ಮಲ್ಲೇಶ್ವರದ ಬಿಜೆಪಿ(BJP) ಕಚೇರಿಯಲ್ಲಿ ಶುಕ್ರವಾರ ರಾಜ್ಯ ಎಸ್ಸಿ ಮೋರ್ಚಾ ವತಿಯಿಂದ ನಡೆದ ಸಂವಿಧಾನ(Constitution) ಗೌರವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಉದ್ದಗಲಕ್ಕೆ ಡಾ. ಅಂಬೇಡ್ಕರ್ ಅವರ ಸಂವಿಧಾನ ಸಮರ್ಪಣೆ ದಿನಾಚರಣೆ ನಡೆಸಲಾಗಿದೆ. ಅವರ ಅತ್ಯಮೂಲ್ಯ ಕಾರ್ಯವನ್ನು ನೆನಪಿಸಿಕೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಡಾ. ಅಂಬೇಡ್ಕರ್ ಅವರು ಹುಟ್ಟಿಬೆಳೆದ ಮನೆ, ನೆಲೆಸಿದ್ದ ನಿವಾಸ, ಅವರ ಕಾರ್ಯಾಲಯ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶದಲ್ಲಿ ವಾಸವಿದ್ದ ಮನೆಯನ್ನೂ ಖರೀದಿಸಿ ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೇ, ಸಮಾಧಿ ಸ್ಥಳವನ್ನೂ ಸಹ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ ಕಾರಜೋಳ