Vaibhav Sooryavanshi: ವೈಭವ್ ಎಂಟ್ರಿ ಕನ್ಫರ್ಮ್? ಆದರೆ ಭಾರತ ತಂಡಕ್ಕೆ ಹೊಸ ಬಿಕ್ಕಟ್ಟು; ಬೇಬಿ ಬಾಸ್‌ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತಾ?

Published : Jul 04, 2026, 03:53 PM IST

Vaibhav Suryavanshi Selection: ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡುವುದು ಖಚಿತ ಎನಿಸಿದರು. ಆದರೆ ಭಾರತ ತಂಡಕ್ಕೆ ಮತ್ತೊಂದು ತಲೆನೋವು ಪ್ರಾರಂಭವಾಗಿದೆ. ಇದು ಭಾರತ ತಂಡಕ್ಕೆ ಮತ್ತು ವೈಭವ್‌ ಚೊಚ್ಚಲ ಪಂದ್ಯಕ್ಕೆ ದೊಡ್ಡ ಸವಾಲಾಗಿದೆ. 

PREV
15
ವೈಭವ್ ಎಂಟ್ರಿ ಕನ್ಫರ್ಮ್!

ಇಂಗ್ಲೆಂಡ್‌ ವಿರುದ್ಧದ 2ನೇ ಪಂದ್ಯದಲ್ಲಿ ವೈಭವ್ ಎಂಟ್ರಿ ಕನ್ಫರ್ಮ್ ಎಂದು ಅವರ ಪೋಸ್ಟ್‌ ಸಂಚಲನ ಮೂಡಿಸಿದೆ. ಈಗಾಗಲೇ ಮೊದಲ ಪಂದ್ಯ ಮಳೆಯಿಂದ ರದ್ದಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿ ಎರಡನೇ ಪಂದ್ಯ ಶನಿವಾರ ಸಂಜೆ 7ಗಂಟೆಗೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಪಾದಾರ್ಪಣೆ ಮಾಡುವ ಸಾಧ್ಯತೆ ಇರುವುದರಿಂದ ಎಲ್ಲರ ಕಣ್ಣುಗಳು ಈ ಪಂದ್ಯದ ಮೇಲೆ ಇವೆ. ಆದರೆ ಭಾರತ ತಂಡಕ್ಕೆ ಮತ್ತೊಂದು ತಲೆನೋವು ಎದುರಾಗಿದೆ. ಅದೇನು ಎಂದು ನೋಡೋಣ ಬನ್ನಿ.

25
ಟೀಂ ಇಂಡಿಯಾ ಮುಂದಿರುವ ಸವಾಲೇನು?

ಇಲ್ಲಿಯವರೆಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ 31 ಟಿ20 ಅಂತರರಾಷ್ಟ್ರೀಯ ಪಂದ್ಯಗಳು ನಡೆದಿವೆ. ಇವುಗಳಲ್ಲಿ ಭಾರತ 18 ಮತ್ತು ಇಂಗ್ಲೆಂಡ್ 12 ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಪಂದ್ಯ ಡ್ರಾ ಆಗಿಯೇ ಉಳಿದಿದೆ. ಇಂಗ್ಲೆಂಡ್‌ನಲ್ಲಿ, ಎರಡೂ ತಂಡಗಳ ನಡುವೆ 10 ಪಂದ್ಯಗಳು ನಡೆದಿವೆ. ಇಲ್ಲಿ, ಇಂಗ್ಲೆಂಡ್ 5 ಪಂದ್ಯಗಳನ್ನು ಗೆದ್ದಿದೆ, ಭಾರತ 4 ಪಂದ್ಯಗಳನ್ನು ಗೆದ್ದಿದೆ, ಆದರೆ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಅದೇ ರೀತಿ, ಈಗ ಎರಡನೇ ಟಿ20 ಪಂದ್ಯವೂ ಸುದ್ದಿಯಲ್ಲಿದೆ. ಆದ್ದರಿಂದ ಈ ಬಾರಿಯೂ ಮಳೆಯಾದರೆ ಮುಂದೆನು ಎಂಬುದೇ ಭಾರತ ತಂಡದ ಮುಂದಿರುವ ಪ್ರಶ್ನೆ.

35
ಶೇ.55 ರಷ್ಟು ಮಳೆಯಾಗುವ ಸಾಧ್ಯತೆ!

ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಮಳೆ ಬೀಳುವ ಸಾಧ್ಯತೆ ಶೇ.55 ರಷ್ಟು ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸರಣಿಯ ಮೊದಲ ಪಂದ್ಯವೂ ಮಳೆಯಿಂದಾಗಿ ಡ್ರಾ ಆಗಿತ್ತು. ಈ ಪಂದ್ಯದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಅಕ್ಯೂವೆದರ್ ಭವಿಷ್ಯ ನುಡಿದಿದೆ. ಪಂದ್ಯದ ಆರಂಭದಲ್ಲಿ ಮಳೆ ಬೀಳುವ ಸಾಧ್ಯತೆ ಶೇ.51 ರಷ್ಟು ಮತ್ತು ಪಂದ್ಯದ ಅಂತ್ಯದ ವೇಳೆಗೆ ಮಳೆ ಬೀಳುವ ಸಾಧ್ಯತೆ ಶೇ.60 ರಷ್ಟು ಇದೆ. ಆದ್ದರಿಂದ ವೈಭವ್‌ ಅವಕಾಶ ಪಡೆದರೂ, ಆಡಲಿಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ, ಮಳೆಯಾಗಿದ್ದೆ ನಿಜ ಆದರೆ ವೈಭವ್‌ಗೆ ಕೈಗೆ ಬಂದ ತುತ್ತು ಬಾಯ್‌ಗೆ ಬರಂದತಾಗುತ್ತದೆ.

45
ವಿಶ್ಲೇಷಕರ ಅಂದಾಜೇನು?

ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ. ಕಳೆದ ಮೂರು ಪಂದ್ಯಗಳಿಂದ ಅವರನ್ನು ಬೆಂಚ್‌ನಲ್ಲಿಯೇ ಇರಿಸಲಾಗಿದೆ. ಈ ಬಾರಿ, ಅವರಿಗೆ ಇಂಗ್ಲೆಂಡ್ ವಿರುದ್ಧ ಆಡಲು ಅವಕಾಶ ಸಿಗಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. 

55
2 ಪಂದ್ಯಕ್ಕೆ ಅಭಿಮಾನಿಗಳ ಕಾತುರ

ವೈಭವ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು. ತಮ್ಮ ಚೊಚ್ಚಲ ಪಂದ್ಯದ ಶುಭ ಸುದ್ದಿಯನ್ನು ಎರಡು ಪದಗಳಲ್ಲಿ ನೀಡಿದರು. ವೈಭವ್ ಫೆಬ್ರವರಿ 8 ರಂದು ಟೀಮ್ ಇಂಡಿಯಾದ ಜೆರ್ಸಿಯ ಫೋಟೋ ಸಹ ಅಲ್ಲಿ ಹಂಚಿಕೊಂಡಿದ್ದಾರೆ. ಆದ್ದರಿಂದ ಎಲ್ಲರ ಕಣ್ಣು ಈಗ 2ನೇ ಪಂದ್ಯದ ಮೇಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories