ಕೊರೋನಾ ಪೇಶಂಟ್ ಕಾಪಾಡಲು ಸುರಕ್ಷತಾ ಕವಚ ತೆಗೆದ ಡಾಕ್ಟರ್

Published : May 11, 2020, 09:16 PM ISTUpdated : May 11, 2020, 09:28 PM IST
ಕೊರೋನಾ ಪೇಶಂಟ್ ಕಾಪಾಡಲು ಸುರಕ್ಷತಾ ಕವಚ ತೆಗೆದ ಡಾಕ್ಟರ್

ಸಾರಾಂಶ

ತನ್ನ ಪ್ರಾಣವನ್ನೇ ಒತ್ತೆ ಇಟ್ಟ ಡಾಕ್ಟರ್/ ಈ ವೈದ್ಯರಿಗೆ ಒಂದು ಅಭಿನಂದನೆ ಹೇಳಲೇಬೇಕು/ ದೆಹಲಿ ಏಮ್ಸ್ ವೈದ್ಯರ ಸಾಹಸ/ ವೈದ್ಯರಿಗೆ 14 ದಿನಗಳ ಕ್ವಾರಂಟೈನ್/

ನವದೆಹಲಿ(ಮೇ 11) ಕೊರೋನಾ ವೈರಸ್ ವಿರುದ್ಧ ಹೋರಾಡುತ್ತ ಫ್ರಂಟ್ ಲೈನ್ ಲ್ಲಿರುವ ವೈದ್ಯರ ಬಗ್ಗೆ ಎಷ್ಟೂ ಹೇಳಿದರೂ ಸಾಲದು. ಕೊರೋನಾ ವಾರಿಯರ್ಸ್ ಗೆ ಸುಮ್ಮನೆ ಒಂದು ಮೆಚ್ಚುಗೆ ಸಾಕಾಗಲ್ಲ. ಈಗ ಮತ್ತೊಂದು  ವರದಿ ಬಂದಿದ್ದು ದೆಹಲಿಯ ವೈದ್ಯರು ತಮ್ಮ ಜೀವವನ್ನೇ ಪಣಕ್ಕೆ ಇಟ್ಟು ರೋಗಿಯನ್ನು ಕಾಪಾಡಲು ಸಾಹಸ ಮಾಡಿದ್ದಾರೆ.

ತಮ್ಮ ಸುರಕ್ಷಾ ಕವಚವನ್ನು ಅನಿವಾರ್ಯವಾಗಿ ತೆರೆದಿಟ್ಟ ವೈದ್ಯರಿಗೆ 14 ದಿನಗಳ ಕ್ವಾರಂಟೈನ್ ಹೇಳಲಾಗಿದೆ. ದೆಹಲಿ ಏಮ್ಸ್ ಈ ವೈದ್ಯರಿಗೆ ಒಂದು ಅಭಿನಂದನೆ ಹೇಳಿಬಿಡೋಣ

ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಜಹೀದ್ ಅಬ್ದುಲ್ ಮಜೀದ್ ಕೆಚ್ಚೆದೆ ತೋರಿದ ಡಾಕ್ಟರ್.  ಅಂಬುಲೆನ್ಸ್ ನಲ್ಲಿ ತರುವಾಗಲೇ  ರೋಗಿ ಗಂಭೀರ ಸ್ಥಿತಿಗೆ ತಲುಪಿದ್ದರು. ಮೇ 8 ರಂದು ಬೆಳಗಿನ ಜಾವ 2 ಗಂಟೆ ವೇಳೆ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಮಜೀದ್ ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದರು ಎಂದು ಆಸ್ಪತ್ರೆಯ ಜನರಲ್ ಸಕ್ರೆಟರಿ ಶ್ರೀನಿವಾಸ್ ರಾಜ್ ಕುಮಾರ್ ಹೇಳುತ್ತಾರೆ.

9 ತಿಂಗಳ ಗರ್ಭಿಣಿಯಾಗಿದ್ದರೂ ಕೆಲಸ ಮಾಡುತ್ತಿರುವ ವಾರಿಯರ್  ಜತೆ ಸಿಎಂ ಮಾತುಕತೆ

ಪೇಶೇಂಟ್ ಸರಿಯಾಗಿ ಪರೀಕ್ಷೆ ಮಾಡಲು ಸಾಧ್ಯವಾಗದ ಕಾರಣ ಅನಿವಾರ್ಯವಾಗಿ ನನ್ನ ಪಿಪಿಇ ಕಿಟ್ ತೆಗೆದೆ.  ರೋಗಿ ಜೀವ ಕಾಪಾಡಲೇಬೇಕಾದ್ದರಿಂದ ಗ್ಲೌಸ್ ತೆಗೆಯಬೇಕಾದ ಸ್ಥಿತಿಯೂ ಎಂದು ವೈದ್ಯರು ಹೇಳಿದ್ದನ್ನು ರಾಜ್ ಕುಮಾರ್ ಘಟನೆ ಸಂದಿಗ್ಧತೆ ವಿವರಿಸುತ್ತ ಹೇಳುತ್ತಾರೆ.

ಕೊರೋನಾ ವಿರುದ್ಧ ದೇಶವೇ ಹೋರಾಡುತ್ತಿದೆ. ನಾವು ಹೋರಾಟ ಮಾಡಬೇಕಾದದ್ದು ರೋಗದ ವಿರುದ್ಧವೇ ಹೊರತು ರೋಗಿಯ ವಿರುದ್ಧ ಅಲ್ಲ ಎಂದು ಪದೇ ಪದೇ ಹೇಳುತ್ತ ಜಾಗೃತಿ ಮೂಡಿಸಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!
ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕೋಕಾ ಕೋಲಾ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು