
ಬೆಂಗಳೂರು(ಫೆ.26): ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಯಾವಾಗಿನಿಂದ ಮಂದಿರ ನಿರ್ಮಾಣ ಕಾರ್ಯ ಆರಂಭವಾದಾಗಿನಿಂದ ದೇಶಾದ್ಯಂತ ರಾಮನ ಹೆಸರೇ ಕೇಳಿ ಬರುತ್ತಿದೆ. ಹೀಗಿರುವಾಗ ಬೆಂಗಳೂರಿನ ಕಲಾವಿದರು ವಿಶಿಷ್ಟವಾದ ಕಲಾಕೃತಿ ನಿರ್ಮಿಸಿದ್ದಾರೆ.
ಒಂದು ಹಾಗೂ ಐದು ರೂಪಾಯಿ ನಾಣ್ಯಗಳಿಂದ ಶ್ರೀರಾಮನ ಭವ್ಯ ಕಲಾಕೃತಿ ನಿರ್ಮಿಸಿದ್ದಾರೆ. ಇದನ್ನು ನಿರ್ಮಿಸಲು ಕಲಾವಿದರು ಅರವತ್ತು ಸಾವಿರ ನಾಣ್ಯಗಳನ್ನು ಬಳಸಿದ್ದಾರೆಂಬುವುದು ಉಲ್ಲೇಖನೀಯ.
ಲಭ್ಯವಾದ ಮಾಹಿತಿ ಅನ್ವಯ ಬೆಂಗಳೂರಿನ ಸಮಘಟನೆಯೊಂದು ಈ ಭವ್ಯವಾದ ಕಲಾಕೃತಿ ನಿರ್ಮಿಸಿದೆ. ರಾಷ್ಟ್ರಧರ್ಮ ಹೆಸರಿನ ಈ ಸಂಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಲಾಲ್ ಭಾಗ್ ಪಶ್ಚಿಮ ದ್ವಾರದ ಬಳಿ ಈ ಕಲಾಕೃತಿ ನಿರ್ಮಿಸಿದೆ ಹಾಗೂ ನೋಡುಗರಿಗೆ ವೀಕ್ಷಿಸಲು ಅನುವು ಮಾಡಿಕೊಟ್ಟಿದೆ.
"
ಈ ಕುರಿತು ಮಾಹಿತಿ ನೀಡಿ ಮಾತನಾಡಿದ ಕಲಾವಿದರೊಬ್ಬರು 'ಶ್ರೀರಾಮನ ಈ ಕಲಾಕೃತಿ ನಿರ್ಮಿಸಲು 2 ಲಕ್ಷ ರೂ. ಮೌಲ್ಯದ 60,000 ನಾಣ್ಯಗಳನ್ನು ಬಳಸಿದ್ದೇವೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ