ದೇವರ ಕೋಣೆಯಲ್ಲಿ ನೀರಿಡೋದು ಏಕೆ?

First Published May 16, 2023, 4:51 PM IST

ವಾಸ್ತು ಶಾಸ್ತ್ರವು ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯನ್ನು ಆಧರಿಸಿದೆ. ವಾಸ್ತುವಿನಲ್ಲಿ, ಮನೆಯ ಪ್ರತಿಯೊಂದು ದಿಕ್ಕು ಮತ್ತು ಕೋಣೆಗೆ ವಿಶೇಷ ಸ್ಥಾನವಿದೆ. ಮನೆಯಲ್ಲಿ ಯಾವ ವಸ್ತುವನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಅದನ್ನು ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದೆ. ಪೂಜಾ ಮನೆಯಲ್ಲಿ ಇದಕ್ಕೆ ಸಂಬಂಧಿಸಿದ ವಾಸ್ತುವಿನ ಕೆಲವು ನಿಯಮಗಳಿವೆ. 

ವಾಸ್ತು ಪ್ರಕಾರ, ಪೂಜಾ ಮನೆಯಲ್ಲಿ(Pooja room) ನೀರನ್ನು ಇಡುವುದು ಅವಶ್ಯಕ. ಪ್ರಾರ್ಥನಾ ಕೊಠಡಿಯಲ್ಲಿ ನೀರನ್ನು ಏಕೆ ಇಡಬೇಕು? ಎಲ್ಲಾ ಮನೆಗಳಲ್ಲಿ ಪೂಜಾ ಸ್ಥಳವಿದೆ, ಅಲ್ಲಿ ಪೂಜಾ ಸಾಮಗ್ರಿಗಳ ಜೊತೆಗೆ, ಶಂಖ, ಗರುಡ ಗಂಟೆ, ಶ್ರೀಗಂಧದ ಬಟ್ಟಿ, ತಾಮ್ರದ ನಾಣ್ಯ, ಗಂಗಾಜಲ ಮತ್ತು ನೀರಿನ ಮಡಕೆಯನ್ನು ಸಹ ಇಡಲಾಗುತ್ತೆ. ಲೋಟ ಇಲ್ಲದಿದ್ದರೆ, ನೀರಿನ ಪಾತ್ರೆ ಇರಿಸುತ್ತಾರೆ. ಈ ನೀರನ್ನು ಪೂಜಾ ಮನೆಯಲ್ಲಿ ಏಕೆ ಇಡಲಾಗುತ್ತೆ? ಇದಕ್ಕೆ ಕಾರಣವೇನು ಗೊತ್ತಾ?

ಪರಿಶುದ್ಧತೆ
ಪ್ರತಿದಿನ ಪೂಜೆಗೆ ಮೊದಲು, ನಾವು ದೇವರ ವಿಗ್ರಹವನ್ನು(Idol) ನೀರಿನಿಂದ ಸ್ನಾನ ಮಾಡಿಸುತ್ತೇವೆ ಮತ್ತು ನಂತರ ಆ ಸ್ಥಳದ ಮೇಲೆ ನೀರನ್ನು ಸಿಂಪಡಿಸುತ್ತೇವೆ ಮತ್ತು ಅದನ್ನು ಶುದ್ಧೀಕರಿಸುತ್ತೇವೆ. ಅದಕ್ಕಾಗಿಯೇ ನೀರಿನ ಅವಶ್ಯಕತೆಗಾಗಿ ಮಡಕೆಯಲ್ಲಿ ನೀರನ್ನು ಇಡಲಾಗುತ್ತೆ.

ವರುಣ ದೇವ(Rain God)
ಗುರುದೇವನನ್ನು ಗರುಡ ಗಂಟೆಯ ರೂಪದಲ್ಲಿ ಸ್ಥಾಪಿಸಿದಂತೆಯೇ, ವರುಣ ದೇವ ನೀರಿನ ರೂಪದಲ್ಲಿ ಸ್ಥಾಪಿತನಾಗಿದ್ದಾನೆ.  ಪೂಜಾ ಮನೆಯಲ್ಲಿ ನೀರನ್ನು ಇಡಲು ಕಾರಣವೆಂದರೆ ನೀರನ್ನು ವರುಣ ದೇವನ ರೂಪದಲ್ಲಿ ಪೂಜಿಸಲಾಗುತ್ತೆ ಮತ್ತು ಅವನು ಜಗತ್ತನ್ನು ರಕ್ಷಿಸುತ್ತಾನೆ ಎಂಬ ನಂಬಿಕೆ.

ತುಳಸಿ ನೀರು(Tulsi water)
ತುಳಸಿಯ ಕೆಲವು ಎಲೆಗಳನ್ನು ಪೂಜಾ ಮನೆಯಲ್ಲಿ ಇರಿಸಲಾದ ನೀರಿನಲ್ಲಿ ಇಡಲಾಗುತ್ತೆ, ಇದರಿಂದಾಗಿ ಆ ನೀರು ಶುದ್ಧ ಮತ್ತು ಪರಿಶುದ್ಧವಾಗುತ್ತೆ ಮತ್ತು ಈ ಕಾರಣದಿಂದಾಗಿ, ನಾವು ಪೂಜಾ ಸ್ಥಳವನ್ನು ಶುದ್ಧೀಕರಿಸಿದಾಗ ದೇವರು ಮತ್ತು ದೇವತೆಗಳು ಸಂತೋಷಪಡುತ್ತಾರೆ.

ನೈವೇದ್ಯ
ನೈವೇದ್ಯ ಎಂದು ಕರೆಯಲ್ಪಡುವ ಪ್ರಸಾವನ್ನ ಪೂಜೆಯ ನಂತರ ನಾವು ಪ್ರತಿದಿನ ದೇವರಿಗೆ ಅರ್ಪಿಸುತ್ತೇವೆ. ನೈವೇದ್ಯದಲ್ಲಿ ಮಾಧುರ್ಯವಿದೆ. ಹಾಗೆಯೇ ನಿಮ್ಮ ಜೀವನದಲ್ಲಿ ಮಾಧುರ್ಯವನ್ನು ಹೊಂದಿರುವುದು ಮುಖ್ಯ. ದೇವತೆಯನ್ನು ಪೂಜಿಸೋದರಿಂದ, ಮಾಧುರ್ಯ, ಸೌಮ್ಯತೆ ಮತ್ತು ಸರಳತೆ(Simplicity) ಜೀವನದಲ್ಲಿ ಉಳಿಯುತ್ತೆ. 

ನೈವೇದ್ಯವನ್ನು ಹಣ್ಣು(Fruits), ಸಿಹಿತಿಂಡಿ, ಬೀಜ ಮತ್ತು ಪಂಚಾಮೃತದೊಂದಿಗೆ ನೀಡಲಾಗುತ್ತೆ. ನೈವೇದ್ಯವನ್ನು ಅರ್ಪಿಸಿದ ನಂತರ, ದೇವರಿಗೆ ನೀರನ್ನು ಅರ್ಪಿಸುವುದು ಶಾಸ್ತ್ರಗಳಲ್ಲಿ ತಿಳಿಸಿದ ಸಂಪ್ರದಾಯವಾಗಿದೆ. ಅದಕ್ಕಾಗಿಯೇ ಪೂಜಾ ಮನೆಯಲ್ಲಿ ನೀರನ್ನು ಇಡಲಾಗುತ್ತೆ .
 

ನೀರಿನ ಸ್ಥಾಪನೆ
ಪೂಜಾ ಮನೆಯಲ್ಲಿ ಅಥವಾ ಉತ್ತರ ಮತ್ತು ಈಶಾನ್ಯ ಮೂಲೆಯಲ್ಲಿ ನೀರನ್ನು ಇಡುವುದರಿಂದ, ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತೆ. ಆದ್ದರಿಂದ, ಪೂಜಾ ಮನೆಯಲ್ಲಿ ನೀರನ್ನು ಸ್ಥಾಪಿಸಲಾಗುತ್ತೆ. ಪೂಜಾ ಸ್ಥಳದಲ್ಲಿ ತಾಮ್ರದ ಪಾತ್ರೆಯಲ್ಲಿ ನೀರನ್ನು ಇಟ್ಟರೆ, ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತೆ. ನಂಬಿಕೆ ಪ್ರಕಾರ, ನೀರನ್ನು ಇಟ್ಟುಕೊಳ್ಳುವುದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು(Positive energy) ರವಾನಿಸುತ್ತೆ.

ಆರತಿ
ನಾವು ಆರತಿ ಮಾಡುವಾಗ, ಆರತಿ ತಟ್ಟೆಯಲ್ಲಿ ಸ್ವಲ್ಪ ನೀರನ್ನು ಹಾಕುವ ಮೂಲಕ ಆರತಿಯನ್ನು ತಣ್ಣಗಾಗಿಸಲಾಗುತ್ತೆ . ಇದರ ನಂತರ, ನಾಲ್ಕು ದಿಕ್ಕುಗಳಲ್ಲಿ ಮತ್ತು ಎಲ್ಲಾ ಜನರ ಮೇಲೆ ನೀರನ್ನು ಪ್ರೋಕ್ಷಣೆ ಮಾಡಲಾಗುತ್ತೆ. ಅದಕ್ಕಾಗಿಯೇ ಪೂಜಾ ಮನೆಯಲ್ಲಿ ನೀರನ್ನು ಇಡಲಾಗುತ್ತೆ.

click me!