ಹಿಂದೂ ಧರ್ಮದಲ್ಲಿ ಹಲವು ನಂಬಿಕೆಗಳಿವೆ. ಸೂರ್ಯಾಸ್ತದ ನಂತರ ಕೆಲವು ರೀತಿಯ ಕೆಲಸಗಳನ್ನು ಮಾಡಬಾರದು ಎಂದು ಹೇಳುತ್ತಾರೆ. ಸೂರ್ಯಾಸ್ತದ ನಂತರ ಮನೆಯಲ್ಲಿ ಕಸ ಗುಡಿಸಬಾರದು, ಸಾಲ ಕೊಡಬಾರದು, ಹೀಗೆ ಕೆಲವು ರೀತಿಯ ವಸ್ತುಗಳನ್ನು ದಾನ ಮಾಡಬಾರದು ಎಂದು ಹೇಳುತ್ತಾರೆ. ಹಾಗೆಯೇ ರಾತ್ರಿಯಲ್ಲಿ ಚಿಕ್ಕ ಮಕ್ಕಳ ಬಟ್ಟೆಗಳನ್ನು ಹೊರಗೆ ಒಣಗಿಸಬಾರದು ಎಂದು ಹೇಳುತ್ತಾರೆ. ಇಷ್ಟಕ್ಕೂ ದೊಡ್ಡವರು ಹೀಗೆ ಯಾಕೆ ಹೇಳುತ್ತಾರೆ? ಇದರ ಹಿಂದೆ ಏನಾದರೂ ವೈಜ್ಞಾನಿಕ ಕಾರಣ ಇದೆಯೇ? ಎಂಬುದನ್ನು ಈಗ ತಿಳಿದುಕೊಳ್ಳೋಣ.