ಜನತಾ ಕರ್ಫ್ಯೂಗೆ ಇಂದು ಒಂದು ವರ್ಷ!

Published : Mar 22, 2021, 09:42 AM ISTUpdated : Mar 22, 2021, 11:00 AM IST
ಜನತಾ ಕರ್ಫ್ಯೂಗೆ ಇಂದು ಒಂದು ವರ್ಷ!

ಸಾರಾಂಶ

ಜನತಾ ಕರ್ಫ್ಯೂಗೆ ಇಂದು ಒಂದು ವರ್ಷ|  ಕೊರೋನಾ ಮುಂಚೂಣಿ ಕಾರ‍್ಯಕರ್ತರ ಗೌರ​ವಕ್ಕೆ ಚಪ್ಪಾ​ಳೆಗೂ ಸೂಚಿ​ಸಿದ್ದ ನಮೋ

ನವ​ದೆ​ಹ​ಲಿ(ಮಾ.22): ಕೊರೋನಾ ಸೋಂಕು ಹಬ್ಬು​ವಿ​ಕೆಯ ತಡೆ​ಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ಸೋಮವಾರ (ಮಾ.22) ಒಂದು ವರ್ಷ ತುಂಬಲಿದೆ.

2020ರ ಮಾ.22ರ ಭಾನು​ವಾ​ರ​ದಂದು ಪ್ರಧಾನಿ ಮೋದಿ ಅವರು ಜನರು ಬೆಳಗ್ಗೆ 7 ಗಂಟೆ​ಯಿಂದ ರಾತ್ರಿ 9 ಗಂಟೆ​ವ​ರೆಗೆ ಹೊರಗೆ ಬಾರದೆ ಮನೆ​ಯಲ್ಲೇ ಕುಳಿ​ತು​ಕೊ​ಳ್ಳ​ಬೇಕು. ಭಾರ​ತ​ದಲ್ಲಿ ಕೊರೋನಾ ವೈರಸ್‌ ಅನ್ನು ಹೇಗೆ ಮಣಿ​ಸ​ಬೇಕು ಎಂಬು​ದಕ್ಕೆ ಜನತಾ ಕರ್ಫ್ಯೂ ನೆರ​ವಾ​ಗ​ಲಿದೆ ಎಂದು ಮೋದಿ ಹೇಳಿ​ದ್ದರು.

ಜನತಾ ಕರ್ಫ್ಯೂ: ಪಕ್ಷಾತೀತ ಬೆಂಬಲ, ಬಂದ್‌ನಲ್ಲಿ ಒಂದಾದ ಭಾರತ!

ಈ ಬಗ್ಗೆ ರಾಷ್ಟ್ರ​ವ​ನ್ನು​ದ್ದೇ​ಶಿಸಿ ಮಾತ​ನಾ​ಡಿದ್ದ ಮೋದಿ ಅವರು, ‘ಆರೋಗ್ಯ ಸಿಬ್ಬಂದಿ, ಸರ್ಕಾರಿ ಸೇವೆ​ಗಳು, ನೈರ್ಮ​ಲ್ಯೀ​ಕ​ರ​ಣದ ಸಿಬ್ಬಂದಿ ಮತ್ತು ಪತ್ರ​ಕ​ರ್ತರು ಹೊರ​ತು​ಪ​ಡಿಸಿ ಉಳಿ​ದ​ವರು ಯಾರೂ ಸಹ ಮನೆ​ಯಿಂದ ಹೊರ​ಬ​ರ​ಬಾ​ರದು. ಅಲ್ಲ​ದೆ ಕೊರೋನಾ ಪರಿ​ಸ್ಥಿ​ತಿಯ ಈ ಕಠಿಣ ಪರಿ​ಸ್ಥಿ​ತಿ​ಯಲ್ಲಿ ಕಾರ್ಯ ನಿರ್ವ​ಹಿ​ಸು​ತ್ತಿ​ರುವ ವೈದ್ಯ​ಕೀಯ ಸಿಬ್ಬಂದಿ, ಪೊಲೀ​ಸರು, ಸರ್ಕಾರಿ ಸಿಬ್ಬಂದಿ, ಪತ್ರ​ಕ​ರ್ತರು ಸೇರಿ​ದಂತೆ ಇನ್ನಿ​ತರ ವರ್ಗ​ಗಳ ಸಿಬ್ಬಂದಿಗೆ ಗೌರವ ಸಲ್ಲಿ​ಸಲು ಪ್ರತಿ​ಯೊ​ಬ್ಬರು ಮಾ.22ರ ಸಂಜೆ 5 ಗಂಟೆಗೆ ತಮ್ಮ ಬಾಲ್ಕ​ನಿ​ಗ​ಳಲ್ಲಿ ನಿಂತು 5 ನಿಮಿ​ಷ​ಗಳ ಚಪ್ಪಾಳೆ, ತಟ್ಟೆಬಾರಿ​ಸ​ಬೇ​ಕು’ ಎಂದು ಹೇಳಿ​ದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ
ಬೀದಿಯಲ್ಲಿ ಬಿದ್ದಿದ್ದ ಕಲ್ಲಿಂದ ಹಣ ಮಾಡೋದು ಹೇಗೆ ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್