ರಾತ್ರೋ ರಾತ್ರಿ 1 ಕಿ.ಮೀಟರ್ ರಸ್ತೆ ಕಳ್ಳತನ: ದೂರು ಕೊಟ್ಟ ಗ್ರಾಮಸ್ಥರು

Published : Jul 03, 2021, 02:47 PM ISTUpdated : Jul 03, 2021, 03:24 PM IST
ರಾತ್ರೋ ರಾತ್ರಿ 1 ಕಿ.ಮೀಟರ್ ರಸ್ತೆ ಕಳ್ಳತನ: ದೂರು ಕೊಟ್ಟ ಗ್ರಾಮಸ್ಥರು

ಸಾರಾಂಶ

ರಾತ್ರೋ ರಾತ್ರಿ ಕಾಣೆಯಾಯ್ತು ರಸ್ತೆ ಪೊಲೀಸರಿಗೆ ದೂರು ಕೊಟ್ಟ ಗ್ರಾಮಸ್ಥರು

ಭೋಪಾಲ್(ಜು.03): ಮಧ್ಯಪ್ರದೇಶದಲ್ಲಿ ಈ ಹಿಂದೆ ವಿಲಕ್ಷಣವಾದ ಭ್ರಷ್ಟಾಚಾರ ಪ್ರಕರಣಗಳು ನಡೆದಿವೆ. ಆದರೆ ಇದು ಅವಲ್ಲವನ್ನೂ ಸೋಲಿಸುತ್ತದೆ. ರಾಜ್ಯದ ಸಿಧಿ ಜಿಲ್ಲೆಯ ದೂರದ ಹಳ್ಳಿಯಲ್ಲಿ, ಒಂದು ಕಿ.ಮೀ ರಸ್ತೆ ರಾತ್ರೋರಾತ್ರಿ ಕಣ್ಮರೆಯಾಗಿದೆ ಎಂದು ವರದಿಯಾಗಿದೆ. ಉಪ ಸರ್ಪಂಚ್ ಮತ್ತು ಗ್ರಾಮದ ಸ್ಥಳೀಯರು ಒಂದೆರಡು ದಿನಗಳ ಹಿಂದೆ ಬೆಳಿಗ್ಗೆ ಸ್ಥಳೀಯ ಪೊಲೀಸ್ ಥಾನಾ (ಮಂಜೋಲಿ) ತಲುಪಿದರು ಮತ್ತು ರಸ್ತೆ ಕಣ್ಮರೆಯಾದ ಬಗ್ಗೆ ದೂರು ನೀಡಿದ್ದಾರೆ.

ರಾತ್ರಿಯಲ್ಲಿ ರಸ್ತೆ ಅಸ್ತಿತ್ವದಲ್ಲಿದ್ದರೂ ಮರುದಿನ ಬೆಳಗ್ಗೆ ಕಾಣೆಯಾಗಿದೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಮಳೆಗಾಲದಲ್ಲಿ ಪ್ರಯಾಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ವಿಲಕ್ಷಣ ಘಟನೆ ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಸಿಧಿ ಜಿಲ್ಲೆಯ ಮಂಜೋಲಿ ಜನಪಾದ್ ಪಂಚಾಯತ್ ವ್ಯಾಪ್ತಿಯ ಮೇಂದ್ರ ಗ್ರಾಮದಿಂದ ವರದಿಯಾಗಿದೆ. ರಸ್ತೆಯನ್ನು ಹಳ್ಳಿಯಲ್ಲಿ, ಕಾಗದಗಳಲ್ಲಿ ನಿರ್ಮಿಸಲಾಗಿದೆ. ಯೋಜನೆಗೆ ಸಂಬಂಧಿಸಿದ ಹಣವನ್ನು ಸರ್ಕಾರಿ ಸಿಬ್ಬಂದಿಗಳು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇತ್ತೀಚೆಗೆ ಮಳೆಯಿಂದ ಈ ಪ್ರದೇಶ ಸಂಪೂರ್ಣ ಹಾಳಾಗಿದೆ ಎನ್ನಲಾಗಿದೆ.

ಜಾನ್ಸನ್‌ ಲಸಿಕೆ ಡೆಲ್ಟಾ ಮೇಲೂ ಪರಿಣಾಮಕಾರಿ

ಈ ಮಾರ್ಗವು 2017 ರಲ್ಲಿ ಪುಡಿಮಾಡಿದ ಕಲ್ಲುಗಳಿಂದ ಮಾಡಲಾಗಿದೆ ಎಂದು ಪಂಚಾಯತ್ ದಾಖಲೆಗಳಲ್ಲಿ ನಮೂದಿಸಲಾಗಿದೆ. ಆರು ತಿಂಗಳ ನಂತರ, 10 ಲಕ್ಷ ರೂ.ಗಳ ಬಜೆಟ್‌ನೊಮದಿಗೆ ಪಕ್ಕಾ ರಸ್ತೆಯನ್ನು ನಿರ್ಮಿಸಲಾಗಿದೆ.

ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ ಡೆಪ್ಯೂಟಿ ಸರ್ಪಂಚ್ ರಮೇಶ್ ಕುಮಾರ್ ಯಾದವ್, ವಾರ್ಡ್ ನಂಬರ್ 15 ರಲ್ಲಿ ಒಂದೆರಡು ದಿನಗಳ ಹಿಂದೆ ರಸ್ತೆ ಉತ್ತಮ ಸ್ಥಿತಿಯಲ್ಲಿತ್ತು ಆದರೆ ಅದು ಬೆಳಗ್ಗೆ ‘ಕಳ್ಳತನ’ ಆಗಿದೆ. ಅಲ್ಲಿ ಇರಿಸಿದ್ದ ಪುಡಿಮಾಡಿದ ಕಲ್ಲುಗಳು ಸಹ ಕಣ್ಮರೆಯಾಗಿವೆ ಎಂದು ದೂರು ದಾಖಲಿಸಿದ್ದಾರೆ.

ಸ್ಥಳೀಯ ಬಿಜೆಪಿ ಮುಖಂಡ ಅಖಿಲೇಶ್ ಪಾಂಡೆ ಅವರು ರಸ್ತೆಗೆ ಸಂಬಂಧಿಸಿದ ಬಜೆಟ್ ಅನ್ನು ಸರ್ಕಾರಿ ಸಿಬ್ಬಂದಿ ಹಿಂತೆಗೆದುಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಾರೆ ಆದರೆ ಅವರ ಪ್ರದೇಶದಲ್ಲಿ ಯಾವುದೇ ರಸ್ತೆ ನಿರ್ಮಿಸಲಾಗಿಲ್ಲ. ಈ ವಿಷಯವನ್ನು ಹಿರಿಯ ಅಧಿಕಾರಿಗಳು ತನಿಖೆ ಮಾಡುತ್ತಾರೆ ಎಂದು ಪಾಂಡೆ ಹೇಳಿದರು. ರಸ್ತೆಯನ್ನು ಎಂದಿಗೂ ನಿರ್ಮಿಸದ ಕಾರಣ ಈ ವಿಷಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಜನಪದ್ ಪಂಚಾಯತ್‌ನ ಹಲವಾರು ಅಧಿಕಾರಿಗಳು ಒಪ್ಪಿಕೊಂಡರು.

ಈ ಪ್ರದೇಶದಲ್ಲಿ ರಸ್ತೆಯನ್ನು ಎಂದಿಗೂ ನಿರ್ಮಿಸಲಾಗಿಲ್ಲ ಆದರೆ ಬಜೆಟ್ ಅನ್ನು ಸರ್ಕಾರಿ ಸಿಬ್ಬಂದಿ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ