
ನವದೆಹಲಿ(ಆ.06): ‘ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ’ ಎಂದು ಇತ್ತೀಚೆಗಷ್ಟೇ ಸಿಬಿಐಗೆ ವರದಿ ನೀಡಿದ್ದ ಏಮ್ಸ್ ಆಸ್ಪತ್ರೆಯ ಹಿರಿಯ ವಿಧಿವಿಜ್ಞಾನ ವೈದ್ಯ ಡಾ| ಸುಧೀರ್ ಗುಪ್ತಾ ಅವರದ್ದು ಎನ್ನಲಾದ ಆಡಿಯೋ ಟೇಪ್ವೊಂದು ಬಹಿರಂಗವಾಗಿದೆ. ಅದರಲ್ಲಿ ಸುಧೀರ್ ಅವರು ‘ಸುಶಾಂತ್ ಕೊಲೆ ಆಗಿದ್ದಾರೆ’ ಎಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಆಡಿಯೋ ಟೇಪ್ ಭಾರಿ ಸಂಚಲನಕ್ಕೆ ಕಾರಣವಾಗಿದೆ.
‘ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆಯಾಗಿದ್ದಾರೆ’ ಎಂದು ಸುಧೀರ್ ಹೇಳಿರುವುದು ಆಡಿಯೋ ಟೇಪ್ನಲ್ಲಿ ಕೇಳಿಸುತ್ತದೆ, ಸುಶಾಂತ್ ಅವರ ಮೃತದೇಹದ ಫೋಟೋಗಳನ್ನು ನೋಡಿ ಗುಪ್ತಾ ಈ ಮಾತುಗಳನ್ನು ಆಡಿದ್ದಾರೆ ಎಂದು ಕೆಲವು ಟೀವಿ ಚಾನೆಲ್ಗಳು ವರದಿ ಮಾಡಿವೆ.
ಇದರ ಬೆನ್ನಲ್ಲೇ ಸುಶಾಂತ್ ಕುಟುಂಬ ಹಾಗೂ ವಕೀಲರು, ‘ಹೊಸ ವಿಧಿವಿಜ್ಞಾನ ತಂಡವನ್ನು ಸಿಬಿಐ ರಚಿಸಬೇಕು. ಹೊಸದಾಗಿ ಸುಶಾಂತ್ ಮರಣೋತ್ತರ ತಪಾಸಣೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ. ಸುಶಾಂತ್ ಅವರದ್ದು ಕೊಲೆ ಇದು ದೂರಿದ್ದಾರೆ. ಈ ನಡುವೆ, ಸಿಬಿಐಗೆ ವರದಿ ಸಲ್ಲಿಸಿಯಾಗಿದೆ. ಅಲ್ಲಿಂದ ವರದಿ ಪಡೆದುಕೊಳ್ಳಬಹುದು ಎಂದು ಏಮ್ಸ್ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ