
ಇಂಧೋರ್(ಜ.24): ಅಕ್ರಮ ಬಾಂಗ್ಲಾದೇಶೀಯರನ್ನು ಅವರು ತಿನ್ನುವ ಆಹಾರದಿಂದಲೇ ಸುಲಭವಾಗಿ ಗುರುತಿಸಬಹುದು ಎಂಧು ಬಿಜೆಪಿ ನಾಯಕ ಹಾಗೂ ಪ.ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದೇಶೀಯರು ಕೇವಲ ಪೋಹಾ(ಅವಲಕ್ಕಿ) ತಿನ್ನುತ್ತಾರೆ. ಅವರ ಈ ಆಹಾರ ಪದ್ದತಿಯಿಂದಲೇ ಅವರನ್ನು ಸುಲಭವಾಗಿ ಗುರುತಿಸಬಹುದು ಎಂದು ಕೈಲಾಶ್ ವಿಜಯವರ್ಗೀಯ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಅಕ್ರಮ ಬಾಂಗ್ಲನ್ನರ ಲೆಕ್ಕವೇ ಇಲ್ಲ!
ತಮ್ಮ ಮನೆ ನಿರ್ಮಾಣ ಕೆಲಸಕ್ಕೆ ಬಂದಿದ್ದ ಕೆಲವು ಕಾರ್ಮಿಕರು ನಿತ್ಯವೂ ಊಟಕ್ಕೆ ಕೇವಲ ಪೋಹಾ ತಿನ್ನುತ್ತಿದ್ದರು. ಅವರ ಈ ಆಹಾರ ಪದ್ಧತಿ ತಮಗೆ ಅನುಮಾನ ಬರುವಂತೆ ಮಾಡಿತು. ಈ ಕುರಿತು ಪರಿಶೀಲನೆ ನಡೆಸಿದಾಗ ಅವರು ಅಕ್ರಮ ಬಾಂಗ್ಲಾದೇಶೀಯರು ಎಂಬುದು ಗೊತ್ತಾಯಿತು ಎಂದು ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ.
ಸಿಎಎ ಪರ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಕೈಲಾಶ್ ವಿಜಯವರ್ಗೀಯ, ಅಕ್ರಮ ಭಾಂಗ್ಲಾ ವಲಸಿಗರ ಆಹಾರ ಪದ್ಧತಿಯಿಂದ ಅವರನ್ನು ಸುಲಭವಾಗಿ ಗುರುತಿಸಿ ಹೊರ ಹಾಕಬಹುದಾಗಿದೆ ಎಂದು ಹೇಳಿದರು.
1 ಕೋಟಿ ಬಾಂಗ್ಲಾ ಮುಸ್ಲಿಂರನ್ನು ಹೊರ ದಬ್ಬುತ್ತೇವೆ: ಬಿಜೆಪಿಗ
ಆದರೆ ಬಾಂಗ್ಲಾದೇಶೀಯರಿಗೆ ಪೋಹಾ(ಅವಲಕ್ಕಿ) ಆಹಾರ ಗೊತ್ತೇ ಇಲ್ಲ ಎಂದು ಕೆಲವರು ವಾದಿಸಿದ್ದು, ತಮ್ಮ ರಾಜಕೀಯ ಲಾಭಕ್ಕಾಗಿ ಆಹಾರ ಪದ್ಧತಿಯನ್ನು ಎಳೆದು ತಂದಿದ್ದು ಸರಿಯಲ್ಲ ಎಂದು ಕೈಲಾಶ್ ವಿಜಯವರ್ಗೀಯ ವಿರುದ್ಧ ಹರಿಹಾಯ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ