ಭಾರತಕ್ಕೆ ಈಗ ಬ್ರಿಟನ್ನಿನ ಹೊಸ ವೈರಸ್‌ ಆತಂಕ: ಮ.ಪ್ರದಲ್ಲಿ ಸೋಂಕು ಪತ್ತೆ!

Published : Oct 25, 2021, 06:39 AM ISTUpdated : Oct 25, 2021, 10:23 AM IST
ಭಾರತಕ್ಕೆ ಈಗ ಬ್ರಿಟನ್ನಿನ ಹೊಸ ವೈರಸ್‌ ಆತಂಕ: ಮ.ಪ್ರದಲ್ಲಿ ಸೋಂಕು ಪತ್ತೆ!

ಸಾರಾಂಶ

* ಇಂದೋರ್‌ನ 7 ಜನರಲ್ಲಿ ಎವೈ 4.2 ರೂಪಾಂತರಿ * ಭಾರತಕ್ಕೆ ಈಗ ಬ್ರಿಟನ್ನಿನ ಹೊಸ ವೈರಸ್‌ ಆತಂಕ * ಮಪ್ರದಲ್ಲಿ ಸೋಂಕು ಪತ್ತೆ * ಬ್ರಿಟನ್ನಲ್ಲಿ ಶರವೇಗದಲ್ಲಿ ಹರಡುತ್ತಿರುವ ತಳಿಯಿದು

ನವದೆಹಲಿ(ಅ.25): ಬ್ರಿಟನ್‌(Britain) ಸೇರಿದಂತೆ ಹಲವು ದೇಶಗಳಲ್ಲಿ ಇತ್ತೀಚೆಗೆ ಪತ್ತೆಯಾಗಿ ಭಾರಿ ಆತಂಕ ಸೃಷ್ಟಿಸಿರುವ ಕೊರೋನಾದ ಹೊಸ ರೂಪಾಂತರಿ ತಳಿಯೊಂದು ಇದೀಗ ಭಾರತದಲ್ಲೂ ಪತ್ತೆಯಾಗಿದೆ. ಮಧ್ಯಪ್ರದೇಶದ(madhya Pradesh) ರಾಜಧಾನಿ ಇಂದೋರ್‌ನ(Indore) 7 ಜನರಲ್ಲಿ ಎವೈ 4.2 ಎಂಬ ಹೊಸ ಕೊರೋನಾ ರೂಪಾಂತರಿ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬ್ರಿಟನ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಹೊಸ ಕೇಸು ಏರಿಕೆ ಮತ್ತು ಸಾವಿಗೆ ಇದೇ ವೈರಸ್‌ ಕಾರಣ ಎಂಬ ವರದಿಗಳ ಬೆನ್ನಲ್ಲೇ ಭಾರತದಲ್ಲೂ ಅದೇ ವೈರಸ್‌ ಪತ್ತೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ಸಂಗ್ರಹಿಸಿದ್ದ ಕೊರೋನಾ ವೈರಸ್‌ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸಿದ ವೇಳೆ 7 ಪ್ರಕರಣಗಳಲ್ಲಿ ಎವೈ.4.2 ಎಂಬ ಹೊಸ ತಳಿ ಪತ್ತೆಯಾಗಿದೆ. ಆದರೆ ಇದು ಒಟ್ಟು ನಡೆಸಲಾದ ಪರೀಕ್ಷಾ ಪ್ರಮಾಣದಲ್ಲಿ ಶೇ.0.1ಕ್ಕಿಂತಲೂ ಕಡಿಮೆ ಎಂದು ಹೊಸ ತಳಿ ಪತ್ತೆ ಮಾಡಿರುವ ನವದೆಹಲಿ ಸಿಎಸ್‌ಐಆರ್‌(CSIR) ಇನ್‌ಸ್ಟಿಟ್ಯೂಟ್‌ ಆಫ್‌ ಜಿನೋಮಿಕ್ಸ್‌ ಆ್ಯಂಡ್‌ ಇಂಟಿಗ್ರೇಟೆಡ್‌ ಬಯಾಲಜಿ ಸಂಸ್ಥೆ ನಿರ್ದೇಶಕರಾಗಿರುವ ಡಾ.ಅನುರಾಗ್‌ ಅಗರ್‌ವಾಲ್‌ ಹೇಳಿದ್ದಾರೆ.

"

ಕಳೆದ ಸೆಪ್ಟೆಂಬರ್‌ನಲ್ಲಿ ಇಂದೋರ್‌ನಲ್ಲಿ ದಿಢೀರನೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಹೀಗಾಗಿ ಈ ಏರಿಕೆಗೆ ಎವೈ 4.2 ಕಾರಣವಾಗಿದ್ದಿರಬಹುದು ಎಂದು ಇದೀಗ ವಿಶ್ಲೇಷಿಸಲಾಗುತ್ತಿದೆ.

ಎವೈ 4.2, ಭಾರತದಲ್ಲಿ(India) ಮೊದಲಿಗೆ ಪತ್ತೆಯಾಗಿ ಬಳಿಕ ಬ್ರಿಟನ್‌ ಹಾಗೂ ಅಮೆರಿಕದಲ್ಲಿ ಭಾರಿ ಅನಾಹುತಕ್ಕೆ ಕಾರಣವಾಗಿದ್ದ ಡೆಲ್ಟಾರೂಪಾಂತರಿ ತಳಿಯ ಉಪತಳಿ. ಡೆಲ್ಟಾಗೆ(Delta) ಹೋಲಿಸಿದರೆ ಇದು ಹೆಚ್ಚು ಸೋಂಕುಕಾರಕ ಎಂದು ಈಗಾಗಲೇ ಖಚಿತಪಟ್ಟಿದೆ. ಜೊತೆಗೆ ಬ್ರಿಟನ್‌ನಲ್ಲಿ ಕಳೆದೊಂದು ವಾರದಿಂದ ದಾಖಲೆ ಪ್ರಮಾಣದಲ್ಲಿ ಹೊಸ ಸೋಂಕು ಮತ್ತು ಸಾವಿಗೂ ಇದೇ ಕಾರಣ ಎಂದು ಖಚಿತಪಟ್ಟಿದೆ. ಜೊತೆಗೆ ರಷ್ಯಾ, ಇಸ್ರೇಲ್‌, ಯುರೋಪ್‌ನ ಹಲವು ದೇಶಗಳಲ್ಲೂ ಈಗಾಗಲೇ ಈ ತಳಿ ಪ್ರವೇಶ ಮಾಡಿರುವುದು ಸಾಬೀತಾಗಿದೆ. ಹೀಗಾಗಿ ಈ ಹೊಸ ತಳಿ ಭಾರತದಲ್ಲಿ ಕೊರೋನಾ ಮೂನರೇ ಅಲೆಗೆ ಕಾರಣವಾಗಬಹುದು ಎಂಬ ಆತಂಕ ಹರಡಿದೆ.

ಸದ್ಯಕ್ಕೆ ತಜ್ಞರ ತಂಡ ಈ ಹೊಸ ತಳಿಯನ್ನು ವೇರಿಯೆಂಟ್‌ ಆಫ್‌ ಇನ್ವೆಸ್ಟಿಗೇಷನ್‌ ಹಂತದಲ್ಲೇ ಇಟ್ಟಿದೆ. ಇದು ಅಪಾಯಕಾರಿ ಎಂದು ಖಚಿತಪಟ್ಟರೆ ಅದನ್ನು ವೇರಿಯೆಂಟ್‌ ಆಫ್‌ ಕನ್ಸರ್ನ್‌ಗೆ ವರ್ಗ ಮಾಡಲಾಗುವುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?