ಬೆಂಕಿ ಹಚ್ಚುವವರು ನಾಯಕರಲ್ಲ ಎಂಬ ಸೇನಾ ಮುಖ್ಯಸ್ಥರ ಹೇಳಿಕೆಗೆ ವಿಪಕ್ಷಗಳ ಆಕ್ಷೇಪ!

By Suvarna NewsFirst Published Dec 27, 2019, 1:54 PM IST
Highlights

ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ವಿರುದ್ಧ ಮುಗಿಬಿದ್ದ ವಿಪಕ್ಷಗಳು| ಬೆಂಕಿ ಹಚ್ಚಿಸುವವರು ನಾಯಕರೇ ಅಲ್ಲ ಎಂದಿದ್ದ ಬಿಪಿನ್ ರಾವತ್| ಸೇನಾ ಮುಖ್ಯಸ್ಥರು ರಾಜಕೀಯ ಹೇಳಿಕೆ ನೀಡಿರುವುದು ಖಂಡನೀಯ ಎಂದ ಪ್ರತಿಪಕ್ಷಗಳು| ಸೇನಾ ಮುಖ್ಯಸ್ಥರು ತಮ್ಮ ಕಾರ್ಯವ್ಯಾಪ್ತಿ ತಿಳಿದುಕೊಳ್ಳುವುದು ಸೂಕ್ತ ಎಂದ ಒವೈಸಿ|

ನವದೆಹಲಿ(ಡಿ.27): ಬೆಂಕಿ ಹಚ್ಚಿಸುವವರು ನಾಯಕರೇ ಅಲ್ಲ ಎಂಬ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆಗೆ ವಿಪಕ್ಷಗಳು ಕೆಂಡಾಮಂಡಲವಾಗಿವೆ. ಸೇನಾ ಮುಖ್ಯಸ್ಥರು ರಾಜಕೀಯ ಹೇಳಿಕೆ ನೀಡಿರುವುದು ಖಂಡನೀಯ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.

ವಿದ್ಯಾರ್ಥಿಗಳು ಹಾಗೂ ಜನ ಸಮೂಹಕ್ಕೆ ಬೆಂಕಿ ಹಚ್ಚಲು ಹಾಗೂ ಹಿಂಸಾಚಾರ ನಡೆಸಲು ಮಾರ್ಗದರ್ಶನ ಮಾಡುವುದು ನಾಯಕತ್ವವಲ್ಲ. ಅಂತಹವರು ನಾಯಕರಾಗಲು ಯೋಗ್ಯರೂ ಅಲ್ಲ ಎಂದು ಬಿಪಿನ್ ರಾವತ್ ಹೇಳಿಕೆ ನೀಡಿದ್ದರು. 

ಮಿಲಿಟರಿಗಾಗಿ ಹೊಸ ಇಲಾಖೆ, ಹೊಸ ಬಾಸ್!

Army Chief Gen Bipin Rawat: Leaders are not those who lead ppl in inappropriate direction. As we are witnessing in large number of universities&colleges,students the way they are leading masses&crowds to carry out arson&violence in cities & towns. This is not leadership. pic.twitter.com/iIM6fwntSC

— ANI (@ANI)

ರಾವತ್ ಹೇಳಿಕೆಯನ್ನು ಖಂಡಿಸಿರುವ ಪ್ರತಿಪಕ್ಷಗಳು, ಇದೇ ಡಿ.31ರಂದು ನಿವೃತ್ತರಾಗಲಿರುವ ಜನರಲ್ ರಾವತ್ ರಾಜಕೀಯ ಹೇಳಿಕೆ ನೀಡಿರುವುದು ಅಚ್ಚರಿ ತಂದಿದೆ ಎಂದು ಹರಿಹಾಯ್ದಿವೆ.  

70 ವರ್ಷಗಳ ಭಾರತೀಯ ಸೇನೆಯ ಇತಿಹಾಸದಲ್ಲಿ ಸಂಪ್ರದಾಯದಿಂದ ವಿಮುಖವಾಗಿರುವುದನ್ನು ರಾವತ್ ಅವರ ರಾಜಕೀಯ ಹೇಳಿಕೆ ಬಿಂಬಿಸುತ್ತಿದೆ ಎಂದು ಹೋರಾಟಗಾರ ಯೋಗೇಂದ್ರ ಯಾವದ್ ಹೇಳಿದ್ದಾರೆ. 

POK ಕಸಿಯಲು ನಾವು ರೆಡಿ: ರಾವತ್ ಹೇಳಿಕೆಯಿಂದ ಪಾಕ್‌ನಲ್ಲಿ ಗಡಿಬಿಡಿ!

ಸೇನಾ ಮುಖ್ಯಸ್ಥರಿಗೆ ರಾಜಕೀಯ ಬಗ್ಗೆ ಮಾತನಾಡಲು ಅನುಮಿತಿ ನೀಡಿದರೆ ಸರ್ಕಾರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಅನುಮತಿ ನೀಡಿದಂತಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಟ್ವೀಟ್ ಮಾಡಿದ್ದಾರೆ. 

Asaduddin Owaisi, AIMIM on Army Chief General Bipin Rawat's remark: His statement undermines the Modi government. Our Prime Minister writes on his website that as a student he participated in protest during emergency. Then, according to Army Chief's statement that was also wrong. https://t.co/jWk14GJyek pic.twitter.com/r3NsxZbqH5

— ANI (@ANI)

ಅದರಂತೆ ಬಿಪಿನ್ ರಾವತ್ ಹೇಳಿಕೆಯನ್ನು ಖಂಡಿಸಿರುವ ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ, ತಮ್ಮ ಕಾರ್ಯವ್ಯಾಪ್ತಿ ತಿಳಿದುಕೊಳ್ಳುವುದು ಕೂಡ ನಾಯಕತ್ವದ ಭಾಗ ಎಂಬುದನ್ನು ಸೇನಾ ಮುಖ್ಯಸ್ಥರು ಮರೆತಿದ್ದಾರೆ ಎಂದು ಚಾಟಿ ಬೀಸಿದ್ದಾರೆ.

click me!