ನವ ವೃಂದಾವನ ಪೂಜೆ ವಿವಾದ: ಮಂತ್ರಾಲಯ ಮಠದ ಪರ ಹೈಕೋರ್ಟ್ ತೀರ್ಪು; ಸಂಭ್ರಮಿಸಿದ ಭಕ್ತರು!

Published : Jul 08, 2024, 06:41 PM IST

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಪೂಜೆ ವಿವಾದಕ್ಕೆ  ಸಂಬಂಧಿಸಿದಂತೆ ಪೂಜಾ ಸಲ್ಲಿಸಲು ಮಂತ್ರಾಲಯ ಮಠದ ಪರ ಬೆಂಗಳೂರು ಉಚ್ಚನ್ಯಾಯಲಯದಿಂದ ತೀರ್ಪು ನೀಡಿದ ಹಿನ್ನೆಲೆ ನವವೃಂದಾವನದಲ್ಲಿ ರಾಘವೇಂದ್ರ ಸ್ವಾಮಿ ಮಠದಿಂದ ವಿಜಯೋತ್ಸವ ಆಚರಿಸಲಾಯಿತು.

PREV
17
ನವ ವೃಂದಾವನ ಪೂಜೆ ವಿವಾದ: ಮಂತ್ರಾಲಯ ಮಠದ ಪರ ಹೈಕೋರ್ಟ್ ತೀರ್ಪು; ಸಂಭ್ರಮಿಸಿದ ಭಕ್ತರು!

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಪೂಜೆ ವಿವಾದಕ್ಕೆ  ಸಂಬಂಧಿಸಿದಂತೆ ಪೂಜಾ ಸಲ್ಲಿಸಲು ಮಂತ್ರಾಲಯ ಮಠದ ಪರ ಬೆಂಗಳೂರು ಉಚ್ಚನ್ಯಾಯಲಯದಿಂದ ತೀರ್ಪು ನೀಡಿದ ಹಿನ್ನೆಲೆ ನವವೃಂದಾವನದಲ್ಲಿ ರಾಘವೇಂದ್ರ ಸ್ವಾಮಿ ಮಠದಿಂದ ವಿಜಯೋತ್ಸವ ಆಚರಿಸಲಾಯಿತು.

27

ಕೊನೆ ಮಠದ ಪರವಾಗಿ ತೀರ್ಪು ಬಂದ ಹಿನ್ನೆಲೆ ಮಂತ್ರಾಲಯದ ಮಠದ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ನೂರಾರು ಭಕ್ತರು ಪರಸ್ಪರ ಬಣ್ಣ ಎರಚಿ ಪಟಾಕಿ ಸಿಡಿಸಿ ನೃತ್ಯ ಮಾಡಿ ಸಂಭ್ರಮಿಸಿದರು ರಾಯರ ಭಕ್ತರು ಸ್ವಾಮೀಜಿಗಳು ಬಣ್ಣ ಎರಚಿ ಸಂಭ್ರಮಿಸಿದರು ವಿಜಯೋತ್ಸವದಲ್ಲಿ ಶ್ರೀಗಳು ರಾಯರ ಭಕ್ತರು  ಕುಣಿದರು. ಕುಪ್ಪಳಿಸಿದರು.

37

ಮಂತ್ರಾಲಯ ಮಠದ ಪರ ಹೈಕೋರ್ಟ್ ತೀರ್ಪು ಬಳಿಕ ಸುಬುಧೇಂದ್ರ ತೀರ್ಥರು ನವವೃಂದಾವನಗಡ್ಡೆ ಪ್ರವೇಶ ಮಾಡಿದ್ದಾರೆ. ಇದರಿಂದ ಭಕ್ತರು ಸಂಭ್ರಮ ಇಮ್ಮಡಿಗೊಳಿಸಿದೆ. 

47

ಈ ಕ್ಷಣದಲ್ಲಿ ಅಸಂಖ್ಯಾ ಭಕ್ತರು ಆಗಮಿಸಿದ್ದರು. ಭಕ್ತರ ಸಮ್ಮುಖದಲ್ಲಿ  ಪದ್ಮನಾಭ ತೀರ್ಥರ ವೃಂದಾವನಗಳಿಗೆ ವಿಶೇಷ ಪೂಜೆ ಸಲ್ಲಿಸಿದರು ಶ್ರೀಗಳು.

57

 ಮಂತ್ರಾಲಯ ಮಠದ ಪರ ತೀರ್ಪು ಬಂದ ಹಿನ್ನೆಲೆ ನವವೃಂದಾವನಗಡ್ಡೆಯಲ್ಲಿ  ಸುಬುಧೇಂದ್ರ ತೀರ್ಥರಿಂದ ಪೂಜೆ ಪೂಜೆ ಸಲ್ಲಿಸಲಾಯಿತು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವವೃಂದಾವನಗಡ್ಡೆ. ಮೂಲರಾಮದೇವರ ಪೂಜೆ ನೆರವೇರಿಸಿದ ಶ್ರೀಗಳು.

67

ಮಂತ್ರಾಲಯದ ಮಠದ ತೀರ್ಪು ಕೇಳಿ ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದೆ ಎಂದ ಸುಬುಧೇಂದ್ರತೀರ್ಥ ಸ್ವಾಮೀಜಿ. ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ಮಠದ ಪರವಾಗಿ ಬಂದಿದೆ. ಮೂವರ ಯತಿಗಳ ಪೂಜೆಗೆ ಕೋರ್ಟ್ ಅವಕಾಶ ನೀಡಿದೆ. ಹೀಗಾಗಿ ಪೂರ್ವ ಪದ್ಮನಾಭ ತೀರ್ಥರು ಸೇರಿದಂತೆ ಮೂವರು ಯತಿವರ್ಯರಾದ ಕವೀಂದ್ರತೀರ್ಥ, ವಾಗೀಶತೀರ್ಥ, ಪದ್ಮನಾಭ ತೀರ್ಥರ ವೃಂದಾವನಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದ ಶ್ರೀಗಳು. 

77

ಕಾರ್ಯಕ್ರಮ ಮಾಡಬಾರದೆಂದು ಉತ್ತಾರಾಧಿಮಠ 1992ರಲ್ಲಿ ಧಾರವಾಡ ಹೈಕೋರ್ಟ್​ ಮೆಟ್ಟಿಲೇರಿತ್ತು. ಧಾವೆ ಹಾಕಿದ್ದರು. ಉತ್ತಾರಾಧಿಮಠ ಅರ್ಜಿಯನ್ನು ಪುರಸ್ಕರಿಸಿ ಅಷ್ಟೋತ್ತರ ಪೂಜಾ ಕಾರ್ಯಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿತ್ತು. ಇದಕ್ಕೆ ಪ್ರತಿಯಾಗಿ ರಾಯರ ಮಠದಿಂದ ಹೈಕೋರ್ಟ್‌ಗೆ ಮೇಲ್ವನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೊಡೆದು ಹಾಕಿ ರಾಯರ ಮಠದ ಪರವಾಗಿ ಹೈಕೋರ್ಟ ತೀರ್ಪು ನೀಡಿದೆ.

click me!

Recommended Stories