ರಾಜ್ಯದಲ್ಲಿ ಕೊರೋನಾ ಕಂಟ್ರೋಲ್: ಈ ಯಶಸ್ಸು ಹಿಂದಿನ ರೂವಾರಿ ಮುನೀಶ್ ಮೌದ್ಗಿಲ್...!

First Published Jun 20, 2020, 6:28 PM IST

ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಇದಕ್ಕೆ ಇಡೀ ಪ್ರಪಂಚವೇ ನಡುಗಿ ಹೋಗಿದೆ. ಅದರಲ್ಲೂ ದೇಶದಲ್ಲಿ ಅದರ ಆರ್ಭಟ ಜೋರಾಗಿದೆ. ಆದ್ರೆ, ದೇಶದ ಕೆಲ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಕರ್ನಾಟಕ ಸರ್ಕಾರ ಕೊರೋನಾ ಕಂಟ್ರೋಲ್ ಮಾಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಹೊಗಳಿದೆ. ಎಲ್ಲಾ ರಾಜ್ಯಗಳಿಗೂ ಕರ್ನಾಟಕದ ಈ ವಿಚಾರದಲ್ಲಿ ಮಾದರಿ ಎಂದಿದೆ. ಇದರ ಶ್ರೇಯಸ್ಸು  ಐಎಎಸ್ ಅಧಿಕಾರಿ, ವಾರ್ ರೂಂ ಮುಖ್ಯಸ್ಥ ಮುನೀಶ್ ಮೌದ್ಗಿಲ್ ಗೆ ಸೇರಬೇಕು.

ರಾಜ್ಯದಲ್ಲಿನ ಕೋವಿಡ್ ರೋಗಿಗಳ ಟ್ರೇಸಿಂಗ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಹೊಗಳಿದೆ.
undefined
ಎಲ್ಲಾ ರಾಜ್ಯಗಳಿಗೂ ಕರ್ನಾಟಕದ ಈ ವಿಚಾರದಲ್ಲಿ ಮಾದರಿ ಎಂದಿದ್ದು, ಇದರ ಶ್ರೇಯಸ್ಸು ವಾರ್ ರೂಂ ಮುಖ್ಯಸ್ಥ ಮುನೀಶ್ ಮೌದ್ಗಿಲ್ ಗೆ ಸೇರಬೇಕು.
undefined
ಹಬ್ಬ, ಶುಭಕಾರ್ಯ, ರಜೆ, ವಾರಾಂತ್ಯ ಯಾವುದನ್ನೂ ಲೆಕ್ಕಿಸದೆ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ವಾರ್ ರೂಂ ಮತ್ತು ಅದರಲ್ಲಿ ಬಳಕೆಯಾಗುವ ತಂತ್ರಜ್ಞಾನಗಳಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ.
undefined
ಟ್ರೇಸಿಂಗ್ ಅಪ್ಲಿಕೇಶನ್‌ಗಾಗಿ ಫ್ಲೋ ಚಾರ್ಟ್, ವಿನ್ಯಾಸ, ಕಾರ್ಯವಿಧಾನಗಳನ್ನು ಅವರೇ ಡಿಸೈನ್ ಮಾಡಿದ್ದಾರೆ.
undefined
ಹೊಸ ತಂತ್ರಜ್ಞಾನಗಳ ಬಗ್ಗೆ ಮುನೀಶ್ ಇರುವ ತಿಳುವಳಿಕೆ ಅವರ ಈ ಎಲ್ಲಾ ಸಾಧನೆಗೆ ಬಹಳ ಸಹಾಯ ಮಾಡಿದೆ.
undefined
ಈ ರೀತಿಯ ತುರ್ತಿನ ಸಮಯಗಳಲ್ಲಿ, ಹೊರಗಿನ ಏಜೆನ್ಸಿಯನ್ನು ಅವಲಂಬಿಸಲು ಸಾಧ್ಯವಿಲ್ಲ, ಡಿಜಿಟಲ್ ಟ್ರೇಸಿಂಗ್ ಮತ್ತು ಟ್ರ್ಯಾಕಿಂಗ್ ಜವಾಬ್ದಾರಿಯನ್ನು ಯಾವ್ದೇ ಐಟಿ ಕಂಪೆನಿಗೆ ನೀಡಿಲ್ಲ. ಬದಲಿಗೆ ಮುನೀಶ್ ಮೌದ್ಗಿಲ್ ನೇತೃತ್ವದ ತಂಡ ಇದನ್ನು ಅಭಿವೃದ್ಧಿಪಡಿಸಿದೆ.
undefined
ಐಐಟಿ ಡಿಗ್ರಿ ಮತ್ತು ಟೆಕ್ ಹಿನ್ನೆಲೆ ಹೊಂದಿರುವ ಅನೇಕ ಐಎಎಸ್ ಅಧಿಕಾರಿಗಳಿದ್ದಾರೆ. ಆದ್ರೆ ತಂತ್ರಜ್ಞಾನದ ಜ್ಞಾನವನ್ನು ಆಗಾಗ ನವೀಕರಿಸಬೇಕು. ಈ ಹೊಸ ತಂತ್ರಜ್ಞಾನಗಳ ಬಗ್ಗೆ ಮುನೀಶ್ ಇರುವ ತಿಳುವಳಿಕೆ ಅವರ ಈ ಎಲ್ಲಾ ಸಾಧನೆಗೆ ಬಹಳ ಸಹಾಯ ಮಾಡಿದೆ.
undefined
ಇನ್ನು ಮೌದ್ಗಿಲ್ ಅವರು ಭೂ ಅಕ್ರಮ ತಡೆಗೆ ದಿಶಾಂಕ್ ಎನ್ನುವ App ಕೂಡ ತಂದು ರೈತರಿಗೆ ನೆರವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
undefined
click me!