
ಅಯೋಧ್ಯೆ(ಜು.20): ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿಪೂಜೆಗೆ ಆಗಸ್ಟ್ 5ರ ಸಂಭಾವ್ಯ ದಿನಾಂಕವನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಗದಿ ಮಾಡಿದ್ದರೂ, ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸದಿದ್ದರೆ ಸಮಾರಂಭ ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಹೀಗಂತ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯಗೋಪಾಲ ದಾಸ್ ಅವರೇ ಹೇಳಿದ್ದಾರೆ.
ಶನಿವಾರ ನಡೆದ ಟ್ರಸ್ಟ್ ಸಭೆಯಲ್ಲಿ ಆಗಸ್ಟ್ 3 ಅಥವಾ ಆಗಸ್ಟ್ 5ರ ದಿನಾಂಕಗಳನ್ನು ಭೂಮಿಪೂಜೆಗೆ ನಿಗದಿ ಮಾಡಲು ನಿರ್ಧರಿಸಲಾಗಿತ್ತು.
ಅ.5ಕ್ಕೆ ರಾಮಮಂದಿರಕ್ಕೆ ಮೋದಿ ಭೂಮಿಪೂಜೆ: ಪೂಜಾ ಕೈಂಕರ್ಯಗಳಲ್ಲಿ ಮೋದಿ ಭಾಗಿ ಸಾಧ್ಯತೆ!
ಈ ಬಗ್ಗೆ ಭಾನುವಾರ ಪತ್ರಿಕೆಯೊಂದರ ಜತೆ ಮಾತನಾಡಿದ ದಾಸ್ ಅವರಿಗೆ ‘ಆಗಸ್ಟ್ 5ರಂದು ಮೋದಿ ಅವರು ಅನಿವಾರ್ಯ ಕಾರಣದಿಂದ ಬಾರದಿದ್ದರೆ ಏನು ಮಾಡುತ್ತೀರಿ?’ ಎಂದು ಪ್ರಶ್ನಿಸಿದಾಗ, ‘ಪ್ರಧಾನಿ ಅಂದು ಬರುವ ವಿಶ್ವಾಸವಿದೆ. ಆದರೆ ಅನಿವಾರ್ಯ ಕಾರಣ ಅಥವಾ ರಾಷ್ಟ್ರೀಯ ವಿಷಯಗಳಿಂದ ಪ್ರಧಾನಿಗೆ ಬರಲು ಆಗದಿದ್ದರೆ ಭೂಮಿಪೂಜೆಯನ್ನು ತಡ ಮಾಡುತ್ತೇವೆ. ಪ್ರಧಾನಿಯವರ ಭೇಟಿಗೆ ಕಾಯುತ್ತೇವೆ’ ಎಂದರು.
300 ಕೋಟಿಯ ರಾಮಮಂದಿರ: ಆ.3 ಅಥವಾ 5ಕ್ಕೆ ಭೂಮಿಪೂಜೆ: ಮೋದಿಗೆ ಆಹ್ವಾನ!
‘ಸೋಮನಾಥ ಮಂದಿರದ ಭೂಮಿಪೂಜೆ ಸಮಾರಂಭಕ್ಕೆ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಹಾಗೂ ಗೃಹ ಸಚಿವ ವಲ್ಲಭಭಾಯಿ ಪಟೇಲ್ ಆಗಮಿಸಿದ್ದರು. 3 ದಿನ ವೈಭವದ ಸಮಾರಂಭ ನಡೆದಿತ್ತು. ಅದೇ ರೀತಿಯ ಭವ್ಯ ಸಮಾರಂಭವನ್ನು ನಡೆಸಲು ಉದ್ದೇಶಿಸಿದ್ದೆವು. ಆದರೆ ಕೊರೋನಾ ಕಾರಣ ಅಂಥ ಸಮಾರಂಭ ಈಗ ಸಾಧ್ಯವಿಲ್ಲ. ಆದರೆ ತುಂಬಾ ಯತ್ನದ ನಂತರ ಭೂಮಿಪೂಜೆಗೆ ಬರಲು ಪ್ರಧಾನಿಯವರ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ