ಮಂಡ್ಯದಿಂದ ಕಳುವಾಗಿದ್ದ ಬಾಲಾಜಿ ವಿಗ್ರಹ ತಮಿಳ್ನಾಡಲ್ಲಿ ವಶ

Published : Nov 10, 2022, 07:15 AM IST
ಮಂಡ್ಯದಿಂದ ಕಳುವಾಗಿದ್ದ ಬಾಲಾಜಿ ವಿಗ್ರಹ ತಮಿಳ್ನಾಡಲ್ಲಿ ವಶ

ಸಾರಾಂಶ

ಕೆಲವು ವರ್ಷಗಳ ಹಿಂದೆ ಮಂಡ್ಯದ ದೇಗುಲವೊಂದರಿಂದ ಕಳವು ಮಾಡಲಾಗಿದ್ದ ಕೋಟ್ಯಂತರ ರು. ಬೆಲೆಬಾಳುವ, 600 ವರ್ಷಗಳ ಪುರಾತನ ಬಾಲಾಜಿ ವಿಗ್ರಹವನ್ನು ತಮಿಳುನಾಡಿನ ಸಿಐಡಿ ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ. 

ಚೆನ್ನೈ (ನ.10): ಕೆಲವು ವರ್ಷಗಳ ಹಿಂದೆ ಮಂಡ್ಯದ ದೇಗುಲವೊಂದರಿಂದ ಕಳವು ಮಾಡಲಾಗಿದ್ದ ಕೋಟ್ಯಂತರ ರು. ಬೆಲೆಬಾಳುವ, 600 ವರ್ಷಗಳ ಪುರಾತನ ಬಾಲಾಜಿ ವಿಗ್ರಹವನ್ನು ತಮಿಳುನಾಡಿನ ಸಿಐಡಿ ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಓರ್ವ ವಕೀಲ ಮತ್ತು ಮಧ್ಯವರ್ತಿಯೊಬ್ಬನನ್ನು ಬಂಧಿಸಲಾಗಿದೆ.

ಮಂಡ್ಯ ದೇಗುಲದ ಅರ್ಚಕರೊಬ್ಬರು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದು, ಈ ಸಮಸ್ಯೆಯಿಂದ ಪಾರಾಗಲು 2017ರಲ್ಲಿ ತಮಿಳುನಾಡಿನ ಗೋಬಿಚೆಟ್ಟಿಪಾಳ್ಯಂನ ನಟರಾಜ್‌ ಎಂಬ ವಕೀಲರೊಬ್ಬರಿಗೆ ತಾವು ಪೂಜೆ ಮಾಡುತ್ತಿದ್ದ ದೇಗುಲದ ಬಾಲಾಜಿ ಪ್ರತಿಮೆಯನ್ನೇ ಮಾರಾಟ ಮಾಡಿದ್ದರು. ನಟರಾಜ್‌ ಈ ವಿಗ್ರಹವನ್ನು ಕೊಂಡೊಯ್ಯುವಾಗ ಕರ್ನಾಟಕ ಗಡಿಯಲ್ಲಿ ಸಿಕ್ಕಿಬಿದ್ದಿದ್ದರು. ಈ ಬಗ್ಗೆ ಕರ್ನಾಟಕ ಪೊಲೀಸರು ಪ್ರಕರಣ ಕೂಡಾ ದಾಖಲಿಸಿಕೊಂಡಿದ್ದರು.

218 ಟನ್‌ ತೂಕದ ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಅಂತಿಮ ಹಂತದ ಸಿದ್ಧತೆ

ಆದರೆ ವಕೀಲ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಕರಣದಿಂದ ಪಾರಾಗಿದ್ದರು ಮತ್ತು ಪೊಲೀಸರ ವಶದಲ್ಲಿದ್ದ ವಿಗ್ರಹವನ್ನು ಕೂಡಾ ಬಿಡಿಸಿಕೊಂಡು ತಮಿಳ್ನಾಡಿಗೆ ಕೊಂಡೊಯ್ದು ಸುಮಾರು 50 ಕೋಟಿ ರು. ಗೆ ಮಾರಾಟ ಮಾಡಲು ಯತ್ನ ಆರಂಭಿಸಿದ್ದರು. ಆದರೆ ದುಬಾರಿ ದರದ ಕಾರಣ ಯಾರೂ ಅದರ ಖರೀದಿಗೆ ಮುಂದೆ ಬಾರದೇ ಇದ್ದಾಗ ತನ್ನ ಜೊತೆಯಲ್ಲಿದ್ದ ಕಿರಿಯ ವಕೀಲ ಪಳನಿಸ್ವಾಮಿ ನೆರವು ಕೋರಿದ್ದರು. ಈ ನಡುವೆ 2018ರಲ್ಲಿ ಹಿರಿಯ ವಕೀಲ ನಟರಾಜ್‌ ದಿಢೀರನೆ ಸಾವನ್ನಪ್ಪಿದ್ದರು. ಹೀಗಾಗಿ ಕಿರಿಯ ವಕೀಲ ತನ್ನ ಬಳಿ ಇದ್ದ ವಿಗ್ರಹದ ಮೊತ್ತವನ್ನು ಕಡಿಮೆ ಮಾಡಿ 33 ಕೋಟಿ ರು.ಗೆ ಮಾರಾಟ ಮಾಡಲು ಮುಂದಾಗಿ, ಮಧ್ಯವರ್ತಿಯೊಬ್ಬರ ನೆರವು ಕೋರಿದ್ದರು.

ಮಾರುವೇಷದ ಕಾರ್ಯಾಚರಣೆ: ಇತ್ತೀಚೆಗೆ ಈ ವಿಷಯದ ಮಾಹಿತಿ ಪಡೆದ ತಮಿಳುನಾಡು ಸಿಐಡಿಯ ವಿಗ್ರಹ ವಿಭಾಗದ ಪೊಲೀಸರು, ವಿಗ್ರಹ ಖರೀದಿದಾರರ ಸೋಗಿನಲ್ಲಿ ತೆರಳಿ, ಮಧ್ಯವರ್ತಿಯ ಮೂಲಕ ಪಳನಿಸ್ವಾಮಿ ಮನೆಗೆ ತೆರಳಿ ವಿಗ್ರಹ ಪರಿಶೀಲಿಸಿ ಬಂದಿದ್ದರು. ವಿಗ್ರಹದ ಕುರಿತು ಸಾಕಷ್ಟು ಚೌಕಾಸಿ ನಡೆದು ಕೊನೆಗೆ 15 ಕೋಟಿ ರು.ಗೆ ವಿಗ್ರಹ ಕೊಂಡುಕೊಳ್ಳುವುದಾಗಿ ಖರೀದಿದಾರರ ಸೋಗಿನಲ್ಲಿದ್ದ ಪೊಲೀಸರು ಹೇಳಿದ್ದರು. 

ಭೂಕಂಪವಾದರೂ ಅಲುಗಾಡದು ಕೆಂಪೇಗೌಡ ಪ್ರತಿಮೆ: ಸಚಿವ ಅಶ್ವತ್ಥ್‌ನಾರಾಯಣ

ಅದರಂತೆ ಮಾರನೇ ದಿನ ದುಡ್ಡಿನೊಂದಿಗೆ ಬರುವುದಾಗಿ ಹೇಳಿ ಇತರೆ ಪೊಲೀಸರನ್ನು ಕರೆದೊಯ್ದು ಪಳನಿಸ್ವಾಮಿ ಮತ್ತು ಮಧ್ಯವರ್ತಿಯನ್ನು ಬಂಧಿಸಿದ್ದಾರೆ. ಜೊತೆಗೆ ಬಾಲಾಜಿ ವಿಗ್ರಹವನ್ನು ವಶಪಡಿಸಿಕೊಂಡಿದ್ದಾರೆ. ವಿಗ್ರಹ ಮಂಡ್ಯದ ಯಾವ ದೇವಸ್ಥಾನಕ್ಕೆ ಸೇರಿದ್ದು ಎಂಬುದು ತಿಳಿದು ಬಂದಿಲ್ಲ. ವಿಗ್ರಹ 22.8 ಕೆಜಿ ತೂಕವಿದ್ದು, 51 ಸೆ.ಮೀ ಎತ್ತರ, 31 ಸೆಂ.ಮೀ.ನಷ್ಟು ಅಗಲಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?