ದುರ್ದೈವ ಅಂದ್ರೆ ಇದೇ ಇರಬೇಕು; ಪಕ್ಕದಲ್ಲೇ ನದಿ ಹರಿತಿದ್ರೂ ಈ ಗ್ರಾಮದ ಜನರಿಗೆ ಕುಡಿಯೋಕೆ ನೀರಿಲ್ಲ!

Published : Dec 17, 2024, 10:28 PM IST

 ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಾಡಂಚಿನ ಗ್ರಾಮದ ನೋವಿನ ಸ್ಟೋರಿ ಇದು. ರಾಜ್ಯಕ್ಕಲ್ಲ ದೇಶಕ್ಕೆ ಗೊತ್ತಿರೋ ಭದ್ರಾ ನದಿಯ ತಟದೂರು. ಆದ್ರೆ, ದೀಪದ ಕೆಳಗೆ ಕತ್ತಲು ಎಂಬಂತೆ ಕುಡಿಯೋ ನೀರಿಗೆ ಹಾಹಾಕಾರ. ಗ್ರಾಮದಲ್ಲಿ ಒಂದಲ್ಲ-ಎರಡಲ್ಲ ಮೂರು ಟ್ಯಾಂಕರ್ಗಳಿವೆ.ಆದ್ರೆ ನೀರು ಬರಲ್ಲ, ನೀರು ಇರಲ್ಲ , ಇಲ್ಲಿನ ಜನ ಇಡೀ ದಿನ ದುಡಿಬೇಕು. ಸಂಜೆ ನೀರು ಹೊರ್ಬೇಕು. ಕುಡಿಯೋಕೆ ನೀರೇ ಕೊಡ್ಲಿಲ್ದೋರು ರಸ್ತೆ ಮಾಡ್ಕೊಡೋದು ಕನಸಿನ ಮಾತಾಗಿದೆ.ಇದರಿಂದ ಬೇಸತ್ತ ಗ್ರಾಮಸ್ಥರು ತಮ್ಮೂರಿಗೆ ತಾವೇ ರಸ್ತೆ-ಚರಂಡಿ ನಿರ್ಮಿಸಿಕೊಂಡಿದ್ದಾರೆ.   

PREV
14
ದುರ್ದೈವ ಅಂದ್ರೆ ಇದೇ ಇರಬೇಕು; ಪಕ್ಕದಲ್ಲೇ ನದಿ ಹರಿತಿದ್ರೂ ಈ ಗ್ರಾಮದ ಜನರಿಗೆ ಕುಡಿಯೋಕೆ ನೀರಿಲ್ಲ!
ಸರ್ಕಾರ-ಅಧಿಕಾರಿಗಳ ವಿರುದ್ಧ ಹಿಡಿಶಾಪ:

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಿಂದ ಕೂಗಳತೆ ದೂರದಲ್ಲಿರೋ ಅಂಬಾತೀರ್ಥ ಗ್ರಾಮದಲ್ಲಿ ಜನರು ಇಂದಿಗೂ ಮೂಲಭೂತ ಸೌಲಭ್ಯಗಳಿಲ್ಲದೇ ಜನರು ಪರದಾಟ ನಡೆಸುತ್ತಿದ್ದಾರೆ..ಇಲ್ಲಿ ಸುಮಾರು 25 ಮನೆಗಳಿವೆ. ಅಂಬಾತೀರ್ಥ ಪ್ರವಾಸಿ ತಾಣ. ನಿತ್ಯಾ ನೂರಾರು ಜನ ಬಂದೋಗೋ ಜಾಗ. ಕಳಸ-ಹೊರನಾಡಿಗೆ ಬಂದ ಬಹುತೇಕರು ಇಲ್ಲಿಗೆ ಬರ್ದೆ ಹೋಗಲ್ಲ. ಹಾಗಾಗಿ, ವಾಹನಗಳು ಓಡಾಡಿ-ಓಡಾಡಿ ರಸ್ತೆ ಹೇಳ ಹೆಸರಿಲ್ಲದಂತಾಗಿದೆ. ಹಾಗಾಗಿ, ಹಳ್ಳಿಗರೇ ಹಣ ಹಾಕಿಕೊಂಡು ಕೆಲಸ ಬಿಟ್ಟು ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿಕೊಂಡು ರಸ್ತೆ ಮಾಡಿಕೊಂಡಿದ್ದಾರೆ. ಇನ್ನಾರು ತಿಂಗಳು ನೋ ಪ್ರಾಬ್ಲಂ. ಆದ್ರೆ, ದಾಖಲೆ ಮಳೆ ಬೀಳೋ ಕಳಸದಲ್ಲಿ ಮಳೆಗಾಲ ಆರಂಭವಾದ್ರೆ ಜಸ್ಟ್ ಟು ಡೇಸ್ ಏನೂ ಉಳಿಯಲ್ಲ. ಮತ್ತದೇ ಗುಂಡಿ-ಗೊಟರು ರಸ್ತೆ. ಹಾಗಾಗಿ, ಇಲ್ಲಿನ ಸರ್ಕಾರ-ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ. 
 

24
ಕುಡಿಯುವ ನೀರಿಗಾಗಿ ಹರಸಾಹಸ

ಇಲ್ಲೇ ಹುಟ್ಟಿ. ಇಲ್ಲೇ ಬೆಳ್ದೋರು. ಎಲ್ಲರ ಬಳಿಯೂ ಆಧಾರ್, ಪಾನ್ ಕಾರ್ಡ್, ವೋಟರ್ ಐಡಿ ಎಲ್ಲಾ ಇದೆ. ಓಟು ಹಾಕ್ತಾರೆ. ಅದೇ ರೀತಿ ನಿತ್ಯ ಕೂಲಿ ಮಾಡಿ ಬಂದು ನೀರು ಹೊರ್ತಾರೆ. ಹಳ್ಳೀಲಿ ಒಂದಲ್ಲ-ಎರಡಲ್ಲ ಮೂರು ಟ್ಯಾಂಕ್ಗಳಿವೆ. ಆದ್ರೆ, ನೀರು ಮಾತ್ರ ಇಲ್ಲ. ಹಾಗಾಗಿ, ಇಲ್ಲಿನ ಜನ ನಿತ್ಯ ಕೆಲಸ ಮಾಡ್ಕೊಂಡು ಬಂದು ಇಂದಿಗೂ ಸಂಜೆ ನೀರು ಹೊತ್ಕೊಂಡು ಬರ್ತಿದ್ದಾರೆ. ಈ ಬಗ್ಗೆ ಸ್ಥಳಿಯರು ಹತ್ತಾರು ಪಂಚಾಯಿತಿ, ಜನನಾಯಕರು, ಅಧಿಕಾರಿಗಳಿಗೆ ನೀರು-ರಸ್ತೆಗಾಗಿ ಮನವಿ ಮಾಡಿದ್ದಾರೆ. ಆದ್ರೆ, ನೋ ಯೂಸ್. ನೋಡ್ತೀವಿ. ಮಾಡ್ತೀವಿ ಅನೋ ಅಧಿಕಾರಿಗಳು ಮಾಡ್ತಾನೆ ಇದ್ದಾರೆ. 

34
ಕುಡಿಯೋಕೆ ಹನಿ ನೀರಿಗೂ ಪರದಾಟ

ಎಲೆಕ್ಷನ್ ಟೈಮಲ್ಲಿ ಬರೋ ಜನನಾಯಕರು ಹಳ್ಳಿಗರ ಕಷ್ಟ ಕೇಳಿ ಬಂದ ದಾರಿಗೆ ಸುಂಕ ಇಲ್ಲ ಅಂದೋರೆ ಹೆಚ್ಚು. ಹಾಗಾಗಿ, ಇಲ್ಲಿನ ಕೂಲಿ ಕಾರ್ಮಿಕರು ಜನನಾಯಕರು, ಅಧಿಕಾರಿಗಳ ವಿರುದ್ಧ ಹೋರಾಡೋಕೆ ಶಕ್ತಿ ಇಲ್ದೆ ತಮ್ಮೂರಿನ ಕೆಲಸವನ್ನ ತಾವೇ ಮಾಡ್ಕೊಂಡು ದಿನದೂಡುತ್ತಿದ್ದಾರೆ ಒಟ್ಟಾರೆ, ನಾಡಂಚಿನ ಕುಗ್ರಾಮದ ಜನಕ್ಕೆ ಕುಡಿಯೋಕೆ ನೀರು, ಓಡಾಡೋದಕ್ಕೆ ರಸ್ತೆಯೇ ಇಲ್ಲ ಅಂದ್ರೆ ಈ ಗ್ಯಾರಂಟಿ ಸರ್ಕಾರ ಮತ್ತೈದು ಗ್ಯಾರಂಟಿ ಕೊಟ್ರು ಜನರ ಬದುಕು ಬದಲಿಸಲು ಸಾಧ್ಯವಿಲ್ಲ. 

44

ಕಾಫಿನಾಡು ಅಂದ್ರೆನೇ ಟೂರಿಸಂ. ಎಕೋ ಟೂರಿಸಂ. ಆದ್ರೆ, ಆ ಟೂರಿಸಂ ಜಿಲ್ಲೆಯಲ್ಲಿ ಹಳ್ಳಿಗರ ಜೊತೆ ಪ್ರವಾಸಿಗರಿಗೂ ಓಡಾಡೋದಕ್ಕೆ ರಸ್ತೆ ಇಲ್ಲ ಅಂದ್ರೆ ಟೂರಿಸಂ ಅಭಿವೃದ್ಧಿಯ ಬಗ್ಗೆಯೇ ಸಂದೇಹಗಳು ಮೂಡುತ್ತಿವೆ. ವೇದಿಕೆ ಮೇಲೆ ಕರೆಂಟ್, ಬಸ್, ದುಡ್ಡು ಕೊಟ್ವಿ ಅಂತ ಹೇಳೋ ಸರ್ಕಾರ ರಾಜ್ಯದಲ್ಲಿ ಎಲ್ಲೂ ಜನ ನೀರು-ರಸ್ತೆ ಇಲ್ದೆ ಇಲ್ಲ ಅಂತ ಮತ್ತದೇ ವೇದಿಕೆ ಮೇಲೆ ಘಂಟಾಘೋಷವಾಗಿ ಹೇಳುವಂತಾದ್ರೆ ಸಾಕು.

ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 
 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories