ಈ ಬಾರಿ ಜುಲೈ ತಿಂಗಳಿನಲ್ಲಿಯೇ ಜಲಾಶಯ ತುಂಬಿದ್ದು, ಇನ್ನೂ ಎರಡು ತಿಂಗಳ ಕಾಲ ಸಾಕಷ್ಟು ಮಳೆ ಸುರಿಯುವುದಾಗಿ ಭಾರತೀಯ ಹವಾಮಾನ ಇಲಾಖೆ ಹೇಳಿಕೆಯಂತೆ ನಿರೀಕ್ಷೆಯೂ ಇದೆ. ಇದರಿಂದ ಗುಡ್ಡೆಹೊಸೂರು, ಬೆಟ್ಟಗೇರಿ, ಬೆಂಡೆಬೆಟ್ಟ, ರಂಗಸಮುದ್ರ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಭತ್ತ ಬೆಳೆಯುವ ರೈತರು ಈ ಬಾರಿಯಾದರೂ ಭತ್ತ ಬೆಳೆಯಬಹುದು ಎನ್ನುವ ಸಂತಸದಲ್ಲಿ ಇದ್ದಾರೆ. ಇದೊಂದೇ ಅಲ್ಲ, ಜಿಲ್ಲೆಯ ಅಬ್ಬಿಫಾಲ್ಸ್, ಕೋಟೆ ಅಬ್ಬಿಫಾಲ್ಸ್, ಚೇಲಾವರ ಫಾಲ್ಸ್, ಇರ್ಫು ಜಲಪಾತ ಹಾಗೂ ಮಲ್ಲಹಳ್ಳಿ ಜಲಪಾತಗಳು ಸೇರಿದಂತೆ ಎಲ್ಲಾ ಜಲಪಾತಗಳು, ನದಿ ತೊರೆಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಇಡೀ ಕೊಡಗು ಜಿಲ್ಲೆ ಕೂಲ್ ಕೂಲ್ ಆಗಿ ಎಲ್ಲಾ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.