ಆತ್ಮ*ತ್ಯೆ ಮಾಡಿಕೊಂಡ ವೈದ್ಯೆಗೆ ಬೆದರಿಸಿದ್ದ ಸಂಸದ?

Kannadaprabha News   | Kannada Prabha
Published : Oct 26, 2025, 04:27 AM IST
Woman Doctor death Case

ಸಾರಾಂಶ

ಪೊಲೀಸರ ಮೇಲೆ ಅತ್ಯಾ*ರ ಹಾಗೂ ಮಾನಸಿಕ ಕಿರುಕುಳ ಆರೋಪ ಹೊರಿಸಿ ಕೈನಲ್ಲಿ ಮರಣಪತ್ರ ಬರೆದುಕೊಂಡು ಆತ್ಮ*ತ್ಯೆ ಮಾಡಿಕೊಂಡ ಮಹಾರಾಷ್ಟ್ರದ ಸತಾರಾ ವೈದ್ಯೆಯ ಮತ್ತೊಂದು 4 ಪುಟಗಳ ಡೆತ್‌ನೋಟ್‌ ಆಕೆ ತಂಗಿದ್ದ ಹೋಟೆಲ್‌ನಲ್ಲಿ ಸಿಕ್ಕಿದೆ. ಅದರಲ್ಲಿ ಸಂಸದನಿಂದಲೂ ತನಗೆ ಬೆದರಿಕೆ ಬಂದಿತ್ತು ಎಂದು ಆಕೆ ಬರೆದಿದ್ದಾರೆ.

ಪುಣೆ: ಪೊಲೀಸರ ಮೇಲೆ ಅತ್ಯಾ*ರ ಹಾಗೂ ಮಾನಸಿಕ ಕಿರುಕುಳ ಆರೋಪ ಹೊರಿಸಿ ಕೈನಲ್ಲಿ ಮರಣಪತ್ರ ಬರೆದುಕೊಂಡು ಆತ್ಮ*ತ್ಯೆ ಮಾಡಿಕೊಂಡ ಮಹಾರಾಷ್ಟ್ರದ ಸತಾರಾ ವೈದ್ಯೆಯ ಮತ್ತೊಂದು 4 ಪುಟಗಳ ಡೆತ್‌ನೋಟ್‌ ಆಕೆ ತಂಗಿದ್ದ ಹೋಟೆಲ್‌ನಲ್ಲಿ ಸಿಕ್ಕಿದೆ. ಅದರಲ್ಲಿ ಸಂಸದನಿಂದಲೂ ತನಗೆ ಬೆದರಿಕೆ ಬಂದಿತ್ತು ಎಂದು ಆಕೆ ಬರೆದಿದ್ದಾರೆ.

‘ಪೊಲೀಸರು ಆಸ್ಪತ್ರೆಗೆ ಕರೆತರುವ ಆರೋಪಿಗಳ ಪರವಾಗಿ ವೈದ್ಯಕೀಯ ಪರೀಕ್ಷೆ ವರದಿ ಕೊಡಬೇಕು. ಮರಣೋತ್ತರ ಪರೀಕ್ಷೆಯ ವರದಿಯನ್ನು ತಿರುಚಿ ಬರೆಯಬೇಕು ಎಂದು ಎಂದು ಸಂಸದರೊಬ್ಬರು ಬೆದರಿಕೆ ಹಾಕಿದ್ದರು. ಪೊಲೀಸರಿಂದಲೂ ಇದೇ ಕಾರಣಕ್ಕೆ ಬೆದರಿಕೆ ಬರುತ್ತಿತ್ತು. ಸಂಸದರ ಇಬ್ಬರು ಪಿಎಗಳು ಆಸ್ಪತ್ರೆಗೆ ಬಂದು ಅಸಭ್ಯವಾಗಿ ವರ್ತಿಸುತ್ತಿದ್ದರು. ಬೇಡಿಕೆಗೆ ಸ್ಪಂದಿಸದೇ ಹೋದಾಗ ಎಸ್‌ಐ ಗೋಪಾಲ್‌ ಬಡನೆ ಅತ್ಯಾ*ರ ಮಾಡಿದ್ದ’ ಎಂದು ವೈದ್ಯೆ ಮರಣಪತ್ರದಲ್ಲಿ ಬರೆದುಕೊಂಡಿದ್ದಾರೆ.

ವೈದ್ಯೆ ಮೆಲೂ ದೂರು:

ಆದರೆ ವೈದ್ಯೆಯೇ ಹಲವು ಬಾರಿ ವೈದ್ಯಕೀಯ ವರದಿಗಳನ್ನು ಸಕಾಲಕ್ಕೆ ಕೊಡದೇ ತನಿಖೆಗೆ ಅಡ್ಡಿ ಮಾಡಿದ್ದಳು ಎಂದು ಪೊಲೀಸರು ಜಿಲ್ಲಾ ಸರ್ಜನ್‌ಗೆ 2 ತಿಂಗಳ ಹಿಂದೆ ದೂರಿದ್ದರು ಎಂದೂ ಈಗ ಗೊತ್ತಾಗಿದೆ.

ಓರ್ವ ಆರೋಪಿ ಸೆರೆ:

ಇದೇ ಪ್ರಕರಣದಲ್ಲಿ ಪೊಲೀಸರು ಮೊದಲ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಶಾಂತ್‌ ಬಾಣಕರ್‌ ಎಂಬ ಸಾಫ್ಟ್‌ವೇರ್‌ ಎಂಜಿನಿಯರ್‌ ಬಂಧಿತ. ವೈದ್ಯೆ ಇದ್ದ ಮನೆ ಮಾಲೀಕನ ಮಗನಾಗಿದ್ದು, ಈತ ವೈದ್ಯೆಗೆ ಮಾನಸಿಕ ಹಿಂಸೆ ನೀಡಿದ್ದ ಎಂದು ಆಕೆ ಮರಣಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮಿಕ್ಕವರಿಗೆ ಬಲೆ ಬೀಸಲಾಗಿದೆ.

ಡೆತ್‌ನೋಟಲ್ಲೇನಿದೆ?।

- ಆಸ್ಪತ್ರೆಗೆ ಬರುವ ಆರೋಪಿಗಳ ಪರವಾಗಿ ವರದಿ ಬರೆಯಲು ಒತ್ತಡ

- ಮರಣೋತ್ತರ ಪರೀಕ್ಷೆಯ ವರದಿಯನ್ನೇ ತಿರುಚುವಂತೆ ಬೆದರಿಕೆ

- ಪೊಲೀಸರಿಂದಲೂ ಬೆದರಿಕೆ, ಒಪ್ಪದಿದ್ದಾಗ ಗೋಪಾಲ್‌ನಿಂದ ರೇ*

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..