Palash Flower Remedies: ಹಿಂದೂ ಧರ್ಮದಲ್ಲಿ ಮುತ್ತುಗದ ಹೂವುಗಳ ಪ್ರಾಮುಖ್ಯತೆ ಏನು ಗೊತ್ತಾ?

First Published May 25, 2023, 12:56 PM IST

ಹಿಂದೂ ಧರ್ಮದಲ್ಲಿ ಪ್ರಕೃತಿಗೆ ವಿಶೇಷ ಮಹತ್ವವಿದೆ. ಸನಾತನ ಧರ್ಮದಲ್ಲಿ ಅನೇಕ ಮರಗಳು ಮತ್ತು ಸಸ್ಯಗಳನ್ನು ಪೂಜ್ಯವೆಂದು ಪರಿಗಣಿಸಲಾಗಿದೆ. ಯಾಕಂದ್ರೆ ಅವುಗಳಲ್ಲಿ ದೇವರು ಮತ್ತು ದೇವತೆಗಳು ಇದ್ದಾರೆ ಎನ್ನುವ ನಂಬಿಕೆ ಇದೆ. ಇಲ್ಲಿ ಮುತ್ತುಗದ ಹೂವುಗಳ ಪ್ರಾಮುಖ್ಯತೆಯ ಬಗ್ಗೆ ತಿಳಿಯೋಣ.
 

ಮುತ್ತುಗದ ಮರವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂಬ ಮೂರು ದೇವತೆಗಳ ವಾಸಸ್ಥಾನವೆಂದು ನಂಬಲಾಗಿದೆ. ಮುತ್ತುಗದ ಹೂವುಗಳ(Palash Flower) ಸೌಂದರ್ಯವು ಯಾರ ಮನಸ್ಸನ್ನೂ ಆಕರ್ಷಿಸಬಹುದು. ಅವುಗಳನ್ನು ಟೆಸು ಹೂವುಗಳು, ಪಾಲಾಶ ಹೂವುಗಳು ಎಂದೂ ಕರೆಯಲಾಗುತ್ತೆ. 

ಮನೆಯ ಸೌಂದರ್ಯವನ್ನು(Beauty) ಹೆಚ್ಚಿಸಲು ಅನೇಕ ಜನರು ಮುತ್ತುಗದ ಮರಗಳನ್ನು ನೆಡುತ್ತಾರೆ. ಆದರೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಮನೆಯಲ್ಲಿ ಎಂದಿಗೂ ಹಣದ ಕೊರತೆ ಬಾರದಂತೆ ನೋಡಿಕೊಳ್ಳಬಹುದು ಎಂದು ನಿಮಗೆ ತಿಳಿದಿದ್ಯಾ.

Latest Videos


ಯಾವ ವಿಧಾನದಿಂದ ತಿಜೋರಿ (Locker) ಭರ್ತಿ ಮಾಡಬಹುದು ಗೊತ್ತಾ?: ಮುತ್ತುಗದ ಹೂವುಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿ. ಈ ಕ್ರಮದಿಂದ, ಮನೆಯಲ್ಲಿ ಎಂದಿಗೂ ಹಣದ ಕೊರತೆ ಇರೋದಿಲ್ಲ. ಬಿಳಿ ಮುತ್ತುಗದ ಹೂವುಗಳನ್ನು ತಿಜೋರಿಯಲ್ಲಿ ಇಡುವುದು ಸಹ ತಕ್ಷಣದ ಪ್ರಯೋಜನಗಳನ್ನು ನೀಡುತ್ತೆ. 

ಹಾಗೆಯೇ, ಮನಸ್ಸು ಗೊಂದಲಕ್ಕೀಡಾಗಿದ್ದರೆ, ಮುತ್ತುಗದ ಹೂವುಗಳನ್ನು  ದಿಂಬಿನ (Pillow) ಕೆಳಗೆ ಇರಿಸಿ ಅಥವಾ ದಿಂಬಿನ ಬಳಿ ಮುತ್ತುಗದ ಹೂವುಗಳ ಹೂಗುಚ್ಛವನ್ನು ಇರಿಸಿ. ಇದು ಮನಸ್ಸಿಗೆ ಶಾಂತಿ ಮತ್ತು ಉತ್ತಮ ನಿದ್ರೆಯನ್ನು ನೀಡುತ್ತೆ.

ಅನಾರೋಗ್ಯದಿಂದ (Health issues) ಪರಿಹಾರ ಪಡೆಯೋದು ಹೇಗೆ?: ದೀರ್ಘಕಾಲದಿಂದ ಯಾವುದಾದರು ಕಾಯಿಲೆಯಿಂದ ಬಳಲುತ್ತಿದ್ದರೆ, ಇದಕ್ಕಾಗಿ ಮುತ್ತುಗದ ಹೂವಿನ ಈ ಪರಿಹಾರವನ್ನು ಮಾಡಬಹುದು. ಭಾನುವಾರ, ಮುತ್ತುಗದ ಮರದ ಬೇರನ್ನು ತೆಗೆದುಕೊಂಡು ಅದರಲ್ಲಿ ಹತ್ತಿ ದಾರವನ್ನು ಸುತ್ತಿ ಮತ್ತು ಅದನ್ನು ನಿಮ್ಮ ಬಲಗೈಗೆ ಕಟ್ಟಿ. ಇದನ್ನು ಮಾಡೋದರಿಂದ, ಗಂಭೀರ ಸಮಸ್ಯೆಗೆ ಪರಿಹಾರ ಸಿಗುತ್ತೆ .

ಕೆಟ್ಟ ಕ್ಷಣವನ್ನು ತೊಡೆದುಹಾಕಲು ಏನು ಮಾಡಬೇಕು: ಶನಿ ದೇವರಿಗೆ(Lord Shani) ಕಪ್ಪು ಎಳ್ಳು ಮತ್ತು ಎಣ್ಣೆಯೊಂದಿಗೆ ಮುತ್ತುಗದ ಹೂವುಗಳನ್ನು ಅರ್ಪಿಸೋದರಿಂದ ಶನಿ ಕೆಟ್ಟ ಪರಿಣಾಮವನ್ನು ಬೀರೋದಿಲ್ಲ. ಮಂಗಳ ಗ್ರಹವನ್ನು ಶಾಂತಗೊಳಿಸಲು 21 ಮಂಗಳವಾರ ಹನುಮಂತನಿಗೆ ಮುತ್ತುಗದ ಹೂವುಗಳನ್ನು ಅರ್ಪಿಸಿ.

ಲಕ್ಷ್ಮಿ ದೇವಿಯನ್ನು(Goddess Lakshmi) ಮೆಚ್ಚಿಸೋದು ಹೇಗೆ?: ಪ್ರತಿ ಶುಕ್ರವಾರ, ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಮುತ್ತುಗದ ಹೂವುಗಳನ್ನು ಅರ್ಪಿಸಿ. ಇದನ್ನು ಮಾಡೋದರಿಂದ, ಮಾತೆ ಲಕ್ಷ್ಮಿ ಸಂತೋಷಪಡುತ್ತಾಳೆ ಮತ್ತು ನಿಮ್ಮ ಮೇಲೆ ಆಕೆ ಪೂರ್ತಿ ಆಶೀರ್ವಾದ ಇಟ್ಟು ಕಾಪಾಡಿಕೊಳ್ಳುತ್ತಾಳೆ.

ಈ ಕಾರಣದಿಂದಾಗಿ ಮನೆಯಲ್ಲಿ ಶಾಂತಿ (Patience) ಮತ್ತು ಸಂತೋಷವಿರಲಿದೆ. ಬಿಳಿ ಬಣ್ಣದ ಹೂವುಗಳು ತಾಯಿ ಲಕ್ಷ್ಮಿಗೆ ತುಂಬಾ ಪ್ರಿಯವಾದದ್ದು. ಆದ್ದರಿಂದ ನೀವು ಅವುಗಳನ್ನು ಸಹ ನೀಡಬಹುದು. ಇದರಿಂದ ಆಕೆಯ ವಿಶೇಷ ಅನುಗ್ರಹ ನಿಮ್ಮ ಮೇಲೆ ಇರಲಿದೆ.

click me!