ಇದೆಲ್ಲಾ ನಡೆಯುತ್ತಿರುವಾಗ ಇಲ್ಲಿ ನಿಜವಾದ ವಿಲನ್ ಯಾರು ಅನ್ನೋದೆ ವೀಕ್ಷಕರ ಪಾಲಿನ ಕಗ್ಗಂಟಾಗಿದೆ. ಯಾಕಂದ್ರೆ ಒಂದು ರೀತಿಯಲ್ಲಿ ನೋಡಿದ್ರೆ ರಾಣಾ ಎಲ್ಲರ ಎದುರಲ್ಲೇ ತನ್ನ ಕೋಪ ತಾಪವನ್ನು ಪ್ರದರ್ಶಿಸುತ್ತಿದ್ದಾನೆ. ಇನ್ನೊಂದೆಡೆ ಕಪಿಲ್ ಅಣ್ಣನ ಮಾತಿನಂತೆ, ಈ ಆಸ್ತಿಯೆಲ್ಲಾ ತಮಗೆ ಆಗಬೇಕೆಂಬ ದುರಾಸೆಯಿಂದ ಸ್ವಂತ ಅಣ್ಣ ಜೀವನನ್ನು ಕೊಲ್ಲೋದಕ್ಕೂ ಹಿಂದೆ ಮುಂದೆ ಯೋಚಿಸದೆ, ನೇರವಾಗಿಯೇ ಯುದ್ಧಕ್ಕೆ ನಿಂತಂತೆ ಸಜ್ಜಾಗಿದ್ದಾನೆ.