
ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿದ್ದು, ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಏಷ್ಯಾನೆಟ್ ನ್ಯೂಸ್ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ, ಅವರು ನಿರ್ಮಾಣದ ಸವಾಲುಗಳು, ಇಂಜಿನಿಯರಿಂಗ್ ವೈಶಿಷ್ಟ್ಯಗಳು ಮತ್ತು ಭಕ್ತರ ಸೌಲಭ್ಯಗಳ ಮಾಹಿತಿ ಹಂಚಿಕೊಂಡಿದ್ದಾರೆ.
ಅಯೋಧ್ಯೆ (ಜೂ.26): ಬಹುಕಾಲದ ಕನಸಿನ ಅಯೋಧ್ಯೆ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯವು ಈಗ ಸಂಪೂರ್ಣವಾಗಿ ಪೂರ್ಣಗೊಂಡಿದೆ. ಈ ಐತಿಹಾಸಿಕ ಸಂದರ್ಭದಲ್ಲಿ, ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಅವರು ಏಷ್ಯಾನೆಟ್ ನ್ಯೂಸ್ನ ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷ ರಾಜೇಶ್ ಕಲ್ರಾ ಅವರೊಂದಿಗೆ ವಿಶೇಷವಾಗಿ ಮಾತನಾಡಿದ್ದಾರೆ.
ಜನವರಿ 22ಕ್ಕೆ ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ!
ಈ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ, ಮಂದಿರದ ಆರಂಭಿಕ ಯೋಜನೆ, ಎದುರಾದ ಪ್ರಮುಖ ಸವಾಲುಗಳು, ಭಕ್ತರ ದೇಣಿಗೆ, ಇಂಜಿನಿಯರಿಂಗ್ ಮೈಲಿಗಲ್ಲುಗಳು ಮತ್ತು ಲಕ್ಷಾಂತರ ಭಕ್ತರಿಗಾಗಿ ಕೈಗೊಳ್ಳಲಾದ ವಿಶ್ವದರ್ಜೆಯ ಸೌಲಭ್ಯಗಳ ಕುರಿತು ಮಿಶ್ರಾ ಅವರು ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಅತ್ಯಂತ ಭವ್ಯ ಸಾಂಸ್ಕೃತಿಕ ಯೋಜನೆಯ ಹಿಂದಿನ ದೂರದೃಷ್ಟಿಯನ್ನು ಅನಾವರಣಗೊಳಿಸುವ ಈ ವೀಡಿಯೋದಲ್ಲಿ, ಮಂದಿರ ನಿರ್ಮಾಣದ ಹಂತ-ಹಂತದ ಅಪರೂಪದ ಮತ್ತು ವಿಶೇಷ ದೃಶ್ಯಗಳನ್ನು ಮೊದಲ ಬಾರಿಗೆ ಪ್ರದರ್ಶಿಸಲಾಗಿದೆ.