ನಾಲ್ಕು ವರ್ಷದ ತರುವಾಯ ಉದ್ಘಾಟನೆಗೆ ಸಾಕಾನೆ ಶಿಬಿರ ಸಜ್ಜಾಗಿದೆ. ಕೆ ಗುಡಿ ಹುಲಿ ಸಂರಕ್ಷಿತಾರಣ್ಯದ ಕೋರ್ ವಲಯದಲ್ಲಿದೆ. ಈ ಹಿನ್ನಲೆ ಅದನ್ನು ಹೊರಭಾಗಕ್ಕೆ ಶಿಪ್ಟ್ ಮಾಡುವಂತೆ ಒತ್ತಾಯ ಕೇಳಿಬಂದಿತ್ತು. ಇದೀಗಾ ಚಾಮರಾಜನಗರ ಜಿಲ್ಲೆಯಲ್ಲಿ ಎರಡನೇ ಸಾಕಾನೆ ಶಿಬಿರ ಬೂದಿಪಡಗದಲ್ಲಿ ನಿರ್ಮಾಣವಾಗ್ತಿದೆ. ದುಬಾರೆ ಮಾದರಿಯಂತೆ ಆನೆ ಶಿಬಿರ ನಿರ್ಮಾಣದ ಬಳಿಕ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈಗಾಗ್ಲೇ ಕೆ ಗುಡಿಯಲ್ಲಿ ಒಂದು ಸಾಕಾನೆ ಇದ್ದು, ಇನ್ನೂ ಎರಡು ಅಥವಾ ಮೂರು ಆನೆಗಳನ್ನು ಬೇರೆ ಶಿಬಿರದಿಂದ ಕರೆತಂದು ಒಟ್ಟು ನಾಲ್ಕು ಆನೆಗಳೊಂದಿಗೆ ಸಾಕಾನೆ ಶಿಬಿರ ಆರಂಭಿಸಲು ಚಿಂತಿಸಿದೆ.