ಕೇಳಿದ್ದಕ್ಕಿಂತ ಐದು ಪಟ್ಟು ಹೆಚ್ಚು ದುಡ್ಡು ನೀಡ್ತಿದ್ದ ಎಟಿಎಂ ಮುಂದೆ ಮುಗಿಬಿದ್ದ ಜನ

Published : Jun 16, 2022, 03:44 PM ISTUpdated : Jun 16, 2022, 03:49 PM IST
ಕೇಳಿದ್ದಕ್ಕಿಂತ ಐದು ಪಟ್ಟು ಹೆಚ್ಚು ದುಡ್ಡು ನೀಡ್ತಿದ್ದ ಎಟಿಎಂ ಮುಂದೆ ಮುಗಿಬಿದ್ದ ಜನ

ಸಾರಾಂಶ

ಮಹಾರಾಷ್ಟ್ರದ ನಾಗಪುರದಲ್ಲಿ ಎಟಿಎಂಗೆ ತೆರಳಿ ಐನೂರು ರೂಪಾಯಿ ಡ್ರಾ ಮಾಡಲು ಹೊರಟ  ವ್ಯಕ್ತಿಗೆ ಐನೂರು ರೂಪಾಯಿಯ ಐದು ನೋಟುಗಳು ಸಿಕ್ಕಿದ್ದು ಒಟ್ಟು ಎರಡೂವರೆ ಸಾವಿರ ರೂಪಾಯಿಗಳು ಒಮ್ಮೆಲೆ ಅವರ ಕೈ ಸೇರಿದೆ.

ನಾಗಪುರ: ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ಹೋದ ವೇಳೆ ಕೆಲವೊಮ್ಮೆ ಹಣ ಇಲ್ಲದಿರುವುದು, ಹಣ ಡ್ರಾ ಆದ ಬಗ್ಗೆ ಮೊಬೈಲ್‌ಗೆ ಸಂದೇಶ ಬಂದರೂ ಎಟಿಎಂನಿಂದ ಕ್ಯಾಶ್ ಬರದೇ ಇರುವುದು. ಒಮ್ಮೊಮ್ಮೆ ಡ್ರಾ ಆಗಿದ್ದಕ್ಕಿಂತ ಕಡಿಮೆ ಹಣ ಬರುವುದು ಇಂತಹ ಅನುಭವ ನಿಮಗೂ ಆಗಿರಬಹುದು. ಆದರೆ ಎಟಿಎಂ ನಿಮಗೆ ನೀವು ಎಂಟ್ರಿ ಮಾಡಿದ ಹಣಕ್ಕಿಂತ ಐದು ಪಟ್ಟು ಹೆಚ್ಚು ಹಣ ನೀಡಿದರೆ ಹೇಗಾಗಬಹುದು. ಧರ್ಮಕ್ಕೆ ಹಣ ಸಿಕ್ಕರೇ ಯಾರಿಗೆ ಬೇಡ. ಹಾಗಾಗಿ ಖುಷಿ ಖುಷಿಯಾಗಿ ಹಿಗ್ಗುವುದು ಸಾಮಾನ್ಯ. ಹಾಗೆಯೇ ಮಹಾರಾಷ್ಟ್ರದ (Maharashtra) ನಾಗಪುರದಲ್ಲಿ(nagapur) ಎಟಿಎಂಗೆ ಹೋದ ವ್ಯಕ್ತಿಯೊಬ್ಬರಿಗೆ ಇದೇ ರೀತಿಯ ಅನುಭವ ಆಗಿದೆ. ಎಟಿಎಂಗೆ ತೆರಳಿ ಐನೂರು ರೂಪಾಯಿ ಡ್ರಾ ಮಾಡಲು ಹೊರಟ ಅವರಿಗೆ ಐನೂರು ರೂಪಾಯಿಯ ಐದು ನೋಟುಗಳು ಸಿಕ್ಕಿದ್ದು ಒಟ್ಟು ಎರಡೂವರೆ ಸಾವಿರ ರೂಪಾಯಿಗಳು ಒಮ್ಮೆಲೆ ಅವರ ಕೈ ಸೇರಿದೆ.

ಆತ ಮತ್ತೆ 500 ರೂಪಾಯಿ ಡ್ರಾ ಮಾಡಲು ಹೊರಟಿದ್ದು, ಆಗ ಆತನಿಗೆ ಮತ್ತೆಯೂ 2,500  ಸಿಕ್ಕಿದೆ. ಮಹಾರಾಷ್ಟ್ರದ ನಾಗಪುರದಿಂದ (Nagpur) 30 ಕಿ.ಮೀ ದೂರದಲ್ಲಿರುವ ಖಪ್ರಖೇಡ ನಗರದಲ್ಲಿ ಖಾಸಗಿ ಬ್ಯಾಂಕ್‌ಗೆ ಸೇರಿದ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಈ ವಿಚಾರ ಕಾಡ್ಗಿಚ್ಚಿನಂತೆ ಆ ಪ್ರದೇಶದಲ್ಲಿ ಹಬ್ಬಿದ್ದು, ಜನ ಈ ಎಟಿಎಂ ಮುಂದೆ ದೌಡಾಯಿಸಿದ್ದಾರೆ. 

ಹಣ ಹೊರ ಬರ್ತಿದಂತೆ ಎಟಿಎಂ ಒಳಗೆ ಯುವತಿಯ ಡಿಂಕಚಕ ಡಾನ್ಸ್ : ವಿಡಿಯೋ ವೈರಲ್‌

ನಂತರ ಬ್ಯಾಂಕ್‌ನ ಗ್ರಾಹಕರೊಬ್ಬರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಎಟಿಎಂ ಕೇಂದ್ರವನ್ನು ಬಂದ್‌ ಮಾಡಿ ಬ್ಯಾಂಕ್‌ ಸಿಬ್ಬಂದಿಗೆ ಎಟಿಎಂನಲ್ಲಿ (Automated Teller Machine) ಸಮಸ್ಯೆಯಾಗಿರುವ ಬಗ್ಗೆ ಮಾಹಿತಿ ನೀಡಿದರು ಎಂದು ಖಪ್ರಖೇಡ್ ಪೊಲೀಸ್ ಠಾಣೆ (Khaparkheda police station) ಸಿಬ್ಬಂದಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಎಟಿಎಂ ಹೆಚ್ಚಿನ ಹಣವನ್ನು ನೀಡುತ್ತಿತ್ತು ಎಂದು ಅವರು ಹೇಳಿದರು. 

ಎಟಿಎಂಗೆ ಹಾಕೋ ಹಣದೊಂದಿಗೆ ಪರಾರಿಯಾದ ಸಿಬ್ಬಂದಿ, ಹೊಸ ಮೊಬೈಲ್ ಖರೀದಿಸಿ ಸಿಕ್ಕಿಬಿದ್ದ

100 ಮುಖಬೆಲೆಯ ನೋಟುಗಳನ್ನು ವಿತರಿಸುವ ಎಟಿಎಂ ಟ್ರೇನಲ್ಲಿ 500 ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ತಪ್ಪಾಗಿ ಇಡಲಾಗಿತ್ತು. ಇದರಿಂದ ಈ ರೀತಿಯ ಅನಾಹುತವಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಆರ್ಥಿಕ ವಂಚನೆ ತಡೆಯೋ ಉದ್ದೇಶದಿಂದ ಎಲ್ಲ ಬ್ಯಾಂಕುಗಳ ಎಟಿಎಂ (ATM)ಕೇಂದ್ರಗಳಲ್ಲಿ ಯುನಿಫೈಡ್‌ ಪೇಮೆಂಟ್ ಇಂಟರ್ಫೇಸ್ (UPI) ಮೂಲಕ ಕಾರ್ಡ್ ರಹಿತ (cardless) ವಿತ್ ಡ್ರಾ (withdrawal) ಆಯ್ಕೆ ಒದಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಶಿಫಾರಸ್ಸು ಮಾಡಿದೆ. 
ಭಾರತೀಯ ರಿಸರ್ವ್ ಬ್ಯಾಂಕ್ (RBI)ನಿಯಂತ್ರಣಕ್ಕೊಳಪಟ್ಟಿರುವ ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (NPCI) ಯುಪಿಐ (UPI) ಅಭಿವೃದ್ಧಿಪಡಿಸಿದೆ. ಐಎಂಪಿಎಸ್ (IMPS) ಮೂಲಸೌಕರ್ಯ ಆಧರಿಸಿ ಯುಪಿಐ ಅಭಿವೃದ್ಧಿಪಡಿಸಲಾಗಿದ್ದು,ಇದು ಯಾವುದೇ ಎರಡು ಬ್ಯಾಂಕ್ ಖಾತೆಗಳ ನಡುವೆ ತಕ್ಷಣ ಹಣ ವರ್ಗಾಯಿಸಲು  ಅವಕಾಶ ಕಲ್ಪಿಸಿದೆ. 

ಕಾರ್ಡ್ ರಹಿತ ವಹಿವಾಟು ಅಂದ್ರೆ ಹಣವನ್ನು ಒಂದು ಖಾತೆಯಿಂದ ಭಾರತದಲ್ಲಿರೋ ಯಾವುದೇ ವ್ಯಕ್ತಿಗೆ ಮಾನ್ಯತೆ ಹೊಂದಿರೋ ಮೊಬೈಲ್ ಸಂಖ್ಯೆ ಮೂಲಕ ಕಳುಹಿಸೋದು. ಈ ಸೌಲಭ್ಯ ಹೊಂದಿರೋ ಗ್ರಾಹಕ ಡೆಬಿಟ್ ಅಥವಾ ಎಟಿಎಂ ಕಾರ್ಡ್ ಬಳಸದೆ ಎಟಿಎಂನಿಂದ ನಗದು ವಿತ್ ಡ್ರಾ ಮಾಡಬಹುದಾಗಿದೆ. ಈ ಸೌಲಭ್ಯವನ್ನು ಯಾವುದೇ ಬ್ಯಾಂಕಿನ ಎಟಿಎಂ, ಮೂರನೇ ವ್ಯಕ್ತಿ ಹಾಗೂ ವೈಟ್ ಲೇಬಲ್ ಎಟಿಎಂಗಳಲ್ಲಿ ಬಳಸಬಹುದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!