ಕೆ.ಸಿ.ವೇಣುಗೋಪಾಲ್ ಇದ್ದ ವಿಮಾನ ಅಪಘಾತದಿಂದ ಜಸ್ಟ್‌ ಮಿಸ್

Kannadaprabha News   | Kannada Prabha
Published : Aug 12, 2025, 05:27 AM IST
KC Venugopal

ಸಾರಾಂಶ

ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ತಿರುವನಂತಪುರದಿಂದ ದಿಲ್ಲಿಗೆ ಹೋಗುತ್ತಿದ್ದ ಏರ್‌ ಇಂಡಿಯಾ ವಿಮಾನ ಪ್ರಕ್ಷುಬ್ಧತೆ ಹಾಗೂ ತಾಂತ್ರಿಕ ಸಮಸ್ಯೆಗೆ ಗುರಿಯಾಗಿ ಚೆನ್ನೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ನವದೆಹಲಿ : ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ತಿರುವನಂತಪುರದಿಂದ ದಿಲ್ಲಿಗೆ ಹೋಗುತ್ತಿದ್ದ ಏರ್‌ ಇಂಡಿಯಾ ವಿಮಾನ ಪ್ರಕ್ಷುಬ್ಧತೆ ಹಾಗೂ ತಾಂತ್ರಿಕ ಸಮಸ್ಯೆಗೆ ಗುರಿಯಾಗಿ ಚೆನ್ನೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

‘ಆದರೆ ಭೂಸ್ಪರ್ಶಕ್ಕೂ ಮುನ್ನ ಅದೇ ರನ್‌ವೇನಲ್ಲಿ ಇನ್ನೊಂದು ವಿಮಾನ ಇತ್ತು. ಅದರೂ ವಿಮಾನ ಲ್ಯಾಂಡಿಂಗ್‌ಗೆ ಯತ್ನ ನಡೆಸಿತ್ತು. ಆದರೆ ಪೈಲಟ್‌ ಕೂಡಲೇ ಮತ್ತೆ ಮೇಲೆ ವಿಮಾನ ಹಾರಿಸಿದ. ಹೀಗಾಗಿ ಅನಾಹುತ ತಪ್ಪಿತು. ಬಳಿಕ ಗಂಟೆಗಟ್ಟಲೆ ಆಗಸದಲ್ಲೇ ಗಿರಕಿ ಹೊಡೆದು 2ನೇ ಯತ್ನದಲ್ಲಿ ನಂತರ ವಿಮಾನ ಲ್ಯಾಂಡ್‌ ಆಯಿತು’ ಎಂದು ಕೆ.ಸಿ. ವೇಣುಗೋಪಾಲ್‌ ಆರೋಪಿಸಿದ್ದಾರೆ.

ಆದರೆ ಏರ್ ಇಂಡಿಯಾ ಈ ಹೇಳಿಕೆಯನ್ನು ನಿರಾಕರಿಸಿದೆ. ‘ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿತು ಹಾಗೂ ಹವಾಮಾನ ವೈಪರಿತ್ಯ ಉಂಟಾಯಿತು. ಹೀಗಾಗಿ ವಿಮಾನ ಚೆನ್ನೈನಲ್ಲಿ ಭೂಸ್ಪರ್ಶ ಮಾಡಬೇಕಾಯಿತು. ಲ್ಯಾಂಡಿಂಗ್‌ ವೇಳೆ ಇನ್ನೊಂದು ವಿಮಾನ ಇರಲಿಲ್ಲ. ಎಟಿಸಿ ಸೂಚನೆಯಂತೆ ವಿಮಾನವನ್ನು ಆಗಸದಲ್ಲೇ ಗಿರಕಿ ಹೊಡೆಸಿ, ಅದು ಸೂಚಿಸಿದಾಗ ಇಳಿಸಲಾಯಿತು’ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ, ‘ವೇಣು ಹೇಳಿಕೆಯನ್ನು ಏರ್‌ ಇಂಡಿಯಾ ನಿರಾಕರಿಸಿದೆ. ಅವರ ಹೇಳಿಕೆ ಸುಳ್ಳಾದರೆ ವೇಣು ಕ್ಷಮೆ ಯಾಚಿಸಬೇಕು. ಪರಿಣಾಮ ಎದುರಿಸಬೇಕು’ ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು
ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ