Tsitakakantsa: ಪ್ರಕೃತಿಯ ವಿನಾಶದ ಮುನ್ನುಡಿಯೇ? 12 ಶತಮಾನಗಳಿಂದ ಅಲುಗಾಡದ ಮರ ಈಗ ಸಾಯುತ್ತಿದೆ! ಕಾರಣವೇನು?

Published : Jun 09, 2026, 12:03 PM IST

ಪ್ರಕೃತಿಯ ದೈತ್ಯ ಮರವೊಂದು ಕೊನೆಯುಸಿರೆಳೆಯಲು ಬಿಕ್ಕುತ್ತಿದೆ. ಮಡಗಾಸ್ಕರ್‌ನ 'ಕಾಡಿನ ತಾಯಿ' ಎಂದೇ ಕರೆಯುವ  ಬೃಹತ್ ಮರವೊಂದು ಕಣ್ಮರೆಯಾಗುತ್ತಿದೆೀ.ಬರೋಬ್ಬರಿ ಹನ್ನೆರಡು ಶತಮಾನಗಳ ಕಾಲ ಬದುಕಿ, ಜೀವಿ ವೈವಿದ್ಯಕ್ಕೆ ಆಸರೆಯಾಗಿತ್ತು. ಪ್ರಕೃತಿ ಮಹಾ ವಿನಾಶಕ್ಕೆ ಮುನ್ನುಡಿಯೇ?

PREV
13
Tsitakakantsa: 12 ಶತಮಾನಗಳ ಕಾಲ ಬದುಕಿದ್ದ ಮರ ಈಗ ಸಾಯುತ್ತಿದೆ..!

ಪ್ರಕೃತಿಯ ದೈತ್ಯ ಮರವೊಂದು ಕೊನೆಯುಸಿರೆಳೆಯಲು ಬಿಕ್ಕುತ್ತಿದೆ. ಮಡಗಾಸ್ಕರ್‌ನ 'ಕಾಡಿನ ತಾಯಿ' ಎಂದೇ ಕರೆಯುವ ಬೃಹತ್ ಮರವೊಂದು ಕಣ್ಮರೆಯಾಗುತ್ತಿದೆೀ ಮರ ನೂರು ಇನ್ನೂರು ವರ್ಷದ್ದಲ್ಲ, ಒಂದು ಎರಡು ಶತಮಾನದ್ದಲ್ಲ, ಬರೋಬ್ಬರಿ ಹನ್ನೆರಡು ಶತಮಾನಗಳ ಕಾಲ, ಅಂದರೆ ಸುಮಾರು ಒಂದು ಸಾವಿರ ವರ್ಷಗಳ ಕಾಲ ಬದುಕಿ, ಜೀವಿ ವೈವಿದ್ಯಕ್ಕೆ ಆಸರೆಯಾಗಿ ಅದೆಷ್ಟೋ ಕಥೆಗಳನ್ನು ತನ್ನ ಎದೆಯಲ್ಲಿಟ್ಟುಕೊಂಡು ಬದುಕಿದ್ದ , ಈ ಭೂಮಿಯ ಅತಿ ದೊಡ್ಡ ಬಾವೊಬ್ಯಾಬ್‌ಗಳಲ್ಲಿ ಒಂದಾದ ತ್ಸಿಟಕಾಕಂತ್ಸಾ(Tsitakakantsa) ಈಗ ನಿಧಾನವಾಗಿ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ.

23
ಪ್ರಕೃತಿಯ ದೈತ್ಯ ಮರವೊಂದು ಕೊನೆಯುಸಿರೆಳೆಯಲು ಕಾರಣವೇನು?

ಅಕ್ಟೋಬರ್ 2025ರಲ್ಲಿ ಮೊದಲ ಬಾರಿಗೆ ಮರದಿಂದ ಕೊಳೆಯುವಿಕೆಯ ಭಯಂಕರ ವಾಸನೆ ಹೊರಹೊಮ್ಮಿತು. ಬುಡದಲ್ಲಿ ಕಪ್ಪು ದ್ರವ ಸುರಿಯುತ್ತಿತ್ತು. ಇತ್ತೀಚೆಗೆ ಅದು ತನ್ನ ಮುಖ್ಯ ಕೊಂಬೆಗಳಲ್ಲಿ ಒಂದನ್ನು ಕಳೆದುಕೊಂಡಿದೆ. ಬಾವೊಬ್ಯಾಬ್‌ಗಳ ಪ್ರಪಂಚ ಪ್ರಸಿದ್ಧ ತಜ್ಞೆ ಸಿರಿಲ್ ಕಾರ್ನು (ನಿರ್ದೇಶಕಿ, 'ಮಾಮೋಡಿ, ದಿ ಲಾಸ್ಟ್ ಬಾವೊಬಾಬ್ ಡಿಗ್ಗರ್') ಅವರು 'ಒಬ್ಬ ತಜ್ಞನಾಗಿ, ಮಡಗಾಸ್ಕರ್‌ನಲ್ಲಿ ಇದುವರೆಗೆ ದಾಖಲಾದ ಅತಿದೊಡ್ಡ ಬಾವೊಬಾಬ್ ತ್ಸಿಟಕಾಕಂತ್ಸಾದ ಬದಲಾಯಿಸಲಾಗದ ಅವನತಿಯನ್ನು ಅಪಾರ ದುಃಖದಿಂದ ದೃಢೀಕರಿಸುತ್ತೇನೆ' ಎಂದು ಭಾವುಕರಾಗಿ ಹೇಳುತ್ತಾರೆ.

ವಿಮಾನದಿಂದ ತೆಗೆದ ಚಿತ್ರಗಳಲ್ಲಿ ಕಾಂಡದ ಮೇಲ್ಭಾಗದಲ್ಲಿ ದೊಡ್ಡ ರಂಧ್ರ ಕಂಡುಬಂದಿದೆ. 2025ರ ಆರಂಭದಲ್ಲಿ ಬಂದ ಉಷ್ಣವಲಯದ ಬಿರುಗಾಳಿ ಜೂಡ್ ಆ ರಂಧ್ರವನ್ನು ನೀರಿನಿಂದ ತುಂಬಿಸಿ, ಮರದ ಒಳಗಿನ ತಿರುಳನ್ನು ಕೊಳೆಯುವಂತೆ ಮಾಡಿರಬಹುದು ಎಂದು ಸಂಶೋಧಕರು ಊಹಿಸುತ್ತಿದ್ದಾರೆ. ಆದರೆ ಬಾವೊಬ್ಯಾಬ್‌ಗಳು ಒಂದೇ ದಿನ ಕಣ್ಮರೆಯಾಗುವುದಿಲ್ಲ. ಅವು ನಿಧಾನವಾಗಿ, ಛಿದ್ರವಾಗಿ, ಭೂಮಿಗೆ ಮರಳುತ್ತವೆ. ತಜ್ಞರ ಪ್ರಕಾರ, ಈ ದೈತ್ಯವು ಇನ್ನು 2 ರಿಂದ 3 ವರ್ಷಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಬಹುದು. ಇದು ಕೇವಲ ಒಂದು ಮರದ ಸಾವಲ್ಲ.

ಇದು ಲಕ್ಷಾಂತರ ವರ್ಷಗಳ ಮಡಗಾಸ್ಕರ್‌ನ ಅನನ್ಯ ಜೀವವೈವಿಧ್ಯತೆಗೆ, ಸ್ಥಳೀಯ ಸಂಸ್ಕೃತಿಗೆ ಮತ್ತು ಪ್ರಕೃತಿಯ ಸ್ಮಾರಕಕ್ಕೆ ಆಗುತ್ತಿರುವ ದೊಡ್ಡ ನಷ್ಟ. 'ಕಾಡಿನ ತಾಯಿ' ಈಗ ತನ್ನ ಕೊನೆಯ ದಿನಗಳನ್ನು ಬದುಕುತ್ತಿದ್ದಾಳೆ.

33
ನೋಡಲು ಇನ್ನೂ ಸಮಯವಿದೆ!

ಅವಳನ್ನು ನೋಡಲು ಇನ್ನೂ ಸಮಯವಿದೆ... ಆದರೆ ಅದು ಬಹಳ ಕಡಿಮೆ. ಪ್ರಕೃತಿಯ ಈ ಮಹಾಕಾವ್ಯದ ಕೊನೆಯ ಅಧ್ಯಾಯವನ್ನು ನೋಡುವಾಗ ನಮ್ಮ ಮನಸ್ಸು ಒಂದು ಪ್ರಶ್ನೆ ಕೇಳದೇ ಇರದು; ನಾವು ಇನ್ನೂ ಎಷ್ಟು ದೈತ್ಯರನ್ನು ಕಳೆದುಕೊಳ್ಳಬೇಕು?

ಮೂಲ ಬರಹ:

ಹಸೀನಾ ಜಿಯೋವಾನಿ

ಸಿಂಡಿಗೇಟ್ ಮೀಡಿಯಾ ಇಂಕ್.

Read more Photos on
click me!

Recommended Stories