
ಬಿಜೆಪಿ- ಕಾಂಗ್ರೆಸ್ ನೇರ ಸಮರ: ಯಾರ ಬಲ, ದೌರ್ಬಲ್ಯ, ಅವಕಾಶ, ಸವಾಲುಗಳು ಏನೇನು?
ಬಲ: ದಶಕಕ್ಕೂ ಹೆಚ್ಚು ಕಾಲ ಆಳ್ವಿಕೆ. ಅನೇಕ ಜನಕಲ್ಯಾಣ ಯೋಜನೆಯಿಂದ ಪಟ್ಟಭದ್ರ. ನಕ್ಸಲ್ ಶರಣಾಗತಿ ಬಹುದೊಡ್ಡ ಸಾಧನೆ. ಸಿಎಂ ಹಿಮಾಂತ ಬಿಸ್ವ ಶರ್ಮಾ ವರ್ಚಸ್ಸು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಪ್ರಚಾರದ ಬಲ.
ದೌರ್ಬಲ್ಯ: ಪ್ರಗತಿ ಕಾಣದ ಪ್ರದೇಶಗಳಲ್ಲಿ ಆಡಳಿತ ವಿರೋಧಿ ಅಲೆಯ ಆತಂಕ. ಮನೆ ತೆರವು ಕ್ರಮದಿಂದ ಬಂಗಾಳಿ ಮುಸಲ್ಮಾನರ ಮತ ನಷ್ಟ. ಸಿಎಂ ಶರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪದ ಕಳಂಕ.
ಅವಕಾಶ: ವಿಪಕ್ಷ ಛಿದ್ರಗೊಂಡಿರುವುದರ ಲಾಭ. ಸ್ತ್ರೀಯರು, ಮಕ್ಕಳು, ಹಿಂದುಳಿದವರ ಪರ ಯೋಜನೆಗಳು ಹಾಗೂ ಅಕ್ರಮ ವಲಸಿಗರ ವಿರುದ್ಧದ ಕಠಿಣ ಕ್ರಮದಿಂದ ಬೆಂಬಲದ ನಿರೀಕ್ಷೆ.
ಸವಾಲು: ಟಿಕೆಟ್ ಸಿಗದ ಆಕಾಕ್ಷಿಗಳ ಅಸಮಾಧಾನ ನಿಭಾಯಿಸಬೇಕು. ಮುಸಲ್ಮಾನರ ವಿರುದ್ಧದ ಸಿಎಂ ವಾಗ್ದಾಳಿಯಿಂದ ಆ ಸಮುದಾಯದ ಮತ ಕೈತಪ್ಪಬಹುದು.
ಬಲ: ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಯಿಂದ ಲಾಭ. ಬಿಜೆಪಿ ವಿರುದ್ಧದ ಬಂಗಾಳಿ ಮುಸಲ್ಮಾನರ ಕೋಪವೂ ವರ. ಬಿಜೆಪಿ ವಿರುದ್ಧ ಜೋರ್ಹಾಟ್ನಿಂದ ಗೆದ್ದ ಗೌರವ್ ಗೊಗೋಯ್ ಸಿಎಂ ಮುಖವೆಂದು ಪ್ರಚಾರ. ಸಿಎಂ, ಪರಿವಾರದ ಭ್ರಷ್ಟಾಚಾರ ಆರೋಪದ ಅಸ್ತ್ರ.
ದೌರ್ಬಲ್ಯ: ಬಿಜೆಪಿಗೆ ಬಿಸ್ವಾ ವಲಸೆ ಬಳಿಕ ರಾಜ್ಯದಲ್ಲಿ ಕುಂದಿದ ಶಕ್ತಿ. ಒಳ-ಒಡಕುಗಳಿಂದ ಹಿನ್ನಡೆ ಸಂಭವ. ಗೊಗೋಯ್ ಪತ್ನಿಗೆ ಪಾಕಿಸ್ತಾನದ ನಂಟು ಆರೋಪ.
ಅವಕಾಶ: ಸಿಎಂ ವಿರುದ್ಧದ ಭ್ರಷ್ಟಾಚಾರ ಆರೋಪ, ಅಲ್ಪಸಂಖ್ಯಾತರು ಎದುರಿಸಿಸ ಮಾನವೀಯ ಬಿಕ್ಕಟ್ಟು, 6 ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನ ನೀಡುವಲ್ಲಿ ಸರ್ಕಾರದ ವಿಫಲತೆಯ ಉಲ್ಲೇಖ. ಎನ್ಡಿಎ ಕೂಟದ ಅತೃಪ್ತರಿಗೆ ಗಾಳ.
ಸವಾಲು: ಅಸ್ಸಾಮಿಗರ ಕಡೆಗಣಿಸಿ ಬೆಂಗಾಲಿ ಮುಸಲ್ಮಾನರನ್ನೇ ಮತಬ್ಯಾಂಕ್ ಎಂದು ಪರಿಗಣಿಸಿದರೆ ಹೆಚ್ಚು ವೋಟ್ ಗಳಿಕೆ ಕಷ್ಟ. ಪ್ರಮುಖ ನಯಕರು ಪಕ್ಷ ತೊರೆಯುತ್ತಿರುವುದೂ ಸವಾಲು.
ಇದನ್ನೂ ಓದಿ: Election: ಕೇರಳ ತ್ರಿಕೋನ ಹೋರಾಟದ ಭೂಮಿ; ಯಾರ ಬಲ, ದೌರ್ಬಲ್ಯ, ಅವಕಾಶ, ಸವಾಲುಗಳು ಏನೇನು?
ಇದನ್ನೂ ಓದಿ: ಪಶ್ಚಿಮ ಬಂಗಾಳದ ಕದನ ಕಣ: ಸಿಎಂ ಮಮತಾ ಬ್ಯಾನರ್ಜಿ ಬತ್ತಳಿಕೆಯಲ್ಲಿರೋ ಅಸ್ತ್ರ ಯಾವುದು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ