ಕೊರೋನಾ ತ್ಯಾಜ್ಯ ವಿಲೇವಾರಿ ಘಟಕ, ಸಮಸ್ಯೆಗೆ ಸಿಕ್ತು ಮುಕ್ತಿ!

Published : Jul 24, 2020, 02:33 PM ISTUpdated : Jul 24, 2020, 03:11 PM IST
ಕೊರೋನಾ ತ್ಯಾಜ್ಯ ವಿಲೇವಾರಿ ಘಟಕ, ಸಮಸ್ಯೆಗೆ ಸಿಕ್ತು ಮುಕ್ತಿ!

ಸಾರಾಂಶ

ಕೊರೋನಾ ವೈರಸ್ ನಿಯಂತ್ರಣಕ್ಕೆ ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಇತ್ತ ಆಸ್ಪತ್ರೆ ಸಿಬ್ಬಂದಿಗಳಿಗೆ ಪಿಪಿಇ ಕಿಟ್, ಗ್ಲೌಸ್ ಸೇರಿದಂತೆ ಹಲವು ತ್ಯಾಜ್ಯಗಳನ್ನು ಅಷ್ಟೇ ಎಚ್ಚರಿಕೆಯಿಂದ ನಾಶ ಮಾಡಬೇಕು. ಎಲ್ಲೆಂದರಲ್ಲಿ ಬಿಸಾಡಿದರೆ ಈ ತ್ಯಾಜ್ಯದಿಂದಲೂ ಕೊರೋನಾ ವೈರಸ್ ಹರಡುವ ಸಾಧ್ಯತೆಗಳಿವೆ. ಇದೀಗ ಈ ಸಮಸ್ಯೆಗೆ ಮುಕ್ತಿ ಹಾಡಲು ಕೊರೋನಾ ತ್ಯಾಜ್ಯಗಳಿಗಾಗಿ ವಿಶೇಷ ಕಸದ ಬುಟ್ಟಿ ಇದೀಗ ಎಲ್ಲರ ಗಮನ ಸೆಳೆದಿದೆ

ವಿಜಯವಾಡ(ಜು.24): ಕೊರೋನಾ ವೈರಸ್ ನಿಯಂತ್ರಣದಲ್ಲಿ ಹಲೆವೆಡೆ ಕೆಲವು ತಪ್ಪುಗಳು ಆಗುತ್ತಿವೆ. ಬಳಸಿದ ಮಾಸ್ಕ್, ಗ್ಲೌಸ್, ಪಿಪಿಇ ಕಿಟ್ ಸೇರಿದಂತೆ ಹಲವು ಕೊರೋನಾ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಜನರ ಆತಂತಕ್ಕೆ ಕಾರಣವಾದ ಘಟನೆಗಳ ಸಾಕಷ್ಟಿವೆ. ಕೊರೋನಾ ತ್ಯಾಜ್ಯಗಳನ್ನು ಎಚ್ಚರಿಕೆಯಿಂದ ನಾಶ ಮಾಡಬೇಕು. ಆದರೆ ಹಲವು ಭಾಗಗಳಲ್ಲಿ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ವಿಶೇಷ ಕಸದ ಬುಟ್ಟಿ ಇಡಲಾಗಿದೆ. ಈ ಕಸದ ಬುಟ್ಟಿಗಳ ತ್ಯಾಜ್ಯಗಳು ಕ್ಷಣಾರ್ಧದಲ್ಲಿ ಬೂದಿಯಾಗಿ ನಾಶವಾಗಲಿದೆ.

ಮಾಸ್ಕ್‌ ಧರಿಸದಿದ್ರೆ 1ಲಕ್ಷ ದಂಡ, ಲಾಕ್ಡೌನ್‌ ಉಲ್ಲಂಘಿಸಿದರೆ 2 ವರ್ಷ ಜೈಲು ಶಿಕ್ಷೆ!.

ಆಂಧ್ರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಈ ವಿನೂತನ ಪ್ರಯತ್ನ ಮಾಡಿದೆ. ವಿಜಯವಾಡದ ಬಹುತೇಕ ಕಡೆಗಳಲ್ಲಿ ಕೊರೋನಾ ವೈರಸ್ ಆಕಾರದ ಕಸದ ಬುಟ್ಟಿಗಳನ್ನು ಇಡಲಾಗಿದೆ. ಈ  ಕಸದ ಬುಟ್ಟಿಗಳು ಮಾಸ್ಕ್, ಶೀಲ್ಡ್ ಮಾಸ್ಕ್, ಗ್ಲೌಸ್ ಸೇರಿದಂತೆ ಕೊರೋನಾ ವೈರಸ್ ತ್ಯಾಜ್ಯಗಳನ್ನು ಹಾಕಲು ಇಡಲಾಗಿದೆ.

ಈ ಕಸದ ಬುಟ್ಟಿಗಳಲ್ಲಿ ಸಂಗ್ರಹವಾದ ಕೊರೋನಾ ತ್ಯಾಜ್ಯಗಳು ಮಿಶಿನ್ ಮೂಲಕ ನಾಶವಾಗಲಿದೆ. ಹಾಕಿದ ಕೊರೋನಾ ತ್ಯಾಜ್ಯಗಳು ಬೂದಿಯಾಗಿ ಮಿಶಿನ್ ಹಿಂಭಾಗದಲ್ಲಿ ಶೇಖರಣೆಯಾಗಲಿದೆ. ಈ ತ್ಯಾಜ್ಯಗಳನ್ನು ಮುನ್ಸಿಪಲ್ ಕಾರ್ಪೋರೇಶನ್ ಸಂಗ್ರಹ ಮಾಡಿ ವಿಲೇವಾರಿ ಮಾಡುತ್ತಿದೆ.

ವಿಜಯವಾಡದ 15 ಭಾಗಗಳಲ್ಲಿ ಈ ರೀತಿ ಕಸದ ಬುಟ್ಟಿಗಳನ್ನು ಇಡಲಾಗಿದೆ. ಪ್ರತಿ ತ್ಯಾಜ್ಯ ವಿಲೇವಾರಿ ಮಶಿನ್ 300 ಕೆಜಿಯಷ್ಟು ತ್ಯಾಜ್ಯ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.  ಪ್ಲಾಸ್ಟಿಕ್ ಬಾಟಲಿ ಕ್ರಾಶ್ ಮಶಿನ್‌ಗಳನ್ನು ನಾವು ಗಮನಿಸಿದ್ದೇವೆ. ಕ್ರೀಡಾಂಗಣಗಳ ಸುತ್ತ, ಪಾರ್ಕ್, ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಬಾಟಲ್ ಕ್ರಾಶ್ ಮಶಿನ್ ಕಾಣಸಿಗುತ್ತವೆ. ಇದೇ ರೀತಿ ಇದೀಗ ಕೊರೋನಾ ತ್ಯಾಜ್ಯ ವಿಲೇವಾರಿ ಮಶಿನ್ ಕೂಡ ಅತ್ಯಂತ ಉಪಯುಕ್ತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ