ನಿಜ ಜೀವನದಲ್ಲಿ ರಾಮನ ಭಕ್ತ ರಾವಣನ ಪಾತ್ರಧಾರಿ ತ್ರಿವೇದಿ ಬಗ್ಗೆ ಗೊತ್ತಿರದ ವಿಷಯಗಳು...

First Published Apr 20, 2020, 12:30 PM IST

ದೂರದರ್ಶನದಲ್ಲಿ ಮರು ಪ್ರಸಾರವಾಗುತ್ತಿರುವ ರಾಮಾಯಣದಲ್ಲಿ ರಾವಣನ ಅಂತ್ಯವಾಗಿದೆ. ಖುಷಿಯಾಗಬೇಕಿತ್ತು. ಆದರೆ, ಅಂಥ ಅದ್ಭುತ ನಟನ ಅಭಿನಯನವನ್ನು ಮಿಸ್ ಮಾಡಿಕೊಳ್ಳುತ್ತೇವೆಂದು ವೀಕ್ಷಕರಿಗೆ ಬೇಜಾರಾಗಿದೆ. ರಾವಣನೇ ಆವಿರ್ಭಿಸಿದಂತೆ ನಟಿಸಿದ ಅರವಿಂದ್ ತ್ರಿವೇದಿ ಅಭಿನಯನವನ್ನು ಇಷ್ಟ ಪಡದವರು ಯಾರ ಹೇಳಿ? ರಾವಣನ ಪಾತ್ರ ಮಾಡಿದ ರಾವಣನ ಪಾತ್ರಧಾರಿ ನಿಜ ಜೀವನದಲ್ಲಿ ನಿಜವಾದ ರಾಮ ಭಕ್ತ. ಸೀತೆಯನ್ನು ಅಪಹರಿಸಿದ ದೃಶ್ಯ ನೋಡಿ ಇವರು ಮರುಗಿದ ವೀಡಿಯೋ ತುಣಕೊಂದು ಇತ್ತೀಚೆಗೆ ವೈರಲ್ ಆಗಿತ್ತು. ರಾಜಕಾರಣಿಯೂ ಆಗಿರುವ ತ್ರಿವೇದಿ ಪ್ರಧಾನಿ ಮೋದಿ ಭಕ್ತನೂ ಹೌದು. ಇಂಥ ಮಹಾನ್ ನಟನ ಬಗ್ಗೆ ಒಂದಿಷ್ಟು ನಿಮಗೆ ಗೊತ್ತಿರದ ವಿಷಯಗಳು. 

ರಾಮಾಯಣದಲ್ಲಿ ರಾವಣನಾಗಿ ಅಭನಯಿಸುವ ಮುಂಚೆ ಅನೇಕ ಗುಜರಾತಿ ಚಿತ್ರಗಳಲ್ಲಿ ನಟಿಸಿದ್ದರು ಅರವಿಂದ್ ತ್ರಿವೇದಿ. ಇವರ ಅಣ್ಣ ಉಪೇಂದ್ರ ತ್ರಿವೇದಿ ಗುಜರಾತ್ ಚಿತ್ರೋದ್ಯಮದಲ್ಲಿ ದೊಡ್ಡ ಹೆಸರು.ಬಿಜೆಪಿ ಟಿಕೆಟ್ ಪಡೆದು, ಚುನಾವಣೆಯಲ್ಲಿ ಸ್ಪರ್ಧಿಸಿದ ಇವರಿಗೆ ಇದೀಗ 81 ವರ್ಷ.
undefined
ರಾವಣನಂಥ ದುಷ್ಟ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿದ ತ್ರಿವೇದಿ, ರಾಮ, ಲಕ್ಷ್ಮಣ ಹಾಗೂ ಸೀತಾ ಪಾತ್ರ ನಿರ್ವಹಿಸಿದ ಕಲಾವಿದರಷ್ಟೇ ಹೆಸರು ಮಾಡಿದವರು.
undefined
ರಾವಣನಂಥ ಪಾತ್ರ ಮಾಡಿದರೂ ಸಮಾಜದಲ್ಲಿ ಇವರ ನಟನೆಯ ಬಗ್ಗೆ ಸಿಕ್ಕಾಪಟ್ಟೆ ಗೌರವ ಸಿಕ್ಕಿದೆ ಎಂದು, ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
undefined
ನೈತಿಕತೆ ಹಾಗೂ ಆದರ್ಶ ಬದ್ಧನಾದ ರಾವಣನ ಬಗ್ಗೆಯೂ ಎಲ್ಲರೂ ಗೌರವ ಹೊಂದಿದ್ದರು ಎಂಬುವುದು ಇವರ ಅಭಿಪ್ರಾಯ.ಸಾಮಾನ್ಯವಾಗಿ ತಮ್ಮ ವೃತ್ತಿ ಜೀವನದಲ್ಲಿ ಸದಾ ಪಾಸಿಟಿವ್ ರೋಲ್ ಮಾಡಿದ ತ್ರಿವೇದಿ ಅವರು, ರಾವಣನದ್ದು ಮಾತ್ರ ನೆಗಟಿವ್ ರೋಲ್ ಮಾಡಿದ್ದಂತೆ.
undefined
ರಾವಣನ ಪಾತ್ರದ ನಂತರ ಇವರ ಊರಲ್ಲಿ ಎಲ್ಲರೂ ಇವರನ್ನು ಲಂಕೇಶ್ ಎಂದು ಗುರುತಿಸಲು ಆರಂಭಿಸಿದ್ದರಂತೆ. ಅಷ್ಟೇ ಅಲ್ಲ ಇವರ ಪತ್ನಿಯನ್ನೂ ಮಹಾರಾಣಿ ಮಂಡೋದರಿ ಎಂದೇ ಸಂಬೋಧಿಸಿದ್ದರಂತೆ.
undefined
ಅದಿರಲಿ, ರಾಯಾಯಣ ಧಾರಾವಾಹಿಯಲ್ಲಿ ರಾವಣನ ವದೆಯಾದಾಗ ಇವರ ಏರಿಯಾದಲ್ಲಿ ಎಲ್ಲರೂ ಶ್ರದ್ಧಾಂಜಲಿಯನ್ನೂ ಸಲ್ಲಿಸಿದ್ದರಂತೆ.
undefined
ಸಿಬಿಎಫ್‌ಸಿ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ ಇವರು.
undefined
ಅಭಿನಯದಿಂದ ನಿವೃತ್ತರಾದ ಬಳಿಕ ಹಲವು ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಸೇರಿ, ಸಾಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.
undefined
ಅತ್ಯಂತ ಮೃಧು ಹೃದಿಯ್ ಅರವಿಂದ್ ತ್ರಿವೇದಿ ಎಂದು ಒಮ್ಮೆ ರಾಮನ ಪಾತ್ರ ಮಾಡಿದ್ದ ಅರುಣ ಗೋವಿಲ್ ಸಂದರ್ಶನವೊಂದರಲ್ಲಿ ಹೇಳಿದ್ದರು.
undefined
ಮೊದಲಿಗೆ ಪ್ರಸಾರವಾದ 32 ವರ್ಷಗಳ ನಂತರ ರಾಮಾಯಣ ಇದೀಗ ಮತ್ತೆ ಪ್ರಸಾರವಾಗುತ್ತಿದ್ದು, ಜನರು ಮತ್ತೆ ದೂರದರ್ಶನದ ಮುಂದೆ ಆಸೀನರಾಗುತ್ತಿದ್ದಾರೆ. ರಾವಣನ ವಧೆಯಾಗಿದ್ದು, ಅವನನ್ನು ಇನ್ನು ಕಲಾಭಿಮಾನಿಗಳು ಮಿಸ್ ಮಾಡಿಕೊಳ್ಳುವುದು ಪಕ್ಕಾ.
undefined
ಲಕ್ಷ್ಮಣ ಪಾತ್ರ ಮಾಡಿದ ಸುನೀಲ್ ಲಹ್ರಿಯೊಂದಿಗೆ ಅರವಿಂದ್ ಇವತ್ತಿಗೂ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ.
undefined
click me!