
ನವದೆಹಲಿ(ಮಾ.22): ಕೊರೋನಾ ಸೋಂಕು ಹಬ್ಬುವಿಕೆಯ ತಡೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ಸೋಮವಾರ (ಮಾ.22) ಒಂದು ವರ್ಷ ತುಂಬಲಿದೆ.
2020ರ ಮಾ.22ರ ಭಾನುವಾರದಂದು ಪ್ರಧಾನಿ ಮೋದಿ ಅವರು ಜನರು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಹೊರಗೆ ಬಾರದೆ ಮನೆಯಲ್ಲೇ ಕುಳಿತುಕೊಳ್ಳಬೇಕು. ಭಾರತದಲ್ಲಿ ಕೊರೋನಾ ವೈರಸ್ ಅನ್ನು ಹೇಗೆ ಮಣಿಸಬೇಕು ಎಂಬುದಕ್ಕೆ ಜನತಾ ಕರ್ಫ್ಯೂ ನೆರವಾಗಲಿದೆ ಎಂದು ಮೋದಿ ಹೇಳಿದ್ದರು.
ಜನತಾ ಕರ್ಫ್ಯೂ: ಪಕ್ಷಾತೀತ ಬೆಂಬಲ, ಬಂದ್ನಲ್ಲಿ ಒಂದಾದ ಭಾರತ!
ಈ ಬಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಮೋದಿ ಅವರು, ‘ಆರೋಗ್ಯ ಸಿಬ್ಬಂದಿ, ಸರ್ಕಾರಿ ಸೇವೆಗಳು, ನೈರ್ಮಲ್ಯೀಕರಣದ ಸಿಬ್ಬಂದಿ ಮತ್ತು ಪತ್ರಕರ್ತರು ಹೊರತುಪಡಿಸಿ ಉಳಿದವರು ಯಾರೂ ಸಹ ಮನೆಯಿಂದ ಹೊರಬರಬಾರದು. ಅಲ್ಲದೆ ಕೊರೋನಾ ಪರಿಸ್ಥಿತಿಯ ಈ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಸರ್ಕಾರಿ ಸಿಬ್ಬಂದಿ, ಪತ್ರಕರ್ತರು ಸೇರಿದಂತೆ ಇನ್ನಿತರ ವರ್ಗಗಳ ಸಿಬ್ಬಂದಿಗೆ ಗೌರವ ಸಲ್ಲಿಸಲು ಪ್ರತಿಯೊಬ್ಬರು ಮಾ.22ರ ಸಂಜೆ 5 ಗಂಟೆಗೆ ತಮ್ಮ ಬಾಲ್ಕನಿಗಳಲ್ಲಿ ನಿಂತು 5 ನಿಮಿಷಗಳ ಚಪ್ಪಾಳೆ, ತಟ್ಟೆಬಾರಿಸಬೇಕು’ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ