂಟ್ ಶಾಕ್: IAS ಪರೀಕ್ಷೆಗೆ ಸಿದ್ದಗೊಳ್ಳುತ್ತಿದ್ದ ವಿದ್ಯಾರ್ಥಿ ಸಾವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
India Latest News Live: ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!