ಭೀತಿ ದೂರ ಮಾಡಲು ಕೋವ್ಯಾಕ್ಸಿನ್‌ ಪಡೆದ ಏಮ್ಸ್‌ ನಿರ್ದೇಶಕ!

Published : Jan 17, 2021, 08:23 AM IST
ಭೀತಿ ದೂರ ಮಾಡಲು ಕೋವ್ಯಾಕ್ಸಿನ್‌ ಪಡೆದ ಏಮ್ಸ್‌ ನಿರ್ದೇಶಕ!

ಸಾರಾಂಶ

 ಶನಿವಾರದಿಂದ ಆರಂಭವಾಗಿರುವ ಐತಿಹಾಸಿಕ ಕೋವಿಡ್‌ ಲಸಿಕೆ ಮಹಾ ಅಭಿಯಾನ| ಭೀತಿ ದೂರ ಮಾಡಲು ಕೋವ್ಯಾಕ್ಸಿನ್‌ ಪಡೆದ ಏಮ್ಸ್‌ ನಿರ್ದೇಶಕ

ನವದೆಹಲಿ(ಜ.12): ಶನಿವಾರದಿಂದ ಆರಂಭವಾಗಿರುವ ಐತಿಹಾಸಿಕ ಕೋವಿಡ್‌ ಲಸಿಕೆ ಮಹಾ ಅಭಿಯಾನದ ಬಗ್ಗೆ ವಿಶ್ವಾಸ ಮೂಡಿಸುವ ಉದ್ದೇಶದಿಂದ ಏಮ್ಸ್‌ ನಿರ್ದೇಶಕ ಡಾ.ರಣದೀಪ್‌ ಗುಲೇರಿಯಾ ಅವರು ಟೀವಿ ನೇರ ಪ್ರಸಾರದಲ್ಲಿಯೇ ಲಸಿಕೆ ಪಡೆದಿದ್ದಾರೆ.

ಅದರಲ್ಲೂ ಹೈದ್ರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಬಹುಚರ್ಚಿತ ಕೋವ್ಯಾಕ್ಸಿನ್‌ ಲಸಿಕೆಯನ್ನೇ ಡಾ. ಗುಲೇರಿಯಾ ಅವರು ಪಡೆದುಕೊಂಡಿದ್ದಾರೆ. ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಮೊಟ್ಟಮೊಲಿಗೆ ಪೌರ ಕಾರ್ಮಿಕ ಮನೀಶ್‌ ಕುಮಾರ್‌ ಅವರು ಲಸಿಕೆ ಪಡೆದರು.

ನಂತರದಲ್ಲಿ ಡಾ.ಗುಲೇರಿಯಾ ಮತ್ತು ಅನಂತರ ಸರ್ಕಾರ ನೇಮಿಸಿರುವ ಲಸಿಕೆ ಯೋಜನೆ ಸಮಿತಿ ಮುಖ್ಯಸ್ಥರೂ ಆಗಿರುವ ನೀತಿ ಆಯೋಗದ ಸದಸ್ಯ ವಿನೋದ್‌ ಕೆ. ಪೌಲ್‌ ಅವರು ಟೀವಿ ನೇರ ಪ್ರಸಾರದಲ್ಲಿಯೇ ಲಸಿಕೆ ಪಡೆದರು. ಈ ವೇಳೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಅವರೂ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ