
ಗುವಾಹಟಿ (ಮೇ.14): ಸಿಡಿಲಿನ ಹೊಡೆತಕ್ಕೆ 18 ಆನೆಗಳು ಸಾವಿಗೀಡಾಗಿರುವ ದುರಂತ ಘಟನೆ ಅಸ್ಸಾಂ ನಗಾಂವ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಗುರುವಾರ ಮಾತನಾಡಿದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್ ಸಹಾಯ್ ಅವರು ಕಥಿಯಾಟೋಲಿ ವ್ಯಾಪ್ತಿಯ ಪ್ರಸ್ತಾಪುತ ಕುಂಡೋಲಿ ರಕ್ಷಿತಾರಣ್ಯದಲ್ಲಿನ ಗುಡ್ಡದಲ್ಲಿ ಬುಧವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ ಎಂದು ಹೇಳಿದರು.
ನಾಗರಹೊಳೆಯಲ್ಲಿ ಆನೆಗಳ ಕಾಳಗ : 35 ವರ್ಷದ ಗಂಡಾನೆ ಸಾವು ...
ಗುರುವಾರ ಮಧ್ಯಾಹ್ನ ನಮ್ಮ ತಂಡ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು 14 ಗಜಗಳು ಗುಡ್ಡದ ಮೇಲೆ ಮತ್ತು ಉಲಿದ ನಾಲ್ಕು ಆನೆಗಳು ಗುಡ್ಡದ ಕೆಲಗೆ ಸತ್ತು ಬಿದ್ದಿರುವುದು ಕಂಡು ಬಂದಿದೆ.
ಕಾಡಾನೆ ಮತ್ತು ಮರಿ ಹಳಿ ದಾಟಲು ರೈಲು ನಿಲ್ಲಿಸಿದ ಚಾಲಕ : ವಿಡಿಯೋ ವೈರಲ್ .
ಪ್ರಾಥಮಿಕ ತನಿಖೆಯಲ್ಲಿ ಸಿಡಿಲಿನ ಹೊಡೆತದಿಂದ ಆನೆಗಳು ಸಾವಿಗೀಡಾಗಿವೆ ಎಂದು ಗೊತ್ತಾಗಿದೆ. ಆನೆಗಳ ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಈ ಘಟನೆಗೆ ನಿಖರ ಕಾರಣ ಗೊತ್ತಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ