ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿರುವ ಕುಮಾರಸ್ವಾಮಿಯವರು ಸಚಿವ ಪದವಿ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಕುಟುಂಬಸ್ಥರ ಜೊತೆಯಾಗಿ ಶಿರಡಿಗೆ ಭೇಟಿ ನೀಡಿದ್ದಾರೆ.
27
ಕುಮಾರಸ್ವಾಮಿಯವರ ಪುತ್ರ ನಟ ಮತ್ತು ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಕುಂಟುಬ ಸಮೇತರಾಗಿ ಶಿರಡಿ ಶ್ರೀ ಸಾಯಿಬಾಬ ದರ್ಶನ ಪಡೆದಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
37
ಫೋಟೋಗಳನ್ನು ಹಂಚಿಕೊಂಡಿರುವ ನಿಖಿಲ್, ಮಹಾಮಹಿಮರಾದ ಶ್ರೀ ಶಿರಡಿ ಸಾಯಿಬಾಬಾ (Shirdi Saibab) ಅವರ ದರ್ಶನ ಪಡೆದು ಧನ್ಯನಾದೆ.. ಪೂಜ್ಯ ತಂದೆ, ತಾಯಿ ಅವರು ಮತ್ತು ನನ್ನ ಧರ್ಮಪತ್ನಿ, ಪುತ್ರನ ಜೊತೆಯಲ್ಲಿ ಬಾಬಾ ದರ್ಶನ ಸಿಕ್ಕಿದ್ದು ನನ್ನ ಮಹಾಭಾಗ್ಯವೇ ಹೌದು. ಸರ್ವರಿಗೂ ಒಳ್ಳೆಯದಾಗಲಿ ಎಂದು ಆ ದೈವ ಸ್ವರೂಪನಲ್ಲಿ ಬೇಡಿಕೊಂಡೆ ಎಂದು ಬರೆದುಕೊಂಡಿದ್ದಾರೆ.
47
ಸಚಿವರಾದ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಪತ್ನಿ ರೇವತಿ ನಿಖಿಲ್ ಮತ್ತು ಪುತ್ರ ಅವ್ಯಾನ್ ದೇವ್ ಜೊತೆಯಾಗಿ ಸಾಯಿಬಾಬನ ದರ್ಶನ ಪಡೆಯುವ ಮತ್ತು ಪ್ರಸಾದ ಸ್ವೀಕರಿಸುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
57
ಕುಮಾರಸ್ವಾಮಿಯ ಪೂರ್ತಿ ಕುಟುಂಬವನ್ನು ಜೊತೆಯಾಗಿ ನೋಡಿ ಸಂಭ್ರಮಿಸಿರುವ ಅಭಿಮಾನಿಗಳು ಬಾಬಾರ ಆಶೀರ್ವಾದ ಮತ್ತು ಕರ್ನಾಟಕದ ಜನತೆಯ ಹಾರೈಕೆ ಸದಾ ನಿಮ್ಮೊಂದಿಗಿರಲೆಂದು ಆಶಿಸುತ್ತೇವೆ. ಮತ್ತೊಮ್ಮೆ ಪುನಃ ನಿಮ್ಮ ನೇತೃತ್ವದಲ್ಲಿ ಪಕ್ಷವನ್ನು ಸಂಘಟಿಸಿ, ನಾವು ನಿಮ್ಮೊಂದಿಗೆ ಸದಾ ಇದ್ದೇವೆ ಎಂದು ಹಾರೈಸಿದ್ದಾರೆ.
67
ನಿಖಿಲ್ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಜನಪ್ರಿಯತೆ ಪಡೆದಿದ್ದಾರೆ. ಇವರಿಗೆ 966K ಫಾಲೋವರ್ಸ್ ಕೂಡ ಇದ್ದಾರೆ. ನಿಖಿಲ್ ಅಭಿಮಾನಿಗಳು ಈ ಸುಂದರ ಕುಟುಂಬ ನೋಡಿ ಸಂತೋಷಪಟ್ಟಿದ್ದು, ಈ ಜೋಡಿ ನೂರು ಕಾಲ ಜೊತೆಯಾಗಿ ಇರಲಿ ಎಂದು ಹಾರಸಿದ್ದಾರೆ.
77
ಇನ್ನು ತಿಂಗಳ ಹಿಂದೆ ಕೇಂದ್ರದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.