ಮೂವರ ಮೇಲೆ ದಾಳಿ ನಡೆಸಿದ್ದ ಚಿರತೆ; ಕಂಡ ಕ್ಷಣವೇ ಅಟ್ಟಾಡಿಸಿ ಕೊಚ್ಚಿ ಕೊಂದ ಗ್ರಾಮಸ್ಥರು!

First Published Jul 7, 2024, 6:06 PM IST

ಜಿಲ್ಲೆಯ ದೇವದುರ್ಗ ತಾಲೂಕಿನ ಕಮದಾಳ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಬೆಟ್ಟದಲ್ಲಿ ಚಿರತೆಯನ್ನ ಪತ್ತೆ ಹಚ್ಚಿ ಹೊಡೆದು ಕೊಂದ ಘಟನೆ ನಡೆದಿದೆ.
 

ಗ್ರಾಮ(Kamdal village)ದಲ್ಲಿ ಚಿರತೆ(leopard) ಪ್ರತ್ಯಕ್ಷವಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ಅರಣ್ಯ ಇಲಾಖೆ(devadurga forest department) ಸಿಬ್ಬಂದಿ, ಪೊಲೀಸರು. ಆದರೆ ಬೆಟ್ಟದಲ್ಲಿ ಚಿರತೆ ಕಾಣಿಸಿರುವ ವಿಚಾರ ತಿಳಿದು ಕಮದಾಳ ಗ್ರಾಮಸ್ಥರು ನೆರೆಹೊರೆಯ ಸಾವಿರಾರು ಜನರು ಆಗಮಿಸಿದ್ದಾರೆ. ಬೆಟ್ಟದ ಮೇಲೆ ತಂಡೋಪತಂಡವಾಗಿ ನುಗ್ಗಿ ಚಿರತೆಗಾಗಿ ಹುಡುಕಾಟ ನಡೆಸಿದ್ದ ಜನರು. 
 

ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ ಚಿರತೆ ದಾಳಿ ಮಾಡಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ಮೂವರು ರೈತರು. ಅರಣ್ಯ ಇಲಾಖೆ ಸಿಬ್ಬಂದಿಗೆ ಮೊದಲೇ ತಿಳಿಸಿದರೂ ಪ್ರಯೋಜನವಾಗಿ ಎಂದು ತಾವೇ ಚಿರತೆ ಹಿಡಿಯಲು ಮುಂದಾಗಿದ್ದ ಗ್ರಾಮಸ್ಥರು. ಚಿರತೆ ಕಾಣಿಸುತ್ತಿದ್ದಂತೆ ರೊಚ್ಚಿಗೆದ್ದ ನೂರಾರು ಜನರು ಕಟ್ಟಿಗೆ, ಕಲ್ಲು ಬಡಿಗೆಗಳೊಂದಿಗೆ ಏಕಕಾಲಕ್ಕೆ ಚಿರತೆ ಮೇಲೆ ಅಟ್ಯಾಕ್ ಮಾಡಿ ಕೊಂದ ಗ್ರಾಮಸ್ಥರು. ಅರಣ್ಯ ಅಧಿಕಾರಿಗಳು ಇದ್ದರೂ ಚಿರತೆ ರಕ್ಷಣೆ ಮಾಡಲು ಆಗಲಿಲ್ಲ. ಅರಣ್ಯ ಸಿಬ್ಬಂದಿ, ಪೊಲೀಸರ ಎದುರಲ್ಲೇ ರೊಚ್ಚಿಗೆದ್ದ ನೂರಾರು ಜನರು ಚಿರತೆಯನ್ನ ಹೊಡೆದು ಕೊಂದಿದ್ದಾರೆ.

Latest Videos


ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು. ಲಘು ಲಾಠಿಪ್ರಹಾರ ನಡೆಸಿದರು ಜನರು ಕದಲಿಲ್ಲ. ಚಿರತೆ ಕೊಂದ ಬಳಿಕ ಪಶು ಅಂಬುಲೆನ್ಸ್‌ನಲ್ಲಿ ಹಾಕಿದ ಗ್ರಾಮಸ್ಥರು.

ಚಿರತೆ ಹಿಡಿಯುವಲ್ಲಿ ಅಸಹಾಯಕರಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು, ಚಿರತೆ ಕಾಣಿಸಿರುವ ಬಗ್ಗೆ ಅರಣ್ಯ ಇಲಾಖೆಗೆ ಮುಂಚಿತವಾಗಿಯೇ ತಿಳಿಸಿದ್ದರು ಅರಣ್ಯ್ ಇಲಾಖೆ ನಿರ್ಲಕ್ಷ್ಯ ಮಾಡಿದ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಗ್ರಾಮಸ್ಥರೇ ಚಿರತೆ ಮೇಲೆ ಅಟ್ಯಾಕ್ ಮಾಡಿ ಕೊಂದಿದ್ದಾರೆ.
 

click me!