
ಹೈದ್ರಾಬಾದ್(ಜು.21): ಹೊಸದಾಗಿ ಮದುವೆಯಾಗಿ ಮೊದಲ ಆಷಾಢ ಮಾಸ ಆಚರಿಸುತ್ತಿರುವ ಮಗಳಿಗೆ ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬರು ಭರ್ಜರಿ ಉಡುಗೊರೆ ಕಳುಹಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ರಾಜಮಂಡ್ರಿಯ ಪ್ರಮುಖ ಉದ್ಯಮಿ ಬಲರಾಮ ಕೃಷ್ಣ ತಮ್ಮ ಮಗಳು ಪ್ರತ್ಯೂಷಾಳನ್ನು ಇತ್ತೀಚೆಗೆ ಪುದುಚೇರಿ ಯಾನಮ್ನಲ್ಲಿರುವ ಪವನ್ ಕುಮಾರ್ ಎಂಬುವವರಿಗೆ ವಿವಾಹ ಮಾಡಿಕೊಟ್ಟಿದ್ದರು.
ತೆಲುಗಿನ ನವ ವಧು-ವರರಿಗೆ ಆಷಾಡ ಮಾಸದಲ್ಲಿ ವಧುವಿನ ಮನೆಯವರು ಉಡುಗೊರೆ ನೀಡುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಬಲರಾಮ ಕೃಷ್ಣ, ಯಾನಮ್ನಲ್ಲಿ ತಮ್ಮ ಮಗಳು- ಅಳಿಯನ ಮನೆಗೆ ಉಡುಗೊರೆಯಾಗಿ 1000 ಕೆಜಿ ಮೀನು, 1000 ಕೆಜಿ ತರಕಾರಿ, 250 ಕೆಜಿ ಸೀಗಡಿ ಮೀನು, 250 ಕೆಜಿ ದಿನಸಿ ಸಾಮಾನು, 250 ಡಬ್ಬಿ ಉಪ್ಪಿನಕಾಯಿ, 250 ಕೆಜಿ ಸಿಹಿ ತಿನಿಸು, 50 ಕೆಜಿ ಕೋಳಿ ಹಾಗೂ 10 ಆಡುಗಳನ್ನು ಕಳುಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ