ದೆಹಲಿ ಮರ್ಕಝ್‌ನಲ್ಲಿ ಪಾಲ್ಗೊಂಡ 8 ತಬ್ಲೀಘಿ ಮೇಲೆ ಮರ್ಡರ್ ಕೇಸ್!

Suvarna News   | Asianet News
Published : May 02, 2020, 03:23 PM ISTUpdated : May 02, 2020, 03:29 PM IST
ದೆಹಲಿ ಮರ್ಕಝ್‌ನಲ್ಲಿ ಪಾಲ್ಗೊಂಡ 8 ತಬ್ಲೀಘಿ ಮೇಲೆ ಮರ್ಡರ್ ಕೇಸ್!

ಸಾರಾಂಶ

ದೆಹಲಿ ಮರ್ಕಝ್‌ನಲ್ಲಿ ನಡೆದ ತಬ್ಲೀಘಿ ಜಮಾತ್ ಭಾರತದಲ್ಲಿ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಕೊರೋನಾ ಹರಡುವಿಕೆಯಲ್ಲಿ ತಬ್ಲೀಘಿಗಳ ಪಾಲು ಎಷ್ಟಿದೆ ಅನ್ನೋದು ಈಗಾಗಲೇ ಅಂಕಿ ಅಂಶಗಳಿಂದ ಬಯಲಾಗಿದೆ. ತಬ್ಲೀಘಿ ಜಮಾತ್ ತೆರಳಿದವರು ಸ್ವಯಂ ಪ್ರೇರಿತರಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಎಂದರೂ ಬಹತೇಕರು ತಲೆಮೆರೆಸಿಕೊಂಡು ಓಡಾಡುತ್ತಿದ್ದಾರೆ. ಹೀಗೆ ಪೊಲೀಸರ ಸೂಚನೆ ಪಾಲಿಸದೇ ಗೌಪ್ಯವಾಗಿ ಓಡಾಡುತ್ತಿದ್ದ 8 ತಬ್ಲೀಘಿಗಳ ಮೇಲೆ ಮರ್ಡರ್ ಕೇಸ್ ದಾಖಲಾಗಿದೆ.  

ಉತ್ತರಖಂಡ(ಮೇ.02): ಭಾರತದಲ್ಲಿ ಕೊರೋನಾ ವೈರಸ್ ಹರಡುವಿಕೆ ತಡೆಯಲು ಜನತಾ ಕರ್ಫ್ಯೂ ಬಳಿಕ ಲಾಕ್‌ಡೌನ್ ಕೂಡ ಹೇರಲಾಗಿತ್ತು. ಆದರೆ ಧಾರ್ಮಿಕ ಸಭೆ ಹೆಸರಲ್ಲಿ ದೆಹಲಿ ಮರ್ಕಝ್‌ನಲ್ಲಿ ತಬ್ಲೀಘಿಗಳು ಒಟ್ಟು ಸೇರಿದ್ದರು. ಬಾಂಗ್ಲಾದೇಶ, ಇಂಡೋನೇಷ್ಯಾ ಸೇರಿದಂತೆ ಇತರ ದೇಶಗಳಿಂದ ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಈ ಸಭೆಯಿಂದ ಇಡೀ ಭಾರತಕ್ಕೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿತು. ಪ್ರತಿ ಜೆಲ್ಲೆಗಳಿಂದ ದೆಹಲಿ ತಬ್ಲೀಘಿ ಜಮಾತ್‌ಗೆ ತೆರಳಿದವರನ್ನು ಪತ್ತೆ ಹಚ್ಚಿ ತಾಪಸಣೆ ನಡೆಸುವುದು ರಾಜ್ಯ ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸಿತು. ಹೀಗಾಗಿ ಉತ್ತರಖಂಡ ಸರ್ಕಾರ ಸ್ವಯಂ ಪ್ರೇರತರಾಗಿ ಬಂದು ತಪಾಸಣೆ ನಡೆಸುವಂತೆ ಕೋರಲಾಗಿತ್ತು. ಆದರೆ ಈ ಆದೇಶಕ್ಕೆ ಕ್ಯಾರೇ ಎನ್ನದ ತಬ್ಲೀಘಿ ಮೇಲೆ ಇದೀಗ ಮರ್ಡರ್ ಕೇಸ್ ದಾಖಲಾಗಿದೆ.

ಫೇಸ್‌ಬುಕ್‌ನಲ್ಲಿ ಹುಚ್ಚಾಟ; ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಝಫರುಲ್ ವಿರುದ್ಧ ಸೆಡಿಶನ್ ಕೇಸ್

ಉತ್ತರಖಂಡದಿಂದ ದೆಹಲಿ ತಬ್ಲೀಘಿ ಜಮಾತ್‌ನಲ್ಲಿ ಪಾಲ್ಗೊಂಡ ಬಹುತೇಕರ ಹೆಸರನ್ನು ಸರ್ಕಾರ ಪ್ರಕಟಿಸಿತ್ತು. ಇಷ್ಟೇ ಅಲ್ಲ ಗೌಪ್ಯವಾಗಿ ಓಡಾಡುತ್ತಿರುವ ಹಲವು ತಬ್ಲೀಘಿಗಳು ಹಾಗೂ ಈಗಾಗಲೆ ಹೆಸರು ಪ್ರಕಟಿಸಲಾದ ತಬ್ಲೀಘಿಗಳು ಸ್ವಯಂ ಪ್ರೇರತರಾಗಿ ಬಂದು ಕೊರೋನಾ ಪರೀಕ್ಷೆ ನಡೆಸಲು ಮನವಿ ಮಾಡಲಾಗಿತ್ತು. ಪೊಲೀಸರು ಪ್ರತಿ ಗ್ರಾಮ ಗ್ರಾಮಗಳಿಗೆ ತೆರಳಿ ಮನವಿ ಮಾಡಿದ್ದರು. ಯಾರೂ  ಆದೇಶ ದಿಕ್ಕರಿಸುತ್ತಾರೆ ಅವರ ಮೇಲೆ ಮರ್ಡರ್ ಕೇಸ್ ದಾಖಲಿಸುವುದಾಗಿ ಉತ್ತರಖಂಡ ಪೊಲೀಸರು ಸೂಚಿಸಿದ್ದರು. 

ತಬ್ಲೀಘಿಗಳಿಗೆ ರಕ್ಷಣೆ ನೀಡಿದ ಆರೋಪ: ಶಾಸಕ ಜಮೀರ್‌ ವಿರುದ್ಧ ದೂರು

ಹೀಗೆ ಪೊಲೀಸರ ಸೂಚನೆ ದಿಕ್ಕರಿಸಿದ 8 ತಬ್ಲೀಘಿ ಮೇಲೆ ಮರ್ಡರ್ ಕೇಸ್ ದಾಖಲಿಸಲಾಗಿದೆ. ಈ ಮೂಲಕ ಉತ್ತರಖಂಡದಲ್ಲಿ ಮರ್ಡರ್ ಕೇಸ್ ದಾಖಲಾದ ತಬ್ಲೀಘಿಗಳ ಸಂಖ್ಯೆ  16ಕ್ಕೇರಿಕೆಯಾಗಿದೆ. ಈಗಾಗಲೇ 35 ಮಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.  ಉತ್ತರಖಂಡದಲ್ಲಿ ಇದುವರೆಗೆ ಲಾಕ್‌ಡೌನ್ ಉಲ್ಲಂಘಿಸಿದ ಒಟ್ಟು 2,431 ಮಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. 12081 ಮಂದಿಯನ್ನು ಆರೆಸ್ಟ್ ಮಾಡಲಾಗಿದೆ. 5,748 ವಾಹನಗಳಿಗೆ ಇ ಚಲನ್ ನೀಡಲಾಗಿದೆ. ಒಟ್ಟು 1.47 ಕೋಟಿ ರೂಪಾಯಿ ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ  ಎಂದು ಉತ್ತರಖಂಡ್ ಡೈರೆಕ್ಟರ್ ಜನರಲ್ ಪೊಲೀಸ್ ಅಶೋಕ್ ಕುಮಾರ್ ಹೇಳಿದ್ದಾರೆ.  

ನಾನ್‌ವೆಜ್‌ ಆಹಾರ ಕೊಡಿ: ಕಾನ್ಪುರ ಆಸ್ಪತ್ರೆಯಲ್ಲಿ ತಬ್ಲೀಘಿ ದಾಂಧಲೆ!

ಇದುವರಗೆ ಉತ್ತರಖಂಡದಲ್ಲಿ 57 ಕೊರೋನಾ ಕೇಸ್ ಪತ್ತೆಯಾಗಿದ್ದು. ಇದರಲ್ಲಿ 36 ಮಂದಿ ಗುಣಮುಖರಾಗಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ