ಬೆಂಗಳೂರು ಬಂದ್; ಯಶವಂತಪುರ, ಮೆಜೆಸ್ಟಿಕ್ ಸೇರಿದಂತೆ ಎಲ್ಲೆಡೆ ಟ್ರಾಫಿಕ್ ಜಾಮ್, ವಾಹನ ಸವಾರರು ಪರದಾಟ!

Published : Sep 11, 2023, 10:54 AM ISTUpdated : Sep 11, 2023, 11:12 AM IST

 ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಆಟೋ, ಟ್ಯಾಕ್ಸಿ, ಕ್ಯಾಬ್ ಸೇರಿದಂತೆ ಎಲ್ಲ ಖಾಸಗಿ ವಾಹನಗಳು ರಸ್ತೆಗಿಳಿಯದೆ ಪ್ರತಿಭಟನೆ ಸಾಥ್ ಕೊಟ್ಟಿರುವುದರಿಂದ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್‌ ಜಾಮ್ ಜಾಮ್! 

PREV
14
ಬೆಂಗಳೂರು ಬಂದ್; ಯಶವಂತಪುರ, ಮೆಜೆಸ್ಟಿಕ್ ಸೇರಿದಂತೆ ಎಲ್ಲೆಡೆ ಟ್ರಾಫಿಕ್ ಜಾಮ್, ವಾಹನ ಸವಾರರು ಪರದಾಟ!

 ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಆಟೋ, ಟ್ಯಾಕ್ಸಿ, ಕ್ಯಾಬ್ ಸೇರಿದಂತೆ ಎಲ್ಲ ಖಾಸಗಿ ವಾಹನಗಳು ರಸ್ತೆಗಿಳಿಯದೆ ಪ್ರತಿಭಟನೆ ಸಾಥ್ ಕೊಟ್ಟಿರುವುದರಿಂದ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್‌ ಜಾಮ್ ಜಾಮ್! 

24

ವಾಹನ ಸವಾರರು ಹೈರಾಣು, ಟ್ರಾಫಿಕ್ ಹೆದರಿ ಮೆಟ್ರೋ ಪ್ರಯಾಣ

ಯಶವಂತಪುರ ಫ್ಲೈ ಓವರ್ ಮೇಲೆ ಫುಲ್ ಟ್ರಾಫಿಕ್ ಜಾಮ್ ತಾಸಿನಿಂದ ನಿಂತಲ್ಲೇ ನಿಂತಿರೋ ವಾಹನಗಳು. ಮುಂದೆ ಸಾಗಲಾಗದೆ, ಹಿಂದಕ್ಕೂ ಚಲಿಸಲಾಗದೆ ಟ್ರಾಫಿಕ್ ಜಾಮ್  ಸಿಲುಕಿ ವಾಹನ ಸವಾರರ ಪರದಾಟ. ಯಶವಂತಪುರ, ಸರ್ಕಲ್ ಮಾರಮ್ಮ ಟೆಂಪಲ್ , ಮಲ್ಲೇಶ್ವರಂ , ಸ್ಯಾಂಕಿಟ್ಯಾಂಕಿ, ಕಾವೇರಿ ಜಂಕ್ಷನ್ ಸೇರಿದಂತೆ ಬಹುತೇಕ ಎಲ್ಲ ಕಡೆ ಟ್ರಾಫಿಕ್ ಜಾಮ್.

ಇದಿಗ ಡಾ. ರಾಜಕುಮಾರ್  ರಸ್ತೆಯಲ್ಲಿ ಸಾಗುತ್ತಿರುವ ಆಟೋ ರ್ಯಾಲಿ. ಡಾ. ರಾಜ್ ಕುಮಾರ್ ರಸ್ತೆಯ ಟ್ರಾಫಿಕ್ ಜಾಮ್ ಗೆ ಹೆದರಿ ಯಶವಂತಪುರ ಕಡೆ ಯೂಟರ್ನ್ ತಕೊಂಡ ಖಾಸಗಿ ವಾಹನಗಳು.

34

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಓಲಾ, ಊಬರ್ ಕ್ಯಾಬ್ ಸಂಘಟನೆ ಬಂದ್ ಗೆ ಬೆಂಬಲ ನೂರಾರು ಕ್ಯಾಬ್ ಗಳನ್ನ ನಿಲ್ಲಿಸಿ ಬಂದ್ ಗೆ ಬೆಂಬಲ

ಯಾರೋ ಒಂದೆರಡು ಕ್ಯಾಬ್ ರಸ್ತೆಗಿಳಿಸಿದ್ದಾರೆ. ದಯಮಾಡಿ ಎಲ್ಲಾರು ಪ್ರತಿಭಟನೆಗೆ ಕೈಜೋಡಿಸಿ ಎಂದು ‌ಮನವಿ ಮಾಡಿಕೊಂಡ ಕ್ಯಾಬ್ ಚಾಲಕರು. ನಾವು ಸರ್ಕಾರಕ್ಕೆ ಎಲ್ಲೋ ಬೋರ್ಡ್ ಟ್ಯಾಕ್ಸಿಗಳು ಟ್ಯಾಕ್ಸ್ ಕಟ್ಟುತ್ತೇವೆ ರಾಪಿಡ್ ಬೈಕ್, ಟ್ಯಾಕ್ಸಿ ಬ್ಯಾನ್ ಮಾಡಬೇಕು ಅನ್ನೋದು ನಮ್ಮ ಪ್ರಮುಖ ಬೇಡಿಕೆ ಎಂದ ಚಾಲಕರು. 

44

ಮೆರವಣಿಗೆ ಉದ್ದಕ್ಕೂ ಪೊಲೀಸ್ ಬಿಗಿ ಭದ್ರತೆ:

ಖಾಸಗಿ ಸಾರಿಗೆ ಒಕ್ಕೂಟ ಬಂದ್ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಪೊಲೀಸರು ಮುಂಚಿತವಾಗಿ ತಯಾರಿ. ಮೆರವಣಿಯುದ್ದಕ್ಕೂ ಪೊಲೀಸರ ಸರ್ಪಗಾವಲು. ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನೆ ಹಿನ್ನೆಲೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ನೇತೃತ್ವದಲ್ಲಿ ಭದ್ರತೆ.  684 ಪೊಲೀಸರ ನಿಯೋಜನೆ. 8 ಎಸಿಪಿ, 27 ಇನ್ಸ್ ಪೆಕ್ಟರ್ ಗಳು, 72 ಪಿಎಸ್ ಐ, 14 ಮಹಿಳಾ ಪಿಎಸ್ಐ ಸೇರಿದಂತೆ 684  ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಒಟ್ಟಿಗೆ ರಾಲಿ ಮಾಡಲು ಅವಕಾಶ ಇಲ್ಲ. ಇಲ್ಲಿಂದ ಫ್ರೀಡಂ ಪಾರ್ಕ್ ವರೆಗೆ ಪೊಲೀಸ್ ವಾಹನದಲ್ಲಿ ಕಳಿಸಲು ವ್ಯವಸ್ಥೆ. ಇಲ್ಲ ನಾವು ರ್ಯಾಲಿ ಮಾಡಬೇಕು ಅಂತಂದ್ರೆ 20 ಜನರಂತೆ ಒಂದು ತಂಡ ಮಾಡಿ ಕಳಿಸಲು ತಯಾರಿ. ಯಾವುದೇ ಕಾರಣಕ್ಕೂ ದೊಡ್ಡ ಮಟ್ಟದ ರ್ಯಾಲಿ ಮಾಡಲು ಅವಕಾಶ ಮಾಡಿಕೊಡಲ್ಲ ಎನ್ನುತ್ತಿರುವ ಪೋಲೀಸರು 

ಪ್ರತಿಭಟನೆಗೆ ಸಿದ್ಧವಾಗಿರುವ ಬೃಹತ್ ವೇದಿಕೆ:

ಎಲ್ಲೆಡೆಯಿಂದ ರಾಲಿ ಮೂಲಕ ಫ್ರೀಡಂ ಪಾರ್ಕ್‌ನತ್ತ ಹರಿದು ಬರುತ್ತಿರುವ ಸಂಘಟನೆಗಳು. ವಿವಿಧ ಖಾಸಗಿ ವಾಹನ ಚಾಲಕರು. ಪ್ರೀಡಂ ಪಾರ್ಕ್ ನಲ್ಲಿ ಜಮಾವಣೆ. ಸಾವಿರಾರು ‌ಸಂಖ್ಯೆಯಲ್ಲಿ ಚಾಲಕರು ಸೇರುವ ಹಿನ್ನಲೆ ಪೊಲೀಸ್ ಬಿಗಿ ಬಂದೋಬಸ್ಸ್. ಪೋಲೀಸರ ಮಾತಿನಂತೆ 20 ಜನ ಹೋಗಲು ಸಿದ್ದತೆ. ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಹೊರಡುತ್ತಿರುವ ಚಾಲಕರು ಮಾಲೀಕರು. ಒಂದು ತಂಡ ಫ್ರೀಡಂಪಾರ್ಕ್ ತಲುಪಿದ ನಂತ್ರ ಇನ್ನೊಂದು ತಂಡವನ್ನು ಕಳಿಸುತ್ತಿರುವ ಪೊಲೀಸರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories