ಆನ್ಲೈನ್ ಬುಕ್ಕಿಂಗ್. ನಿತ್ಯ ಇಂತಿಷ್ಟೆ ಪ್ರವಾಸಿಗರಿಗೆ ಮಾತ್ರ ಅವಕಾಶ. ಜೊತೆಗೆ ಕಾಲಮಿತಿ ಕೂಡ. ಯಾವುದೇ ಪ್ಲಾಸ್ಟಿಕ್ಗೆ ಅವಕಾಶ ನೀಡಬಾರದು. ಸಿಬ್ಬಂದಿಗಳನ್ನ ನಿಯೋಜಿಸೋದ್ರ ಜೊತೆ ಚೆಕ್ ಪೋಸ್ಟ್ ಕೂಡ ನಿರ್ಮಿಸಬೇಕು. ಆಗ ಮಾತ್ರ ಈ ಸೂಕ್ಷ್ಮ ಹಾಗೂ ಸುಂದರ ಪ್ರದೇಶದ ಉಳಿವಿಗೆ ಸಾಧ್ಯ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ಸೂಕ್ಷ್ಮ ಪ್ರದೇಶವೂ ಅವನತಿಯ ಹಾದಿ ಹಿಡಿಯುತ್ತೆ ಅನ್ನೋದು ಪರಿಸರಪ್ರೇಮಿಗಳ ಆತಂಕ.
ಒಟ್ಟಾರೆ, ಪ್ರವಾಸಿಗರಿಗೆ ಎಲ್ಲಿಂದಲೋ ಬಂದು ಇಲ್ಲಿನ ಪ್ರಕೃತಿಯ ನಡುವೇ ಖುಷಿ-ಖುಷಿಯ ಚಾರಣ ಮನೋರಂಜನೆ. ಆದ್ರೆ, ಸೂಕ್ಷ್ಮ ಪ್ರದೇಶಕ್ಕೆ ಹಾನಿಯಾಗ್ತಿದೆ ಅನ್ನೋದು ಪರಿಸರಪ್ರೇಮಿಗಳ ಆತಂಕ. ಅದೇನೆ ಇದ್ರು, ಈ ಪ್ರದೇಶ ವನ್ಯಜೀವಿಗಳ ತಾಣ. ಅಪರೂಪದ ಶೋಲಾರಣ್ಯ. ಇದರ ರಕ್ಷಣೇ ಕೇವಲ ಪರಿಸರವಾದಿಗಳದ್ದಷ್ಟೆ ಅಲ್ಲ. ಪ್ರತಿಯೊಬ್ಬರ ಕರ್ತವ್ಯ. ಈ ಸುಂದರ ಹಾಗೂ ಸ್ವಚ್ಛಂದದ ತಾಣ ಕೇವಲ ಮೋಜು-ಮಸ್ತಿಗೆ ಮಾತ್ರವಲ್ಲದೇ ಉಳಿಸೋದು ಎಲ್ಲರ ಆದ್ಯ ಕರ್ತವ್ಯ. ಇರೋದನ್ನ ಕಳೆದುಕೊಳ್ಳುವುದು ಸುಲಭ. ಆದ್ರೆ, ಮತ್ತೆ ನಿರ್ಮಾನ ಅಸಾಧ್ಯ ಅನ್ನೋದು ಪರಿಸರವಾದಿಗಳ ಮಾತು.
- ವರದಿ : ಆಲ್ದೂರು ಕಿರಣ್