ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!

ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!

Published : Jul 10, 2026, 03:42 PM IST
ಅಯೋಧ್ಯೆ ರಾಮ ಮಂದಿರದ ಕಾಣಿಕೆ ಹುಂಡಿ ಲೂಟಿ ಪ್ರಕರಣದ ಪ್ರಮುಖ ಆರೋಪಿ ಅವಿನಾಶ್ ಶುಕ್ಲಾನನ್ನು ಬಂಧಿಸಲಾಗಿದೆ. ಕದ್ದ ಹಣದಲ್ಲಿ ಗೆಳತಿಗೆ ಐಫೋನ್, ನಗದು ಉಡುಗೊರೆ ನೀಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಈತನ ಮದುವೆಯೂ ಮುರಿದುಬಿದ್ದಿದೆ. ಎಸ್‌ಐಟಿ ತನಿಖೆಯಿಂದ ಮತ್ತಷ್ಟು ಆಘಾತಕಾರಿ ಸತ್ಯಗಳು ಬಯಲಾಗುತ್ತಿವೆ.

ಅಯೋಧ್ಯೆ: ಅಯೋಧ್ಯೆಯ ಭವ್ಯ ರಾಮ ಮಂದಿರದ ಕಾಣಿಕೆ ಹುಂಡಿ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ತನಿಖೆ ತೀವ್ರ ಚುರುಕುಗೊಂಡಿದೆ. ಈ ಮಹಾ ಲೂಟಿ ಪ್ರಕರಣದ ಪ್ರಮುಖ ಆರೋಪಿಯಾದ ಅವಿನಾಶ್ ಶುಕ್ಲಾನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಆತನಿಂದ ಸಾಲು ಸಾಲು ಆಘಾತಕಾರಿ ಸತ್ಯಗಳು ತನಿಖೆಯ ವೇಳೆ ಹೊರಬರುತ್ತಿವೆ. ದೇವಸ್ಥಾನದ ಪವಿತ್ರ ಹಣವನ್ನು ಕದ್ದು ಐಷಾರಾಮಿ ಜೀವನ ನಡೆಸುತ್ತಿದ್ದ ಈ ಕಳ್ಳನ ಕರಾಳ ಮುಖ ಬಯಲಾಗುತ್ತಿದ್ದಂತೆ, ಇತ್ತೀಚೆಗೆ ಆತನ ಮದುವೆಯೂ ಮುರಿದು ಬಿದ್ದಿದೆ.

ಗೆಳತಿಗೆ ಐಫೋನ್, 2.5 ಲಕ್ಷ ಗಿಫ್ಟ್!

ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಅವಿನಾಶ್ ಶುಕ್ಲಾ ಮಾಡಿರುವ ಖರ್ಚುಗಳ ಪಟ್ಟಿಯನ್ನು ಕಂಡು ಸ್ವತಃ ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ರಾಮನ ಹುಂಡಿಯಿಂದ ಕಳ್ಳತನ ಮಾಡಿದ ಹಣದಲ್ಲಿ ಈತ ತನ್ನ ಗೆಳತಿಗೆ ಅತ್ಯಂತ ದುಬಾರಿ ಬೆಲೆಯ ಐಫೋನ್ (iPhone) ಮೊಬೈಲ್ ಹಾಗೂ ಬರೋಬ್ಬರಿ 2.5 ಲಕ್ಷ ರೂಪಾಯಿ ನಗದು ಹಣವನ್ನು ಉಡುಗೊರೆಯಾಗಿ ನೀಡಿದ್ದ ಎನ್ನಲಾಗಿದೆ.

ಅವಿನಾಶ್ ಪಾಲಿಗೆ ಹುಂಡಿಯೇ ಎಟಿಎಂ!

ತನಿಖೆಯ ವೇಳೆ ಪೊಲೀಸರಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಅವಿನಾಶ್ ಶುಕ್ಲಾನಿಗೆ ರಾಮ ಮಂದಿರದ ಕಾಣಿಕೆ ಹುಂಡಿಯೇ ಒಂದು ಎಟಿಎಂ (ATM) ಯಂತ್ರದಂತಾಗಿತ್ತು. ತನಗೆ ಹಣದ ಅಗತ್ಯ ಬಿದ್ದಾಗಲೆಲ್ಲಾ ಈತ ಹುಂಡಿಗೆ ಕೈ ಹಾಕುತ್ತಿದ್ದ ಎನ್ನುವ ಕಹಿ ಸತ್ಯ ತನಿಖೆಯಲ್ಲಿ ಬಹಿರಂಗಗೊಂಡಿದೆ. ಕದ್ದ ಹಣದಿಂದ ತನ್ನ ಕುಟುಂಬಸ್ಥರಿಗೂ ಈತ ಲಕ್ಷ ಲಕ್ಷ ಹಣವನ್ನು ಹಂಚಿದ್ದಾನೆ.

21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
Read more