
ನವದೆಹಲಿ: ಚಳಿಗಾಲದ ಈ ಸಂದರ್ಭದಲ್ಲಿ ದೆಹಲಿಯ ವಾಯುಗುಣಮಟ್ಟ ಕುಸಿದಿದ್ದು, ಶುಕ್ರವಾರ ಅತಿ ಗಂಭೀರ ವಾಯುಗುಣಮಟ್ಟ ದಾಖಲಾಗಿದೆ. ಇದು ಕಳೆದ ಜನವರಿ ನಂತರದ ಅತಿ ಮಲಿನ ದಿನವಾಗಿದೆ. ಮುಂದಿನ 3 ದಿನಗಳವರೆಗೆ ತುಂಬಾ ಕೆಟ್ಟದಾದ ಪರಿಸ್ಥಿತಿಯಲ್ಲೇ ಮುಂದುವರೆಯಲಿದೆ ಎಂದು ಹವಾಮಾನ ವರದಿ ಹೇಳಿದೆ.
ವಾಯು ಗುಣಮಟ್ಟ ಸೂಚ್ಯಂಕ (Air quality index) 401 ರಿಂದ 500 ರೂಪಾಯಿ. ಇದ್ದರೆ ಅತಿ ಗಂಭೀರ ಎನ್ನಿಸಿಕೊಳ್ಳುತ್ತದೆ. ಶುಕ್ರವಾರ ಸಾಯಂಕಾಲ 4 ಗಂಟೆಯ ಸುಮಾರಿಗೆ ಆನಂದ ವಿಹಾರ ಪ್ರದೇಶದಲ್ಲಿ (Ananda Vihar area) ಗಾಳಿಯ ಗುಣಮಟ್ಟ 455 ಅಂಕಗಳಿಗೆ ಕುಸಿದಿದ್ದು, ಇದು ಅತ್ಯಂತ ಮಾಲಿನ್ಯ ಪ್ರದೇಶ ಎನಿಸಿಕೊಂಡಿದೆ. ದೆಹಲಿಯಲ್ಲಿ ಒಟ್ಟಾರೆ ಗುಣಮಟ್ಟ357, ಗಾಜಿಯಾಬಾದ್ನಲ್ಲಿ(Ghaziabad) 384, ನೋಯ್ಡಾದಲ್ಲಿ(Noida) 371, ಗ್ರೇಟರ್ ನೊಯ್ಡಾದಲ್ಲಿ 364 ಮತ್ತು ಫರೀದಾಬಾದ್ನಲ್ಲಿ (Faridabad) 346 ಅಂಕಗಳಷ್ಟು ದಾಖಲಾಗಿದೆ.
ಜಾಗೃತರಾಗಿರಿ…. ವಾಯುಮಾಲಿನ್ಯದಿಂದ ಕಾಡುತ್ತೆ ಶ್ವಾಸಕೋಶದ ಕ್ಯಾನ್ಸರ್
ಇದರಿಂದಾಗಿ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ವರದಿ ಹೇಳಿದೆ. ದೆಹಲಿಯಷ್ಟೇ ಅಲ್ಲದೇ ಪಂಜಾಬ್(Punjab), ಉತ್ತರಪ್ರದೇಶ (Uttar Pradesh) ಮತ್ತು ಬಿಹಾರಗಳಲ್ಲೂ(Bihar) ಗಾಳಿಯ ಗುಣಮಟ್ಟ ಕುಸಿದಿದೆ.
ವಾಯುಮಾಲಿನ್ಯ ತಡೆಗೆ ಅರಳೀಮರ ಹೆಚ್ಚು ಸಹಕಾರಿ; ಕೋಟಾ ಶ್ರೀನಿವಾಸ ಪೂಜಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ