
ನವದೆಹಲಿ(ಏ.23): ಕೊರೋನಾ ವೈರಸ್ಗೆ ದೇಶ ತತ್ತರಿಸಿದೆ. ಹಲವು ಸೇವೆಗಳು ಸ್ಥಗಿತಗೊಂಡಿದೆ. ಕೆಲ ರಾಜ್ಯಗಳಲ್ಲಿ ಅಗತ್ಯ ಸೇವೆ ಹಾಗೂ ತುರ್ತು ಸೇವೆ ಹೊರತು ಪಡಿಸಿ ಇನ್ನಲ್ಲಾ ಬಂದ್ ಆಗಿದೆ. ಇದರ ನಡುವೆ ಭಾರದಲ್ಲಿ ಕೊರೋನಾ ಪ್ರಕರಣ ನಿಯಂತ್ರಣ ಮೀರಿ ಸಾಗುತ್ತಿರುವ ಕಾರಣ ಕೆನಡಾ ಇದೀಗ ಭಾರತದ ವಿಮಾನಗಳಿಗೆ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ಏರ್ ಇಂಡಿಯಾ ಕೆನಾಡ ಪ್ರಯಾಣದ ವಿಮಾನಗಳನ್ನು ರದ್ದುಗೊಳಿಸಿದೆ.
ಕೊರೋನಾ ಅಟ್ಟಹಾಸ; ಭಾರತಕ್ಕೆ ನೆರವು ನೀಡಲು ಸಿದ್ಧ ಎಂದ ಚೀನಾ!
ಭಾರತ, ಪಾಕಿಸ್ತಾನ ಸೇರಿದಂತೆ ಕೆಲ ರಾಷ್ಟ್ರಗಳ ವಿಮಾನಗಳನ್ನು ಕೆನಾಡ ನಿಷೇಧಿಸಿದೆ. ವ್ಯಾನ್ಕವರ್ ಹಾಗೂ ಟೊರೆಂಟೋ ನಗರಕ್ಕೆ ವಿಮಾನ ಪ್ರಯಾಣವನ್ನು ರದ್ದುಗೊಳಿಸಿದೆ. ಈ ಕುರಿತು ಏರ್ ಇಂಡಿಯಾ ಸ್ಪಷ್ಟನೆ ನೀಡಿದೆ. ಇಷ್ಟೇ ಅಲ್ಲ ಟ್ವಿಟರ್ ಮೂಲಕವೂ ಮಾಹಿತಿ ಹಂಚಿಕೊಂಡಿದೆ.
ಆಕ್ಸಿಜನ್ ತುಂಬಿಸಲು ಟ್ಯಾಂಕರ್ಗಳನ್ನು ಏರ್ಲಿಫ್ಟ್ ಮಾಡಿಸಿದ IAF
ಮೇ.22ರವರೆಗೆ ಏರ್ ಇಂಡಿಯಾ ವಿಮಾನ ರದ್ದುಗೊಳಿಸಿದೆ. ಆದರೆ ಕಾರ್ಗೋ ವಿಮಾನ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇಲ್ಲ. ಕೊರೋನಾ ಕಾರಣ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಕೆಡನಾ ಸರ್ಕಾರ ಹೇಳಿದೆ. ಸದ್ಯ ಕೊರೋನಾ ಭೀಕರತೆಗೆ ಭಾರತ ನಲುಗಿದೆ. ಭಾರತದಲ್ಲಿ ಒಂದೇ ದಿನ 314,835 ಪ್ರಕರ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ