ಮುಖ್ಯ ಬಾಗಿಲು ಕೇವಲ ಪ್ರವೇಶ ಮತ್ತು ನಿರ್ಗಮನದ ಜಾಗವಲ್ಲ. ಸಂತೋಷ, ಸಮೃದ್ಧಿ, ಸಕಾರಾತ್ಮಕ ಶಕ್ತಿ, ಲಕ್ಷ್ಮಿ ಮನೆ ಪ್ರವೇಶ ಮಾಡುವ ಬಾಗಿಲಾಗಿದೆ. ಮನೆಯ ಮುಖ್ಯ ಬಾಗಿಲು ತೆರೆಯುವಾಗ ಶಬ್ಧ ಮಾಡುತ್ತಿದ್ದರೆ ಅದು ಕೇವಲ ತಾಂತ್ರಿಕ ಸಮಸ್ಯೆಯಲ್ಲ. ಇದು ಪ್ರಗತಿಗೆ ಅಡ್ಡಿಯಾಗುವ ಗಂಭೀರ ವಾಸ್ತು ದೋಷ.
ಮುಖ್ಯ ಬಾಗಿಲಿನಿಂದ ಬರುವ ಶಬ್ಧ ಜಾತಕದಲ್ಲಿ ರಾಹು ಮತ್ತು ಕೇತುವಿನ ಅಶುಭ ಪರಿಣಾಮಗಳನ್ನು ಹೆಚ್ಚಿಸುತ್ತದೆ. ಇದು ಮನೆಯಲ್ಲಿ ಹಠಾತ್ ಅಪಘಾತ ಅಥವಾ ಕಾನೂನು ವೆಚ್ಚಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.
29
ಸಂಪತ್ತಿನ ನಷ್ಟ
ಮುಖ್ಯ ಬಾಗಿಲಿನಿಂದ ಶಬ್ದ ಬರ್ತಿದ್ದರೆ ಮನೆಯಲ್ಲಿ ಹಣದ ಒಳ ಹರಿವು ಕಡಿಮೆ ಇರುತ್ತದೆ. ಯಾವುದೇ ಕೆಲ್ಸ ಯಶಸ್ವಿಯಾಗಿ ನಡೆಯೋದಿಲ್ಲ. ಇದ್ರಿಂದ ಸಮೃದ್ಧಿ ನಿಲ್ಲುತ್ತದೆ. ಈ ಬಾಗಿಲು ದೋಷ ಕ್ರಮೇಣ ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತದೆ.
39
ಮಾನಸಿಕ ಒತ್ತಡ
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಬಾಗಿಲು ಮಾಡುವ ಈ ಶಬ್ಧ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಮಾನಸಿಕ ಸಮಸ್ಯೆ ಸೃಷ್ಟಿಸುತ್ತದೆ. ಕುಟುಂಬ ಸದಸ್ಯರಲ್ಲಿ ಕಿರಿಕಿರಿ ಉಂಟುಮಾಡುತ್ತದೆ. ಮನೆಯಲ್ಲಿ ಅನಗತ್ಯ ಜಗಳ, ಗಲಾಟೆಗೆ ದಾರಿಮಾಡಿಕೊಡುತ್ತದೆ.
ಮನೆಯ ಮುಖ್ಯ ಬಾಗಿಲು ಶಬ್ಧ ಮಾಡ್ತಿದ್ದರೆ ಅದನ್ನು ತಕ್ಷಣ ಸರಿಪಡಿಸಿ. ವಾಸ್ತು ದೋಷದಿಂದ ಆಗುವ ನಷ್ಟವನ್ನು ತಪ್ಪಿಸಿ. ಬಾಗಿಲು ಶಬ್ಧ ಬರದಂತೆ ಎಣ್ಣೆ ಹಚ್ಚಬೇಕು. ಇದ್ರಿಂದ ಬಾಗಿಲು ಸಡಿಲಗೊಂಡು ಶಬ್ಧ ಬರುವುದು ನಿಲ್ಲುತ್ತದೆ.
59
ವಾಸ್ತು ಪರಿಹಾರ
ಮೊದಲು ಮನೆ ಬಾಗಿಲಿನಿಂದ ಬರುವ ಶಬ್ಧವನ್ನು ಬಂದ್ ಮಾಡಿ. ನಂತ್ರ ವಾಸ್ತು ಶಾಸ್ತ್ರದ ಪ್ರಕಾರ ಬಾಗಿಲನ್ನು ಶುದ್ಧಗೊಳಿಸಿ. ಬಾಗಿಲಿನ ಚೌಕಟ್ಟನ್ನು ಶುದ್ಧ ನೀರಿನಿಂದ ಒರೆಸಬೇಕು. ಗಂಗಾ ನೀರು ಅಥವಾ ಶುದ್ಧ ನೀರಿಗೆ ಸ್ವಲ್ಪ ಅರಿಶಿನವನ್ನು ಬೆರೆಸಿ ಬಾಗಿಲಿನ ಚೌಕಟ್ಟಿನ ಮೇಲೆ ಸಿಂಪಡಿಸಿ. ಅರಿಶಿನವು ವಿಷ್ಣು ಮತ್ತು ಸಮೃದ್ಧಿ ಸಂಕೇತವಾಗಿದೆ. ಮುಖ್ಯ ಬಾಗಿಲಿನ ಮೇಲೆ ಕುಂಕುಮ ಅಥವಾ ಅರಿಶಿನದಿಂದ ಸ್ವಸ್ತಿಕ ಚಿಹ್ನೆಯನ್ನು ಬರೆಯಿರಿ. ಇದು ನಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುವುದನ್ನು ತಡೆಯುತ್ತದೆ.
69
ಚತುರ್ಮುಖ ದೀಪ ಹಚ್ಚಿ
ಸಂಜೆ ಸೂರ್ಯಾಸ್ತದ ಸಮಯದಲ್ಲಿ ಮುಖ್ಯ ಬಾಗಿಲಿನ ಬಲಭಾಗದಲ್ಲಿ ತುಪ್ಪ ಅಥವಾ ಎಳ್ಳೆಣ್ಣೆಯ ದೀಪವನ್ನು ಹಚ್ಚಬೇಕು. ಚತುರ್ಮುಖ ದೀಪವನ್ನು ಬೆಳಗಿಸುವುದು ಉತ್ತಮ. ಇದನ್ನು ಶುಭವೆಂದು ಪರಿಗಣಿಸಲಾಗುತ್ತದೆ.
79
ನಾಮಫಲಕ
ಸರಿಯಾದ ನಾಮಫಲಕವನ್ನು ಆರಿಸುವುದು ಮುಖ್ಯ. ಬಾಗಿಲಿನ ಮೇಲೆ ಸ್ವಚ್ಛ, ಸುಂದರವಾದ ಅಕ್ಷರಗಳನ್ನು ಹೊಂದಿರುವ ನಾಮಫಲಕವನ್ನು ಇರಿಸಬೇಕು. ಮರದ ಅಥವಾ ತಾಮ್ರದ ನಾಮಫಲಕವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
89
ತೋರಣ
ತಾಜಾ ಮಾವಿನ ಅಥವಾ ಅಶೋಕ ಎಲೆಗಳ ತೋರಣವನ್ನು ನೀವು ಮುಖ್ಯ ಬಾಗಿಲಿಗೆ ಹಾಕಬೇಕು. ಇದನ್ನು ಅತ್ಯಂತ ಶುಭ ಎಂದು ನಂಬಲಾಗುತ್ತದೆ. ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡೋದನ್ನು ಇದು ತಪ್ಪಿಸುತ್ತದೆ.
99
ಇದನ್ನು ಇಡಬೇಡಿ
ಮುಖ್ಯ ಬಾಗಿಲಿನ ಮುಂದೆ ಶೂಗಳ ರಾಶಿಯನ್ನು ಇಡಬೇಡಿ. ಮುಖ್ಯ ಬಾಗಿಲಿನ ಮುಂದೆ ಅಥವಾ ಹಿಂದೆ ಶೂ, ಚಪ್ಪಲಿ ಅಥವಾ ಹಾಳಾದ ವಸ್ತುಗಳನ್ನು ಇಡಬೇಡಿ. ಲಕ್ಷ್ಮಿ ಮನೆ ಪ್ರವೇಶವನ್ನು ಇದು ತಡೆಯುತ್ತದೆ. ರಾಹು ಮತ್ತು ಕೇತುವಿನ ನಕಾರಾತ್ಮಕ ಪ್ರಭಾವ ಹೆಚ್ಚಾಗುತ್ತದೆ.