ಅಡುಗೆ ಪಾತ್ರೆಯಲ್ಲಿ ದೋಣಿ ವಿಹಾರ ಮಾಡಿದ ನವಜೋಡಿ!

Published : Oct 19, 2021, 10:17 AM IST
ಅಡುಗೆ ಪಾತ್ರೆಯಲ್ಲಿ ದೋಣಿ ವಿಹಾರ ಮಾಡಿದ ನವಜೋಡಿ!

ಸಾರಾಂಶ

* ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಪ್ರಸಂಗ * ಅಡುಗೆ ಪಾತ್ರೆಯಲ್ಲಿ ದೋಣಿ ವಿಹಾರ ಮಾಡಿದ ನವಜೋಡಿ! * ಪ್ರವಾ​ಹದ ಕಾರಣ ಪಾತ್ರೆ​ಯಲ್ಲಿ ತೇಲಿ​ಕೊಂಡು ಬಂದ​ರು

ಅಲಪ್ಪುಳ(ಅ.19): ದೇಶದಲ್ಲಿ ಕೊರೋನಾ ವೈರಸ್‌(Coronavirus) ಅಬ್ಬರ ಉತ್ತುಂಗ ಸ್ಥಿತಿಯಲ್ಲಿದ್ದಾಗ ಕೇರಳದಲ್ಲಿ(Kerala) ನಡೆದ ಕೆಲ ಮದುವೆಯ(Wedding) ಫೋಟೋಶೂಟ್‌ಗಳು ಕೋವಿಡ್‌ ಜಾಗೃತಿ ಮೂಡಿಸಿದ್ದವು. ಆದರೆ ಇದೀಗ ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ(Rain) ಕೇರಳದ ಕೆಲ ಜಿಲ್ಲೆಗಳು ನದಿಗಳಂತೆ ಭಾಸವಾಗಿವೆ. ಈ ಹಿನ್ನೆಲೆಯಲ್ಲಿ ಸೋಮವಾರ ವಿವಾಹದ ಬಾಂಧವ್ಯಕ್ಕೆ ಕಾಲಿಟ್ಟನವ ಜೋಡಿಯೊಂದು ಅಡುಗೆ ಮಾಡುವ ಪಾತ್ರೆಯನ್ನೇ ದೋಣಿಯಾಗಿಸಿಕೊಂಡು ಅದರಲ್ಲಿ ಮದುವೆ ಧಿರಿಸಿನಲ್ಲಿ ಕಲ್ಯಾಣ ಮಂಟಪಕ್ಕೆ ಬಂದಿದೆ.

ಕೊರಳಿಗೆ ಹೂವಿನ ಹಾರ ಹಾಕಿಕೊಂಡಿರುವ ವಧು-ವರ ಅಡುಗೆ ಪಾತ್ರೆಯಲ್ಲಿ ಕುಳಿತಿದ್ದು, ಆ ಪಾತ್ರೆಯು ಮೊಳಕಾಲು ಉದ್ದದ ನೀರಿನಲ್ಲಿ ತೇಲುತ್ತಿದೆ. ಆರೋಗ್ಯ ಕಾರ್ಯಕರ್ತರಾಗಿರುವ ಆಕಾಶ್‌ ಮತ್ತು ಐಶ್ವರ್ಯ ಎಂಬುವರೇ ಅಡುಗೆ ಪಾತ್ರೆಯಲ್ಲಿ ದೋಣಿ ವಿಹಾರ ಮಾಡಿದ ನವ ಜೋಡಿ. ಈ ವಿಡಿಯೋ ಟೀವಿ ವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಧು-ವರ, ‘ಸೋಮವಾರ ಮದುವೆ ನಿಶ್ಚಯವಾಗಿತ್ತು. ಆದರೆ ಮನೆಯಿಂದ ಕಲ್ಯಾಣ ಮಂಟಪಕ್ಕೆ ಹೋಗಲು ವಾಹನಗಳ ವ್ಯವಸ್ಥೆ ಇರಲಿಲ್ಲ. ಹಾಗೆಂದು ಈ ಶುಭ ಗಳಿಗೆಯಲ್ಲಿ ಮದುವೆಯಾಗಲೇಬೇಕು ಎಂದು ತೀರ್ಮಾನಿಸಲಾಗಿತ್ತು. ಜತೆಗೆ ಕೋವಿಡ್‌ ಕಾರಣಕ್ಕೆ ಕಮ್ಮಿ ಜನರನ್ನು ಆಹ್ವಾನಿಸಲಾಗಿತ್ತು. ಹೀಗಾಗಿ ಅಡುಗೆ ಪಾತ್ರೆಯಲ್ಲೇ ಕಲ್ಯಾಣ ಮಂಟಪಕ್ಕೆ ಬಂದೆವು’ ಎಂದಿದ್ದಾರೆ.

ಕೇರಳ ಮಳೆ ಭೀಕರತೆ: ತಬ್ಬಿದ ಸ್ಥಿತಿಯಲ್ಲಿ ತಾಯಿ, ಮಗು ಶವಪತ್ತೆ!

ಕೇರಳದಲ್ಲಿ(Kerala) ಸುರಿದ ಭಾರೀ ಮಳೆ(Rain), ಪ್ರವಾಹ(Flood), ಭೂಕುಸಿತದಿಂದ(Landslide) ಭಾರೀ ಸಾವು ನೋವು ಉಂಟಾಗಿದೆ. ಕೇರಳ ರಣಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ರಾಜ್ಯ ಮತ್ತು ಕೇಂದ್ರ ರಕ್ಷಣಾ ತಂಡಗಳು(Rescue Teams) ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆ ವೇಳೆ ಮಳೆ ಸೃಷ್ಟಿಸಿರುವ ಭೀಕರತೆ ಗೋಚರವಾಗುತ್ತಿದೆ. ಅವಶೇಷ ತೆರವು ವೇಳೆ ಪತ್ತೆಯಾಗಿರುವ ಶವಗಳು ಮನಕಲಕುವ ಕತೆಗಳನ್ನು ಹೇಳುತ್ತಿವೆ.

ಭಾನುವಾರ ಮೂರು ಮಕ್ಕಳು ಪರಸ್ಪರ ಕೈ ಹಿಡಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿತ್ತು. ಸೋಮವಾರ ತಾಯಿ(Mother) ಹಾಗೂ ಮಗು​ವಿನ ಶವವು ತಪ್ಪಿ​ಕೊಂಡ ಸ್ಥಿತಿ​ಯಲ್ಲೇ ಪತ್ತೆ​ಯಾ​ಗಿದೆ. ಈ ದೃಶ್ಯವನ್ನು ಕಂಡು ಖುದ್ದು ರಕ್ಷಣಾ ತಂಡ​ಗಳೇ ಕಣ್ಣೀರು ಹಾಕಿ​ವೆ.

ಸಂಬಂಧಿಕರ ಮದುವೆಗೆ ಬಂದಿದ್ದ ತಾಯಿ ಹಾಗೂ ಮಳೆಗೆ ಕುಸಿದ ಮನೆಯ ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿರುವ ಈ ದಾರುಣ ಘಟನೆ ಕೇರಳದ ಇಡುಕ್ಕಿ(Idukki) ಜಿಲ್ಲೆಯಲ್ಲಿ ನಡೆದಿದೆ. ಅವಶೇಷಗಳನ್ನು ತೆಗೆ​ಯು​ವ ಸಮಯದಲ್ಲಿ ತಾಯಿ-ಮಗ ಇಬ್ಬರೂ ತಬ್ಬಿಕೊಂಡು ಮಲಗಿರುವ ಸ್ಥಿತಿ​ಯ​ಲ್ಲಿ​ದ್ದರು. ಇದೇ ವೇಳೆ, ಮತ್ತೊಂದು ಮಗು ತೊಟ್ಟಿಲಿನಲ್ಲೇ ಸಾವನ್ನಪ್ಪಿರುವ ದಾರುಣ ದೃಶ್ಯ ಕಂಡು​ಬಂತು.

ಮೃತ ತಾಯಿ ಮಗನನ್ನು ಫೌಝಿಯಾ (28) ಮತ್ತು ಅಮೀನ್‌(10) ಎಂದು ಗುರುತಿಸಲಾಗಿದೆ. ಕಟ್ಟಡ ಕುಸಿಯುವ ಮೊದಲು ಮನೆಯ ಒಳಗೆ ನೀರು ನುಗ್ಗುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಸಂಬಂಧಿಕರೊಬ್ಬರಿಗೆ ಇವರು ಕಳಿ​ಸಿ​ದ್ದ​ರು. ಆದರೆ ಕೆಲವು ಹೊತ್ತಿ​ನಲ್ಲೇ ಜಲ​ಪ್ರ​ಳ​ಯವು ಇವ​ರನ್ನು ಆಪೋ​ಶನ ತೆಗೆ​ದು​ಕೊಂಡಿ​ದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕ ಸಂಸದರ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ, ತೀವ್ರ ಕ್ಲಾಸ್, ಆ 45 ನಿಮಿಷ ಸಭೆಯಲ್ಲಿ ಹೇಳಿದ್ದೇನು?
ಚೈನೀಸ್ ಮಾಂಜಾಗೆ ಮತ್ತೊಂದು ಬಲಿ: ಮಗಳನ್ನು ಶಾಲೆಗೆ ಬಿಟ್ಟು ವಾಪಸಾಗುತ್ತಿದ್ದ ತಂದೆ ಸಾವು