ದೀದಿ ಸೋದ​ರ​ಳಿಯಗೆ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಟ್ಟ!

Published : Jun 06, 2021, 09:34 AM IST
ದೀದಿ ಸೋದ​ರ​ಳಿಯಗೆ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಟ್ಟ!

ಸಾರಾಂಶ

* ಅಭಿಷೇಕ್‌ ಬ್ಯಾನರ್ಜಿಗೆ ಮಹತ್ವದ ಹುದ್ದೆ * ದೀದಿ ಸೋದ​ರ​ಳಿಯಗೆ ಟಿಎಂಸಿ ಪ್ರಧಾನ ಕಾರ‍್ಯದರ್ಶಿ ಪಟ್ಟ * ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಅಭಿಷೇಕ್‌ರನ್ನು ನಂ.2 ನಾಯಕ ಎಂದು ಬಿಜೆಪಿಗರ ಟೀಕೆ

ಕೋಲ್ಕ​ತಾ(ಜೂ.07): ಪಶ್ಚಿಮ ಬಂಗಾ​ಳದ ಮುಖ್ಯ​ಮಂತ್ರಿ ಹಾಗೂ ಟಿಎಂಸಿ ಅಧಿ​ನಾ​ಯಕಿ ಮಮ​ತಾ ಬ್ಯಾನರ್ಜಿ ಅವರು ತಮ್ಮ ಸೋದ​ರ ಅಳಿಯ ಅಭಿ​ಷೇಕ್‌ ಬ್ಯಾನರ್ಜಿ ಅವ​ರಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯ​ದ​ರ್ಶಿ​ಯಂಥ ಮಹ​ತ್ವದ ಹುದ್ದೆ​ಯನ್ನು ಕರು​ಣಿ​ಸಿ​ದ್ದಾರೆ.

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಅಭಿಷೇಕ್‌ರನ್ನು ನಂ.2 ನಾಯಕ ಎಂದು ಬಿಜೆಪಿಗರು ಟೀಕಿಸುತ್ತಿದ್ದರು. ಅದು ಈಗ ನಿಜ ಆದಂತಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ,

ಈ ಬಗ್ಗೆ ಶನಿ​ವಾರ ಸುದ್ದಿ​ಗೋ​ಷ್ಠಿ​ಯ​ನ್ನು​ದ್ದೇ​ಶಿಸಿ ಮಾತ​ನಾ​ಡಿದ ಪಕ್ಷದ ಹಿರಿಯ ನಾಯಕ ಪಾರ್ಥ ಚಟರ್ಜಿ ಅವರು, ‘ಡೈಮಂಡ್‌ ಹಾರ್ಬರ್‌ ಕ್ಷೇತ್ರದ ಸಂಸದ ಹಾಗೂ ತಮ್ಮ ಸೋದರ ಅಳಿ​ಯ ಅಭಿ​ಷೇಕ್‌ ಬ್ಯಾನರ್ಜಿ ಅವ​ರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯ​ದರ್ಶಿ ಸ್ಥಾನಕ್ಕೆ ನಾಮ ನಿರ್ದೇ​ಶನ ಮಾಡಿ​ದ್ದಾರೆ. ಜೊತೆಗೆ ಪಕ್ಷ​ದಲ್ಲಿ ಒಬ್ಬ​ರಿಗೆ ಒಂದೇ ಹುದ್ದೆ ಎಂಬ ನಿಯಮ ಜಾರಿಗೆ ತರಲು ಪಕ್ಷದ ಕೋರ್‌ ಕಮಿಟಿ ನಿರ್ಧ​ರಿ​ಸಿ​ದೆ’ ಎಂದು ಹೇಳಿದ್ದಾರೆ.

ಇನ್ನು ಸಿನಿಮಾ ನಟ ಹಾಗೂ ಟಿಎಂಸಿ ಮುಖಂಡ ಸಯೋನಿ ಘೋಷ್‌ ಅವ​ರನ್ನು ಪಕ್ಷದ ಯುವ ಘಟ​ಕದ ಅಧ್ಯ​ಕ್ಷ​ರ​ನ್ನಾಗಿ ಆಯ್ಕೆ ಮಾಡ​ಲಾ​ಗಿದೆ. ಆದಾಗ್ಯೂ, ಪಶ್ಚಿಮ ಬಂಗಾಳ ವಿಧಾ​ನ​ಸಭೆ ಚುನಾ​ವಣಾ ಪೂರ್ವ​ದಲ್ಲಿ ಟಿಎಂಸಿ​ಯಿಂದ ಬಿಜೆ​ಪಿಗೆ ಜಿಗಿದ ಹಾಗೂ ಇದೀಗ ಪಕ್ಷಕ್ಕೆ ಮರ​ಳಲು ಕಾತ​ರ​ರಾ​ಗಿ​ರುವ ಬಿಜೆಪಿ ನಾಯ​ಕ​ರನ್ನು ಪುನಃ ಪಕ್ಷಕ್ಕೆ ಸೇರಿ​ಸಿ​ಕೊ​ಳ್ಳ​ಬೇ​ಕೇ ಎಂಬ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಪಾರ್ಥ ಚಟರ್ಜಿ ಖಚಿ​ತ​ಪ​ಡಿ​ಸಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ