ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್‌ ಬಲಾಬಲದ ರಹಸ್ಯವೇನು? ವೋಟ್ ಬ್ಯಾಂಕ್ ಆಗುತ್ತಾ ಜುಬೀನ್ ಗರ್ಗ್‌ ಸಾವು?

Published : Mar 16, 2026, 11:15 AM IST
BJP Congress

ಸಾರಾಂಶ

ಅಸ್ಸಾಂ ಚುನಾವಣೆ: ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಆಡಳಿತಾರೂಢ ಬಿಜೆಪಿಯು ಹಿಮಾಂತ ಬಿಸ್ವ ಶರ್ಮಾ ಅವರ ವರ್ಚಸ್ಸು ಮತ್ತು ಕಲ್ಯಾಣ ಯೋಜನೆಗಳನ್ನು ನೆಚ್ಚಿಕೊಂಡಿದ್ದರೆ, ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಮತ್ತು ಅಲ್ಪಸಂಖ್ಯಾತರ ಅಸಮಾಧಾನವನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ

ಬಿಜೆಪಿ- ಕಾಂಗ್ರೆಸ್‌ ನೇರ ಸಮರ:  ಯಾರ ಬಲ, ದೌರ್ಬಲ್ಯ, ಅವಕಾಶ, ಸವಾಲುಗಳು ಏನೇನು?

ಬಿಜೆಪಿ

ಬಲ: ದಶಕಕ್ಕೂ ಹೆಚ್ಚು ಕಾಲ ಆಳ್ವಿಕೆ. ಅನೇಕ ಜನಕಲ್ಯಾಣ ಯೋಜನೆಯಿಂದ ಪಟ್ಟಭದ್ರ. ನಕ್ಸಲ್‌ ಶರಣಾಗತಿ ಬಹುದೊಡ್ಡ ಸಾಧನೆ. ಸಿಎಂ ಹಿಮಾಂತ ಬಿಸ್ವ ಶರ್ಮಾ ವರ್ಚಸ್ಸು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಪ್ರಚಾರದ ಬಲ.

ದೌರ್ಬಲ್ಯ: ಪ್ರಗತಿ ಕಾಣದ ಪ್ರದೇಶಗಳಲ್ಲಿ ಆಡಳಿತ ವಿರೋಧಿ ಅಲೆಯ ಆತಂಕ. ಮನೆ ತೆರವು ಕ್ರಮದಿಂದ ಬಂಗಾಳಿ ಮುಸಲ್ಮಾನರ ಮತ ನಷ್ಟ. ಸಿಎಂ ಶರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪದ ಕಳಂಕ.

ಅವಕಾಶ: ವಿಪಕ್ಷ ಛಿದ್ರಗೊಂಡಿರುವುದರ ಲಾಭ. ಸ್ತ್ರೀಯರು, ಮಕ್ಕಳು, ಹಿಂದುಳಿದವರ ಪರ ಯೋಜನೆಗಳು ಹಾಗೂ ಅಕ್ರಮ ವಲಸಿಗರ ವಿರುದ್ಧದ ಕಠಿಣ ಕ್ರಮದಿಂದ ಬೆಂಬಲದ ನಿರೀಕ್ಷೆ.

ಸವಾಲು: ಟಿಕೆಟ್‌ ಸಿಗದ ಆಕಾಕ್ಷಿಗಳ ಅಸಮಾಧಾನ ನಿಭಾಯಿಸಬೇಕು. ಮುಸಲ್ಮಾನರ ವಿರುದ್ಧದ ಸಿಎಂ ವಾಗ್ದಾಳಿಯಿಂದ ಆ ಸಮುದಾಯದ ಮತ ಕೈತಪ್ಪಬಹುದು.

ಕಾಂಗ್ರೆಸ್‌:

ಬಲ: ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಯಿಂದ ಲಾಭ. ಬಿಜೆಪಿ ವಿರುದ್ಧದ ಬಂಗಾಳಿ ಮುಸಲ್ಮಾನರ ಕೋಪವೂ ವರ. ಬಿಜೆಪಿ ವಿರುದ್ಧ ಜೋರ್ಹಾಟ್‌ನಿಂದ ಗೆದ್ದ ಗೌರವ್‌ ಗೊಗೋಯ್‌ ಸಿಎಂ ಮುಖವೆಂದು ಪ್ರಚಾರ. ಸಿಎಂ, ಪರಿವಾರದ ಭ್ರಷ್ಟಾಚಾರ ಆರೋಪದ ಅಸ್ತ್ರ.

ದೌರ್ಬಲ್ಯ: ಬಿಜೆಪಿಗೆ ಬಿಸ್ವಾ ವಲಸೆ ಬಳಿಕ ರಾಜ್ಯದಲ್ಲಿ ಕುಂದಿದ ಶಕ್ತಿ. ಒಳ-ಒಡಕುಗಳಿಂದ ಹಿನ್ನಡೆ ಸಂಭವ. ಗೊಗೋಯ್‌ ಪತ್ನಿಗೆ ಪಾಕಿಸ್ತಾನದ ನಂಟು ಆರೋಪ.

ಅವಕಾಶ: ಸಿಎಂ ವಿರುದ್ಧದ ಭ್ರಷ್ಟಾಚಾರ ಆರೋಪ, ಅಲ್ಪಸಂಖ್ಯಾತರು ಎದುರಿಸಿಸ ಮಾನವೀಯ ಬಿಕ್ಕಟ್ಟು, 6 ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನ ನೀಡುವಲ್ಲಿ ಸರ್ಕಾರದ ವಿಫಲತೆಯ ಉಲ್ಲೇಖ. ಎನ್‌ಡಿಎ ಕೂಟದ ಅತೃಪ್ತರಿಗೆ ಗಾಳ.

ಸವಾಲು: ಅಸ್ಸಾಮಿಗರ ಕಡೆಗಣಿಸಿ ಬೆಂಗಾಲಿ ಮುಸಲ್ಮಾನರನ್ನೇ ಮತಬ್ಯಾಂಕ್‌ ಎಂದು ಪರಿಗಣಿಸಿದರೆ ಹೆಚ್ಚು ವೋಟ್‌ ಗಳಿಕೆ ಕಷ್ಟ. ಪ್ರಮುಖ ನಯಕರು ಪಕ್ಷ ತೊರೆಯುತ್ತಿರುವುದೂ ಸವಾಲು.

ಇದನ್ನೂ ಓದಿ: Election: ಕೇರಳ ತ್ರಿಕೋನ ಹೋರಾಟದ ಭೂಮಿ; ಯಾರ ಬಲ, ದೌರ್ಬಲ್ಯ, ಅವಕಾಶ, ಸವಾಲುಗಳು ಏನೇನು?

ಅಸ್ಸಾಂ ಚುನಾವಣೆಯಲ್ಲಿ ಪ್ರಮುಖ ಅಂಶಗಳು

  • ಬಾಂಗ್ಲಾದೇಶ ಅಕ್ರಮ ವಲಸಿಗರ ಒಳನುಸುಳುವಿಕೆ
  • ಅತಿಕ್ರಮಣ ಭೂಮಿ ಹೊಂದಿದ್ದವರ ತೆರವು ಕೆಲಸ
  • ಬಾಲ್ಯ ವಿವಾಹ, ಬಹುಪತ್ನಿತ್ವ ವಿರುದ್ಧ ಬಿಜೆಪಿ ಕ್ರಮ
  • ಬಿಜೆಪಿ ಸರ್ಕಾರದ ಅಭಿವೃದ್ಧಿ / ಕಲ್ಯಾಣ ಯೋಜನೆಗಳು
  • ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣ
  • ಸಿಂಗಾಪುರದಲ್ಲಿ ಖ್ಯಾತ ಗಾಯಕ ಜುಬೀನ್ ಗರ್ಗ್‌ ಸಾವು

ಇದನ್ನೂ ಓದಿ: ಪಶ್ಚಿಮ ಬಂಗಾಳದ ಕದನ ಕಣ: ಸಿಎಂ ಮಮತಾ ಬ್ಯಾನರ್ಜಿ ಬತ್ತಳಿಕೆಯಲ್ಲಿರೋ ಅಸ್ತ್ರ ಯಾವುದು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Election: ಕೇರಳ ತ್ರಿಕೋನ ಹೋರಾಟದ ಭೂಮಿ; ಯಾರ ಬಲ, ದೌರ್ಬಲ್ಯ, ಅವಕಾಶ, ಸವಾಲುಗಳು ಏನೇನು?
ಪಶ್ಚಿಮ ಬಂಗಾಳದ ಕದನ ಕಣ: ಸಿಎಂ ಮಮತಾ ಬ್ಯಾನರ್ಜಿ ಬತ್ತಳಿಕೆಯಲ್ಲಿರೋ ಅಸ್ತ್ರ ಯಾವುದು?