‘ಭಾರತವನ್ನು ತಾಯಿ ಎನ್ನಲೋ, ತಂದೆ ಎನ್ನಲೋ?’: ಆಫ್ಘನ್‌ ಸಿಖ್‌ ಭಾವುಕ ಧನ್ಯವಾದ

Published : Jul 29, 2020, 02:27 PM ISTUpdated : Jul 29, 2020, 03:25 PM IST
‘ಭಾರತವನ್ನು ತಾಯಿ ಎನ್ನಲೋ, ತಂದೆ ಎನ್ನಲೋ?’: ಆಫ್ಘನ್‌ ಸಿಖ್‌ ಭಾವುಕ ಧನ್ಯವಾದ

ಸಾರಾಂಶ

ಹಿಂದುಸ್ತಾನದ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ| ಆಶ್ರಯ ನೀಡಿದ ಭಾರತಕ್ಕೆ ಆಫ್ಘನ್‌ ಸಿಖ್‌ ಭಾವುಕ ಧನ್ಯವಾದ| ‘ಭಾರತವನ್ನು ತಾಯಿ ಎನ್ನಲೋ, ತಂದೆ ಎನ್ನಲೋ?’

ನವದೆಹಲಿ(ಜು.29): ಒಂದು ತಿಂಗಳ ಹಿಂದೆ ಅಷ್ಘಾನಿಸ್ತಾನದ ಗುರುದ್ವಾರದಿಂದ ಅಪಹೃತವಾಗಿ, ಇತ್ತೀಚೆಗಷ್ಟೆಬಿಡುಗಡೆಗೊಂಡಿದ್ದ ನಿದಾನ್‌ ಸಿಂಗ್‌ ಸಚ್‌ದೇವ ಅವರು ಭಾರತ ಸರ್ಕಾರದ ಸಹಾಯದಿಂದ ಭಾನುವಾರ ದೆಹಲಿಗೆ ಬಂದಿಳಿದಿದ್ದು, ‘ತಾಯ್ನಾಡಿಗೆ’ ಮರಳಲು ನೆರವು ನೀಡಿದ ಭಾರತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಪಾಕ್‌ನ 6000ಕ್ಕೂ ಹೆಚ್ಚು ಉಗ್ರರು!

ತಾಲಿಬಾನಿ ಉಗ್ರರಿಂದ ಜೀವ ಬೆದರಿಕೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ನಿದಾನ್‌ ಸಿಂಗ್‌ ಅವರನ್ನೂ ಒಳಗೊಂಡಂತೆ 11 ಮಂದಿ ಅಷ್ಘಾನಿಸ್ತಾನದ ಸಿಖ್ಖರಿಗೆ ಕಾಬೂಲ್‌ ಭಾರತೀಯ ರಾಯಭಾರ ಕಚೇರಿಯು ಅಲ್ಪಾವಧಿ ವೀಸಾವನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಈ 11 ಜನರು ಭಾನುವಾರ ಮಧ್ಯಾಹ್ನ ದೆಹಲಿಗೆ ಬಂದಿಳಿದರು.

ಆಫ್ಘಾನ್ ಹಿಂದೂ, ಸಿಖ್ಖರಿಗೆ ಆಶ್ರಯ ನೀಡಿದ ಭಾರತ ನಿರ್ಧಾರ ಹೊಗಳಿದ ಅಮೆರಿಕ ಕಾಂಗ್ರೆಸ್ಸಿಗ!

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚ್‌ದೇವ, ‘ಹಿಂದುಸ್ತಾನದ ಬಗ್ಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ತಂದೆ ಎನ್ನಬೇಕೋ, ತಾಯಿ ಎನ್ನಬೇಕೋ ಕಾಣೆ. ಹಿಂದುಸ್ತಾನ ಹಿಂದುಸ್ತಾನವೇ’ ಎಂದು ಭಾವನಾತ್ಮಕ ನುಡುಗಳನ್ನಾಡಿದ್ದಾರೆ. ಇದೇ ವೇಳೆ ಅಪಹರಣಕಾರರು ಮರಕ್ಕೆ ಕಟ್ಟಿ, ರಕ್ತ ಸುರಿಯುವಂತೆ ಹೊಡೆದು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕಿರುಕುಳ ನೀಡಿದ್ದರು ದೂರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..